Saturday, September 29, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 29

ಇಂದಿನ ಇತಿಹಾಸ History Today ಸೆಪ್ಟೆಂಬರ್ 29
2018: ನ್ಯೂಯಾರ್ಕ್: ಭಾರತ -ಪಾಕಿಸ್ತಾನದ ಮಧ್ಯೆ ಮಾತುಕತೆ ಸ್ಥಗಿತಕ್ಕೆ ಪಾಕಿಸ್ತಾನದ ವರ್ತನೆಯೇ ಕಾರಣ
ಎಂಬುದಾಗಿ ವಿಶ್ವ ಸಂಸ್ಥೆ ಮಹಾಧಿವೇಶನದಲ್ಲಿ ಹರಿಹಾಯ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಮಾತುಕತೆ ಪ್ರಕ್ರಿಯೆಯನ್ನು ನಾವು ಹಾನಿ ಪಡಿಸುತ್ತಿದ್ದೇವೆ ಎಂದು ನಮ್ಮ ವಿರುದ್ಧ ಆಪಾದನೆ ಮಾಡಲಾಗುತ್ತಿದೆ. ಇದೊಂದು ಅಪ್ಪಟ ಸುಳ್ಳು. ಮಾತುಕತೆಯು ಬಹುತೇಕ ಸಂಕೀರ್ಣ ವಿವಾದಗಳನ್ನು ಇತ್ಯರ್ಥಗೊಳಿಸಲು ತರ್ಕಬದ್ಧ ಮಾರ್ಗ ಎಂಬುದಾಗಿ ನಾವು ನಂಬುತ್ತೇವೆ. ಪಾಕಿಸ್ತಾನದ ಜೊತೆ ಹಲವಾರು ಬಾರಿ ಮಾತುಕತೆ ಆರಂಭಿಸಲಾಯಿತು. ಅದು ಸ್ಥಗಿತಗೊಂಡಿದ್ದರೆ, ಅದು ಅವರ ವರ್ತನೆಯ ಪರಿಣಾಮವಾಗಿ ಮಾತ್ರಎಂದು ಸುಷ್ಮಾ ಹೇಳಿದರು.  ’ಹಫೀಜ್ ಸಯೀದ್ ರ್‍ಯಾಲಿಗಳನ್ನು ನಡೆಸುತ್ತಾನೆ, ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ ಮತ್ತು ಭಾರತಕ್ಕೆ ಸವಾಲು ಹಾಕುತ್ತಾನೆ. ಆದರೆ ವಿಶ್ವಾದ್ಯಂತದ ರಾಷ್ಟ್ರಗಳು ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಒಪ್ಪಿಕೊಂಡಿವೆ ಮತ್ತು ತಾವು ನೀಡಿದ ನೆರವು ಭಯೋತ್ಪಾದನೆಗೆ ಬಳಕೆಯಾಗುತ್ತಿದೆಯೇ ಎಂಬ ಬಗ್ಗೆ ನಿಗಾ ಇಟ್ಟಿವೆ ಎಂಬುದು ಒಳ್ಳೆಯ ವಿಚಾರಎಂದು ಅವರು ನುಡಿದರುನ್ಯೂಯಾರ್ಕ್‌ನಲ್ಲಿ ಸಂಭವಿಸಿದ /೧೧ರ ಭಯೋತ್ಪಾದಕ ದಾಳಿ ಮತ್ತು ಮುಂಬೈಯಲ್ಲಿ ಸಂಭವಿಸಿದ ೨೬/೧೧ರ ಭಯೋತ್ಪಾದಕ ದಾಳಿಗಳು ವಿಶ್ವಾದ್ಯಂತ ಭಯೋತ್ಪಾದನೆ ಹೇಗೆ ಹರಡುತ್ತಿದೆ ಎಂಬುದನ್ನು ಸಾಬೀತು ಪಡಿಸಿವೆ. ನಮ್ಮ ದುರದೃಷ್ಟ ಏನೆಂದರೆ ನಮ್ಮ ನೆರೆಹೊರೆಯವರೇ ನಮ್ಮ ರಾಷ್ಟ್ರದಲ್ಲಿ ಭಯೋತ್ಪಾದನೆಯನ್ನು ಹರಡುತ್ತಾರೆ ಮತ್ತು ತಮ್ಮ ಪಾತ್ರವನ್ನು ನಿರಾಕರಿಸುತ್ತಾರೆ ಎಂದು ಸುಷ್ಮಾ ಟೀಕಿಸಿದರು. ಮಾನವ ಹಕ್ಕುಗಳ ಮೇಲೆ ಭಯೋತ್ಪಾದಕನಿಗಿಂತ ದೊಡ್ಡ ಅತಿಕ್ರಮಣಕಾರರು ಯಾರು ಇರಲು ಸಾಧ್ಯವಿದೆ? ಎಂದು ಪ್ರಶ್ನಿಸಿದ ಸುಷ್ಮಾ, ಬೇರೆ ಮಾರ್ಗಗಳ ಮೂಲಕ ಯುದ್ಧದ ಅನ್ವೇಷಣೆಯಲ್ಲಿ ತೊಡಗಿ ಮುಗ್ಧ ಮಾನವ ಜೀವಗಳನ್ನು ಬಲಿತೆಗೆದುಕೊಳ್ಳುತ್ತಿರುವವರು ಅಮಾನವೀಯ ವರ್ತನೆಯ ರಕ್ಷಕರಾಗುತ್ತಾರೆ, ಮಾನವ ಹಕ್ಕುಗಳ ರಕ್ಷಕರಲ್ಲ ಎಂದು ಹೇಳಿದರು. ಪಾಕಿಸ್ತಾನವು ಕೊಲೆಗಾರರನ್ನು ವೈಭವೀಕರಿಸುತ್ತದೆ, ಮುಗ್ಧರ ರಕ್ತ ಹರಿಯುವುದನ್ನು ನೋಡಲು ಅದು ನಿರಾಕರಿಸುತ್ತದೆ ಎಂದು ಸುಷ್ಮಾ ಸ್ವರಾಜ್ ನುಡಿದರುಪಾಕಿಸ್ತಾನವು ಇಬ್ಬಗೆ ಆಟ (ಡಬ್ಬಲ್ ಗೇಮ್) ಆಡುತ್ತಿದೆ ಎಂದು ಆಪಾದಿಸಿದ ಸುಷ್ಮಾ ಸ್ವರಾಜ್, ಒಂದೆಡೆಯಲ್ಲಿ ಪಾಕಿಸ್ತಾನದ ನೂತನ ಸರ್ಕಾರ ಭಾರತವನ್ನು ಮಾತುಕತೆಗೆ ಆಹ್ವಾನಿಸುತ್ತದೆ ಮತ್ತು ಇನ್ನೊಂದೆಡೆಯಲ್ಲಿ ಭಾರತದ ಮೂವರು ಗಡಿ ಭದ್ರತಾ ಪಡೆ (ಬಿಎಸ್ ಎಫ್) ಯೋಧರನ್ನು ಕೊಂದಿದೆ. ಕಪಟಗಾರಿಕೆಯ ದೂಳು ಎರಚುವ ಚಾಳಿಯನ್ನು ಪಾಕಿಸ್ತಾನ ಹೊಂದಿದೆ ಎಂದು ಅವರು ನುಡಿದರು. ೧೯೯೬ರಲ್ಲಿ ಭಾರತವು ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತು ಸಮಗ್ರ ಸಮಾವೇಶದ ಕರಡು ದಾಖಲೆ ರೂಪಿಸುವ ಪ್ರಸ್ತಾಪವನ್ನು ವಿಶ್ವಸಂಸ್ಥೆಯ ಮುಂದಿಟ್ಟಿತು. ಇಂದಿನವರೆಗೂ ಇದು ಕರಡು ರೂಪದಲ್ಲಿಯೇ ಉಳಿದಿದೆ, ಏಕೆಂದರೆ ನಾವು ಸಾಮಾನ್ಯ ಭಾಷೆಯನ್ನು ಒಪ್ಪುವುದಿಲ್ಲ. ಒಂದೆಡೆಯಲ್ಲಿ ನಾವು ಭಯೋತ್ಪಾದನೆ ವಿರುದ್ಧ ಹೋರಾಡಬಯಸುತ್ತೇವೆ, ಮತೊಂದೆಡೆಯಲ್ಲಿ ನಮಗೆ ಅದನ್ನು ವಿವರಿಸಲು ಆಗುತ್ತಿಲ್ಲ ಎಂದು ಸುಷ್ಮಾ ಹೇಳಿದರು. ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ತುರ್ತು ಬದಲಾವಣೆಗಳನ್ನು ಆದಷ್ಟೂ ಶೀಘ್ರ ನಾವು ತರಬೇಕಾದ ಅಗತ್ಯವಿದೆ. ಇಡೀ ಜಗತ್ತು ಒಂದು ಕುಟುಂಬ ಎಂಬುದಾಗಿ ಭಾರತ ನಂಬುತ್ತದೆ. ವಿಶ್ವಸಂಸ್ಥೆಯನ್ನು ಕೂಡಾ ಕುಟುಂಬದಂತೆಯೇ ಪ್ರೀತಿ, ಅನುಕಂಪ ಮತ್ತು ಹೊಂದಾಣಿಕೆಗಳೊಂದಿಗೆ ನಡೆಸಿಕೊಂಡು ಹೋಗಬೇಕು ಎಂದು ನಾನು ನಂಬುತ್ತೇನೆ ಎಂದು ಸುಷ್ಮಾ ನುಡಿದರು. ಮಹಾತ್ಮ ಗಾಂಧಿಯವರ ಅಹಿಂಸೆ ಮತ್ತು ಪ್ರೇಮದ ಆದರ್ಶಗಳನ್ನು ಉಲ್ಲೇಖಿಸಿದ ಸುಷ್ಮಾ, ವಿಶ್ವಸಂಸ್ಥೆಯ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಇವು ಅತ್ಯಗತ್ಯ ಅಂಶವಾಗಬೇಕು ಎಂದು ಹೇಳಿದರು.ಕುಟುಂಬ ತತ್ವದ ಅಡಿಯಲ್ಲಿ ವಿಶ್ವಸಂಸ್ಥೆಯನ್ನು ಮುನ್ನಡೆಸಬೇಕು. ಕುಟುಂಬವನ್ನು ಮುನ್ನಡೆಸುವುದು ಅನುರಾಗದಿಂದ, ವ್ಯಾಪಾರದಂತೆ ಅಲ್ಲ. ವಿಶ್ವಸಂಸ್ಥೆಯಲ್ಲಿ ಇದು ನಾನು ಮತ್ತು ನನ್ನದು ಎಂದು ಹೇಳಬಾರದು, ಪ್ರತಿಯೊಂದು ರಾಷ್ಟ್ರದ ಗುರಿಯನ್ನೂ ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಸುಷ್ಮಾ ನುಡಿದರು. ನಮ್ಮ ಯುಗದ ಅತ್ಯಂತ ದೊಡ್ಡ ಸವಾಲು ಭಯೋತ್ಪಾದನೆ ಮತ್ತು ಪರಿಸರ ಬದಲಾವಣೆಯಿಂದ ಅಸ್ತಿತ್ವಕ್ಕೆ ಉಂಟಾಗಿರುವ ಬೆದರಿಕೆ ಎಂದು ಭಾರತದ ವಿದೇಶಾಂಗ ವ್ಯವಹಾರ ಸಚಿವೆ ಬಣ್ಣಿಸಿದರು. ಪರಿಸರವನ್ನು ನಾಶಪಡಿಸಿದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹವಾಮಾನ ಬದಲಾವಣೆ ವಿರುದ್ಧ ಹೋರಾಡುತ್ತಿರುವ ಸಣ್ಣ ರಾಷ್ಟ್ರಗಳಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲು ಮುಂದೆ ಬರುವ ಅಗತ್ಯ ಇದೆ ಎಂದು ಸುಷ್ಮಾ ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೃದಯದಲ್ಲಿ ಪರಿವರ್ತನೆಯ ನೋಟದ ಮೂಲಭೂತ ಕಲ್ಪನೆ ಇದೆ ಎಂದು ನುಡಿದ ಸುಷ್ಮಾ, ಭಾರತ ಸರ್ಕಾರದ ಜನಧನ್ ಯೋಜನೆ, ಆಯುಷ್ಮಾನ್ ಭಾರತ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆಯಂತಹ ಕಲ್ಯಾಣ ಕಾರ್‍ಯಕ್ರಮಗಳನ್ನು ಉಲ್ಲೇಖಿಸಿದರು. ನ್ಯೂಯಾರ್ಕಿನಲ್ಲಿ ಸಾರ್ಕ್ ವಿದೇಶಾಂಗ ಸಚಿವರ ಸಚಿವರ ಸಭೆಯ ಸಂದರ್ಭದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಜೊತೆಗಿನ ಭಾರತ ವಿದೇಶಾಂಗ ಸಚಿವರ ಮಾತುಕತೆಯನ್ನು ಮುನ್ನ ಭಾರತ ರದ್ದು ಪಡಿಸಿತ್ತು. ತಮ್ಮ ಭಾಷಣ ಮುಗಿದ ತತ್ ಕ್ಷಣವೇ ಖುರೇಶಿ ಭಾಷಣವನ್ನು ಆಲಿಸದೆ ಹೊರಟು ಹೋಗುವ ಮೂಲಕ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗುವಂತೆ ಮಾಡಿದ್ದರು. ಘಟನೆಯನ್ನು ಖುರೇಶಿ ಅವರು ವೈಯಕ್ತಿಕ ಹಗೆತನವನ್ನಾಗಿ ಮಾರ್ಪಡಿಸಿಸುಷ್ಮಾ ಸ್ವರಾಜ್ ಅವರು ಪೇಲವವಾಗಿ ಕಾಣುತ್ತಿದ್ದರು, ಅಸ್ವಸ್ಥರಂತೆ ಕಾಣುತ್ತಿದ್ದರುಎಂಬುದಾಗಿ ಬಣ್ಣಿಸಿ, ಭಾರತವು ಚುನಾವಣೆಯಂತಹ ಆಂತರಿಕ ಒತ್ತಡಗಳ ಪರಿಣಾಮವಾಗಿ ಮಾತುಕತೆ ರದ್ದು ಪಡಿಸಿದೆ ಎಂದು ದೂರಿದ್ದರು.
2018: ನ್ಯೂಯಾರ್ಕ್: ನ್ಯೂಯಾರ್ಕ್ ನಲ್ಲಿ ಸಾರ್ಕ್ ಸಭೆಯ ಸಂದರ್ಭದಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಅವರಿಂದ ರಾಜತಾಂತ್ರಿಕ ಮುಖಭಂಗಕ್ಕೆ ಒಳಗಾದ ಪಾಕಿಸ್ತಾನಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಅವರು ಅದನ್ನು ವ್ಯಕ್ತಿಗತ ಸೇಡಾಗಿ ಮಾರ್ಪಡಿಸಿ, ಸುಷ್ಮಾ ಅವರ ಬಗ್ಗೆ ಬಹಿರಂಗವಾಗಿ ಅನುಚಿತ ಮಾತುಗಳನ್ನು ಆಡಿದರು. ‘ನಾನು ವಿದೇಶಾಂಗ ಸಚಿವರನ್ನು ಕೊಠಡಿಯಲ್ಲಿ ನೋಡಿದಾಗ ಅವರು ಪೇಲವವಾಗಿದ್ದಂತೆ ನನಗೆ ಕಾಣಿಸಿತುಎಂದು ಖುರೇಶಿ ನಗುತ್ತಾ ಹೇಳಿದರು. ‘ಅವರು ತುಂಬಾ ಚಿಂತಿತರಾಗಿದ್ದಂತೆ ಕಾಣಿಸಿತು. ಅವರನ್ನು ಕಂಡು ನಾವು ಪರಸ್ಪರ ನಗಬಹುದು ಎಂದು ನಾನು ಬಯಸಿದ್ದೆಎಂದು ಅವರು ನುಡಿದರು. ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಸಚಿವ ಮಟ್ಟದ ಸಭೆಯಲ್ಲಿ ಸುಷ್ಮಾ ಸ್ವರಾಜ್ ಅವರು ಸಂಭಾಷಣೆಗೆ ನಿರಾಕರಿಸಿ, ತಮ್ಮ ಭಾಷಣ ಮುಗಿಸಿ, ಖುರೇಶಿ ಭಾಷಣ ಆಲಿಸಲು ನಿಲ್ಲದೆ ಹೊರಟುಹೋದ ಒಂದು ದಿನದ ಬಳಿಕ ಏಷ್ಯಾ ಸೊಸೈಟಿಯಲ್ಲಿ ಖುರೇಶಿ ಮಾತನಾಡುತ್ತಿದ್ದರು.  ಭಾಷಣ ಮಾಡುವಾಗ ದೊಡ್ಡ ಸಂಖ್ಯೆಯಲ್ಲಿದ್ದ ಪಾಕಿಸ್ತಾನ ಮೂಲದ ಮಂದಿ ಖುರೇಶಿ ನಗುವಿನಲ್ಲಿ ಅವರ ಜೊತೆಗೂಡಲಿಲ್ಲ. ಉತ್ಪ್ರೇಕ್ಷಿತ ಅಂಗಸನ್ನೆಗಳೊಂದಿಗೆ ಮಾತನಾಡಿದ ಖುರೇಶಿ, ’ಆಕೆ ಅತ್ಯಂತ ಒತ್ತಡಕ್ಕೆ ಒಳಗಾಗಿದ್ದುದನ್ನು ನಾನು ಕಂಡೆ. ಹೊರಟು ಹೋಗುವಾಗ ಅವರು ಮಾಧ್ಯಮ ಜೊತೆ ಮಾತನಾಡಲೂ ಬಯಸಲಿಲ್ಲ. ನನಗೇನೂ ಸಮಸ್ಯೆ ಇಲ್ಲ, ಆದರೆ ಅವರು ಒತ್ತಡಕ್ಕೆ ಒಳಗಾಗಿದ್ದುದನ್ನು ನಾನು ಕಾಣಬಲ್ಲವನಾಗಿದ್ದೆ, ಅವರ ಮೇಲಿದ್ದ ರಾಜಕೀಯ ಒತ್ತಡವನ್ನು ನಾನು ಕಾಣಬಲ್ಲವನಾಗಿದ್ದೆ. ರಾಜಕೀಯ, ಬೇರೇನೂ ಅಲ್ಲ, ರಾಜಕೀಯ, ದೇಶದೊಳಗಿನ ರಾಜಕೀಯಎಂದು ಹೇಳಿದರು.  ಹಿಂದಿನ ದಿನ  ಸಾರ್ಕ್ ಸಭೆಯ ಬಳಿಕ ಅವರು ಪಾಕಿಸ್ತಾನಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರುಆಕೆ ಅಸ್ವಸ್ಥರಾಗಿದ್ದರುಎಂದು ಹೇಳಿದ್ದುದಾಗಿ ಸಮಾ ಟಿವಿ ವರದಿ ಮಾಡಿತು. ಏನಿದ್ದರೂ, ಸುಷ್ಮಾ ಸ್ವರಾಜ್ ಅವರು ಸಾರ್ಕ್ ವಿದೇಶಾಂಗ ಸಚಿವರ ಸಭೆಯಿಂದ ಹೊರನಡೆದ ಬಳಿಕ, ಜಪಾನ್ ವಿದೇಶಾಂಗ ಸಚಿವ ತಾರೊ ಕೊನೊ ಮತ್ತು ಸಿರಿಯಾದ ಉಪ ಪ್ರಧಾನಿ ವಾಲಿದ್ ಮ್ಯುಯಲ್ಲೆಮ್ ಅವರೊಂದಿಗೆ ತಮ್ಮ ಪೂರ್ವ ನಿಗದಿತ ಸಭೆಗಳನ್ನು ನಡೆಸಿದ್ದರು. ಇತ್ತೀಚೆಗೆ ಪಾಕಿಸ್ತಾನ ನೂತನ ಚುನಾಯಿತ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆ ಮಹಾಧಿವೇಶನ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಮತ್ತು ಖರೇಶಿ ಮಾತುಕತೆಗೆ ಮಾಡಿದ್ದ ಮನವಿಯನ್ನು ಭಾರತ ಮೊದಲಿಗೆ ಒಪ್ಪಿತ್ತು. ಏನಿದ್ದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಭಯೋತ್ಪಾದಕರು ಹತ್ಯೆ ಗೈದುದು ಮತ್ತು ಪಾಕಿಸ್ತಾನವು ಉಗ್ರಗಾಮಿ ಬುರ್ಹಾನ್ ವನಿಯನ್ನು ಗೌರವಿಸಿ ಅಂಚೆ ಚೀಟಿ ಬಿಡುಗಡೆ ಮಾಡಿದ್ದನ್ನು ಅನುಸರಿಸಿ ಭಾರತವು ಭಾರತ-ಪಾಕ್ ನಡುವಣ ಮಾತುಕತೆಯನ್ನು ಒಂದು ದಿನದ ಬಳಿಕ ರದ್ದು ಪಡಿಸಿತ್ತು.  ಭಯೋತ್ಪಾದಕ ಕೃತ್ಯಗಳು ಮುಂದುವರೆಯುತ್ತಿರುವಾಗ ಪಾಕಿಸ್ತಾನದ ಜೊತೆಗೆ ರಾಜತಾಂತ್ರಿಕ ಬಾಂಧವ್ಯ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಭಾರತ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಅವರು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಮಹಾಧಿವೇಶನ ಕಾಲದಲ್ಲಿ ಖುರೇಶಿ ಅವರ ಜೊತೆಗೆ ಅನೌಚಾರಿಕ ಮಾತುಕತೆಗೂ ಖಂಡತುಂಡವಾಗಿ ನಿರಾಕರಿಸಿದ್ದರು. ’ಮಾತುಕತೆ ಏಕೆ ನಡೆಯಲಿಲ್ಲ?’ ಎಂಬ ಪಾಕ್ ಪತ್ರಕರ್ತರೊಬ್ಬರ ಪ್ರಶ್ನೆಗೆಅವರು ಏಕೆ ನಿರಾಸಕ್ತರಾಗಿದ್ದಾರೆ? ಸರಳ, ಸಾರ್, ರಾಜಕೀಯ, ಚುನಾವಣೆಗಳು, ಚುನಾವಣೆಗಳು, ಮತದಾರರ ಭಯ. ಅವರು ಲೋಲಕವನ್ನು (ಪೆಂಡ್ಯುಲಮ್) ಒಂದೇ ಬದಿಗೆ ಎಷ್ಟು ಎಳೆದಿದ್ದಾರೆ ಎಂದರೆ ಅದನ್ನು ಹಿಂದಕ್ಕೆ ತರಲು ಅವರಿಗೆ ಕಷ್ಟವಾಗುತ್ತಿದೆಎಂದು ಖುರೇಶಿ ನುಡಿದರು.  ’ಚುನಾವಣೆಗಳು ಹತ್ತಿರದಲ್ಲಿ ಇರುವುದರಿಂದ ಮಾತುಕತೆ ತಮಗೆ ತಿರುಗುಬಾಣ (ಬೂಮರಾಂಗ್) ಆಗಬಹುದು ಎಂದು ಅವರು ಭಾವಿಸಿದ್ದಾರೆ. ಅವರು ಮಾತುಕತೆಗೆ ನಾಚಿಕೊಳ್ಳಲು ಇದೇ ಕಾರಣಎಂದು ಖುರೇಶಿ ಹೇಳಿದರು.  ಮಾತುಕತೆಗೆ ಪಾಕಿಸ್ತಾನ ಯಾವಾಗಲೂ ಸಿದ್ಧವಿದೆ. ಪ್ರದೇಶವು ಅಭಿವೃದ್ಧಿ ಹೊಂದಬೇಕು ಎಂದು ನಾವು ಬಯಸುತ್ತೇವೆ ಎಂದು ಅವರು ನುಡಿದರು. ಇಮ್ರಾನ್ ಖಾನ್ ಅವರನ್ನು ಅಧಿಕಾರಕ್ಕೆ ತಂದಿರುವ ಪಾಕಿಸ್ತಾನದ ಚುನಾವಣೆ ರಾಷ್ಟ್ರಕ್ಕೆ ಒಂದು ತಿರುವು. ಭಯೋತ್ಪಾದನೆಯನ್ನು ದಮನಿಸಬೇಕು ಎಂಬುದು ಪಾಕಿಸ್ತಾನದ ಜನರ ಇಚ್ಛೆ. ಉಗ್ರವಾದ ನಮಗೆ ಅಗತ್ಯವಿಲ್ಲ. ಭಯೋತ್ಪಾದನೆಯು ಬೇರಾರಿಗಿಂತಲೂ ನಮಗೇ ಹೆಚ್ಚು ತೊಂದರೆ ಮಾಡಿದೆ ಎಂದು ಖುರೇಶಿ ಹೇಳಿದರು.
2018: ಪಲು: ಕೇಂದ್ರ ಇಂಡೋನೇಷ್ಯದ ಸುಲವೇಸಿ ದ್ವೀಪದಲ್ಲಿ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿ ಅಲೆಗೆ ಸುಮಾರು ೪೦೦ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ರಾತ್ರಿ ಬೆಳಗಾಗುವುದರೊಳಗೆ ,೫೦,೦೦೦ಕ್ಕೂ ಹೆಚ್ಚು ಮಂದಿ ಮನೆಮಾರು ಕಳೆದುಕೊಂಡು ಉಟ್ಟ ಅರೆಬರೆಬರೆ ಬಟ್ಟೆಯೊಂದಿಗೆ ಸಮುದ್ರತೀರದಲ್ಲಿ ನಿರಾಶ್ರಿತರಾಗಿ ದಿಕ್ಕುಗಾಣದೆ ಕುಳಿತತುಕೊಳ್ಳುವಂತಾಯಿತು. ಗಾಯಗೊಂಡಿರುವ ನೂರಾರು ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಧಾವಿಸುತ್ತಿದ್ದು, ನೈಸರ್ಗಿಕ ಪ್ರಕೋಪಕ್ಕೆ ತುತ್ತಾಗಿರುವ ಪ್ರದೇಶದಲ್ಲಿ ರಕ್ಷಣೆಗಾರರು ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಹರ ಸಾಹಸ ಪಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. ದುರಂತದಲ್ಲಿ ಈವರೆಗೆ ೩೮೪ ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ನೈಸರ್ಗಿಕ ವಿಕೋಪ ಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದರು. ಮೃತರಲ್ಲಿ ಹೆಚ್ಚಿನ ಮಂದಿ ಸುನಾಮಿ ಅಪ್ಪಳಿಸಿದ ಪಲು ನಗರದ ನಿವಾಸಿಗಳು. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಅವರು ನುಡಿದರು. ಕೇಂದ್ರ ಇಂಡೋನೇಷ್ಯದ ನಗರಗಳಲ್ಲಿನ ಸೇತುಗೆಗಳು, ಕಟ್ಟಡಗಳು ಪ್ರಬಲ ಭೂಕಂಪದ ಬಳಿಕ ದ್ವೀಪಕ್ಕೆ ಅಪ್ಪಳಿಸಿದ . ಮೀಟರ್ (ಐದು ಅಡಿ) ಎತ್ತರದ ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿವೆ. ರಸ್ತೆಗಳು, ಸಂಪರ್ಕ ಸಂಪೂರ್ಣ ಸ್ಥಗಿತಗೊಂಡ ಪರಿಣಾಮವಾಗಿ ನಿರ್ವಸಿತರನ್ನು ತಲುಪುವುದೂ ರಕ್ಷಣೆಗಾರರಿಗೆ ಕಷ್ಟವಾಗಿದೆ ಎಂದು ವರದಿಗಳು ಹೇಳಿದವು. ಸುನಾಮಿ ಅಪ್ಪಳಿಸಿದ ಒಂದು ದಿನದ ಬಳಿಕ ,೫೦,೦೦೦ಕ್ಕೂ ಹೆಚ್ಚು ಮಂದಿ ಉಟ್ಟ ಅರೆಬರೆ ಬಟ್ಟೆಗಳೊಂದಿದೆ ಸಮುದ್ರ ತಟದಲ್ಲಿ ಜೀವಭಯದೊಂದಿಗೆ ಕಾಲ ಕಳೆದರು. ಹಿಂದಿನ ಸಂಜೆ ಆರಂಭವಾಗಬೇಕಾಗಿದ್ದ ಕರಾವಳಿ ಉತ್ಸವಕ್ಕೆ ಸಿದ್ಧತೆ ನಡೆಸುತ್ತಿದ್ದ ನೂರಾರು ಮಂದಿಯ ಗತಿ ಏನಾಗಿದೆ ಎಂಬುದೇ ಗೊತ್ತಾಗಲಿಲ್ಲ.  ಆಸ್ಪತ್ರೆಗಳು ಗಾಯಾಳುಗಳಿಂದ ಗಿಜಿಗುಡುತ್ತಿದೆ. ಬಹಳಷ್ಟು ಮಂದಿಗೆ ಆಸ್ಪತ್ರೆ ಹೊರಗೆ ಬಯಲಿನಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ದುರಂತದಲ್ಲಿ ಬದುಕಿ ಉಳಿದವರು ಮೃತರ ಅವಶೇಷ ಪತ್ತೆಗೆ ನೆರವಾಗುತ್ತಿದ್ದಾರೆ ಎಂದು ವರದಿಗಳು ಹೇಳಿದವು. ವ್ಯಕ್ತಿಯೊಬ್ಬ ಸಂಪೂರ್ಣ ಕೆಸರು ಮೆತ್ತಿಕೊಂಡಿದ್ದ ಪುಟ್ಟ ಮಗುವಿನ ಶವ ಹಿಡಿದುಕೊಂಡು ನಿಂತಿದ್ದುದು ಕರುಳು ಹಿಂಡುವಂತಿತ್ತು. ಹಿಂದಿನ  ರಿಕ್ಟರ್ ಮಾಪಕದಲ್ಲಿ . ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದನ್ನು ಅನುಸರಿಸಿ ಇಂಡೋನೇಷ್ಯ ಸರ್ಕಾರವು ಸುನಾಮಿ ಎಚ್ಚರಿಕೆ ನೀಡಿತ್ತು. ಆದರೆ ಅರ್ಧ ಗಂಟೆಯ ಬಳಿಕ ಸುನಾಮಿ ಎಚ್ಚರಿಕೆಯನ್ನು ಹಿಂತೆಗೆದುಕೊಂಡಿತ್ತು. ಅದರ ಬೆನ್ನಲ್ಲೇ ರಿಕ್ಟರ್ ಮಾಪಕದಲ್ಲಿ . ತೀವ್ರತೆಯ ಭೂಕಂಪ ಸೇರಿದಂತೆ ಭೂಕಂಪದ ಪ್ರಬಲ ಕಂಪನಗಳ ಪರಿಣಾಮವಾಗಿ ಸಮುದ್ರದಲ್ಲಿ ಎದ್ದ ರಕ್ಕಸ ಅಲೆಗಳು ದ್ವೀಪದಲ್ಲಿನ ಮನೆಗಳನ್ನು ಕೊಚ್ಚಿಕೊಂಡು ಹೋದವು ಎಂದು ವರದಿ ತಿಳಿಸಿತು. ಕೇಂದ್ರ ಸುಲವಾಸಿ ಪ್ರಾಂತ್ಯದ ರಾಜಧಾನಿ ಪಲು ಮತ್ತು ಸಣ್ಣ ನಗರ ದೊಂಗ್ಗಲಗಳಿಗೆ ಸುನಾಮಿ ಅಲೆಗಳು ಅಪ್ಪಳಿಸಿದ್ದವು ಎಂದು ವರದಿಗಳು ಹೇಳಿದವು. ಭೂಕಂಪದ ಕೇಂದ್ರ ಬಿಂದು ೮೦ ಕಿಮೀ ದೂರದಲ್ಲಿತ್ತು ಎನ್ನಲಾಗಿದ್ದು, ವಾಹನ ನಿಲುಗಡೆ ರ್‍ಯಾಂಪ್ ಒಂದರಿಂದ ಚಿತ್ರಿಕರಿಸಿದ ವಿಡಿಯೋ ದೃಶ್ಯಾವಳಿಯಲ್ಲಿ ದೈತ್ಯ ಅಲೆಗಳು ಹಲವಾರು ಕಟ್ಟಡಗಳನ್ನು ನೆಲಸಮ ಮಾಡಿದ್ದು ಮತ್ತು ದೊಡ್ಡ ಮಸೀದಿಯೊಂದು ಪ್ರವಾಹದಲ್ಲಿ ಸಿಲುಕಿರುವುದು ಕಂಡು ಬಂದಿತು. ಭೂಕಂಪದ ಬೆನ್ನಿಗೇ ಅಪ್ಪಳಿಸಿದ ಸುನಾಮಿ ಅಲೆಗಳು ಕಾರು, ಮನೆ, ವಸ್ತುಗಳನ್ನು ಕೊಚ್ಚಿಕೊಂಡು ಹೋದವು. ಹಲವರು ಮರಗಳನ್ನು ಏರಿ ಪಾರಾಗಿದ್ದಾರೆ ಎಂದು ವಿಕೋಪ ಕೇಂದ್ರದ ವಕ್ತಾರ ಸುತೋಪಿ ಪುರ್ವೊ ಹೇಳಿದರು. ಗಂಟೆಗೆ ೮೦೦ ಕಿಮೀ ವೇಗದಲ್ಲಿ  ನುಗ್ಗಿದ ಸುನಾಮಿ ಅಲೆಗಳು ಪೂರ್ಣ ನಗರವನ್ನೇ ನಾಶಗೊಳಿಸಿದೆ ಎಂದು ಅವರು ಹೇಳಿದರು. ಈದಿನವೂ ಪಲು ನಗರದಲ್ಲಿ ಕಂಪನಗಳು ಸಂಭವಿಸಿದ್ದು, ಜನ ಇನ್ನಷ್ಟು ಬೆಚ್ಚಿದ್ದಾರೆ. ೨೦೦೪ರಲ್ಲಿ ರಿಕ್ಟರ್ ಮಾಪಕದಲ್ಲಿ . ತೀವ್ರತೆಯ ಭೂಕಂಪ ಸುಮಾತ್ರಾ ದ್ವೀಪದಲ್ಲಿ ಸಂಭವಿಸಿ ಸುಮಾರು .೨೭ ಲಕ್ಷ ಜನ ಸಾವನ್ನಪ್ಪಿದ್ದರು.
2018: ನವದೆಹಲಿ: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಅಕ್ರಮ ಆಸ್ತಿ ಪ್ರಕರಣದಲ್ಲಿ ಖುಲಾಸೆ ಗೊಳಿಸಿದ್ದರ ವಿರುದ್ಧ ಹಾಗೂ ಅಕ್ರಮ ಆಸ್ತಿ ಪ್ರಕರಣದಲ್ಲಿ ವಿಧಿಸಲಾದ ೧೦೦೦ ಕೋಟಿ ರೂಪಾಯಿ ದಂಡ ವಸೂಲಿಗೆ ಅವಕಾಶ ಕೋರಿ ಸಲ್ಲಿಸಲಾದ ಮೇಲ್ಮನವಿ ರದ್ದು ವಿರುದ್ಧ ಕರ್ನಾಟಕ ರಾಜ್ಯವು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತು. ಜಯಲಲಿತಾ ಅವರು ೨೦೧೬ರ ಡಿಸೆಂಬರ್ ೫ರಂದು ನಿಧನರಾಗಿದ್ದರು. ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್ ಹಾಗೂ ಮದನ್ ಬಿ. ಲೋಕುರ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಕರ್ನಾಟಕ ರಾಜ್ಯದ  ಕ್ಯುರೇಟಿವ್ ಅರ್ಜಿಯನ್ನು ವಜಾಗೊಳಿಸಿತು. ಕ್ಯುರೇಟಿವ್  ಅರ್ಜಿಗೆ ಯಾವುದೇ ಅರ್ಹತೆ ಇಲ್ಲ. ಕುರೇಟಿವ್ ಅಪರೂಪದ ಶಾಸನಾತ್ಮಕ ಪರಿಹಾರ. ನ್ಯಾಯದ ಸಹಜ ತತ್ವಗಳ ಉಲ್ಲಂಘನೆ ಆಗಿರುವುದನ್ನು ಅಥವಾ ಮೇಲ್ಮನವಿಯ ಮೇಲೆ ತೀರ್ಪು ನೀಡಿದ ನ್ಯಾಯಾಧೀಶರಿಂದ ಪಕ್ಷಪಾತ ಆಗಿರುವುದನ್ನು ರಾಜ್ಯ ಸಾಬೀತುಪಡಿಸಬೇಕು ಎಂದು ಪೀಠ ಹೇಳಿತು. ’ವೈಯಕ್ತಿಕ ಆಲಿಕೆ ಮಾಡಬೇಕು ಎಂಬುದಾಗಿ ಸಲ್ಲಿಸಲಾಗಿರುವ ಅರ್ಜಿಯನ್ನು  ತಿರಸ್ಕರಿಸಲಾಗಿದೆ. ನಾವು ಕ್ಯುರೇಟಿವ್ ಅರ್ಜಿಗಳು ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ನಮ್ಮ ಅಭಿಪ್ರಾಯದಂತೆ ಇದರಲ್ಲಿ ಯಾವುದೇ ಪ್ರಕರಣವೂ ಇಲ್ಲಎಂದು ಪೀಠವು ಕ್ಯುರೇಟಿವ್ ಅರ್ಜಿಯನ್ನು ವಜಾಗೊಳಿಸುತ್ತಾ ನೀಡಿದ ತನ್ನ ಸಂಕ್ಷಿಪ್ತ ಆದೇಶದಲ್ಲಿ ತಿಳಿಸಿತು. ಸುಪ್ರೀಂಕೋಟ್ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಕರ್ನಾಟಕ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಕೂಡಾ ಇದೇ ರೀತಿಯಾಗಿ ತಿರಸ್ಕರಿಸಿತ್ತು. ಜಯಲಲಿತಾ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣವು ಅವರು ನಿಧನರಾದ್ದರಿಂದ ರದ್ದಾಗಿದೆ ಎಂದು ಸುಪ್ರೀಂಕೋರ್ಟ್ ೨೦೧೭ರ ಫೆಬ್ರುವರಿ ೧೪ರಂದು ನೀಡಿದ್ದ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ತೀರ್ಪು ತಪ್ಪಾಗಿದ್ದು, ಪ್ರಕರಣಕ್ಕೆ ಮರುಪರಿಶೀಲನೆಯ ಅರ್ಹತೆ ಇದೆ ಎಂದು ಕರ್ನಾಟಕ ಸುಪ್ರೀಂಕೋರ್ಟಿಗೆ  ತಿಳಿಸಿತ್ತು. ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಮೇಲೆ ತೀರ್ಪು ನೀಡಿದ್ದ ನ್ಯಾಯಮೂರ್ತಿಗಳಾದ ಪಿ.ಸಿ. ಘೋಷ್ ಮತ್ತು ಅಮಿತವ್ ರಾಯ್ (ಇಬ್ಬರೂ ಈಗ ನಿವೃತ್ತರಾಗಿದ್ದಾರೆ) ಅವರ ಪೀಠವು, ಶಶಿಕಲಾ, ವಿ.ಎನ್. ಸುಧಾಕರನ್ ಮತ್ತು ಜೆ. ಇಳವರಸಿ ಅವರನ್ನು ೨೦೧೪ರ ಸೆಪ್ಟೆಂಬರಿನಲ್ಲಿ ಖುಲಾಸೆಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಕಟುವಾಗಿ ಟೀಕಿಸಿ ರದ್ದು ಪಡಿಸಿತ್ತು. ಮೂರೂ ಮಂದಿ ಪ್ರಕರಣದಲ್ಲಿ ಈಗ ಶಿಕ್ಷೆ ಅನುಭವಿಸುತ್ತಿದ್ದಾರೆಏನಿದ್ದರೂ ತೀರ್ಪು ನೀಡುವ ವೇಳೆಯಲ್ಲಿ ಸುಪ್ರೀಂಕೋರ್ಟ್ ಜಯಲಲಿತಾ ಅವರು ನಿಧನರಾದ್ದರಿಂದ ಅವರ ವಿರುದ್ಧದ ಪ್ರಕರಣ ರದ್ದಾಗಿದೆ ಎಂದು ತೀರ್‍ಮಾನಿಸಿತ್ತುಈಗ ಕುರೇಟಿವ್ ಅರ್ಜಿ ವಜಾಗೊಂಡಿರುವುದರಿಂದ ಕರ್ನಾಟಕಕ್ಕೆ ಸುಪ್ರೀಂಕೋರ್ಟಿನಲ್ಲಿ ಶಾಸನಬದ್ಧ ಪರಿಹಾರ ಪಡೆಯುವ ಮಾರ್ಗಗಳು ಮುಚ್ಚಿದವು.  ೧೦೦೦ ಕೋಟಿ ರೂಪಾಯಿ ದಂಡ ಪಾವತಿಸುವಂತೆ ಮಾಡಿದ್ದ ಆದೇಶ ರದ್ದುಗೊಂಡಿತು. ವಾದ ಪೂರ್ಣಗೊಂಡು ತೀರ್ಪನ್ನು ಕಾಯ್ದಿರಿಸಿದ ಬಳಿಕ ಕಕ್ಷಿದಾರನು ಮೃತನಾದರೆ ಮೇಲ್ಮನವಿ ರದ್ದು ಪಡಿಸುವ ಪ್ರಶ್ನೆ ಬರುವುದಿಲ್ಲಎಂದು ಕರ್ನಾಟಕ ತನ್ನ  ಕ್ಯುರೇಟಿವ್ ಅರ್ಜಿಯಲ್ಲಿ ತಿಳಿಸಿತ್ತು.  ‘ಬಳಿಕ ಪ್ರಕಟಿಸಲಾದ ತೀರ್ಪು, ಸಾವಿಗೆ ಮುನ್ನ ಪ್ರಕಟಿಸಲಾಗುವ ತೀರ್ಪಿನಷ್ಟೇ ಪರಿಣಾಮಕಾರಿಎಂದು ಅರ್ಜಿ ಪ್ರತಿಪಾದಿಸಿತ್ತು. ಸಂವಿಧಾನದಲ್ಲಿ ಅಥವಾ ೨೦೧೩ರ ಸುಪ್ರೀಂ ಕೋರ್ಟ್ ನಿಯಮಾವಳಿಗಳಲ್ಲಿ ಮೇಲ್ಮನವಿಯನ್ನು ರೀತಿಯಾಗಿ  ರದ್ದು ಪಡಿಸಲು ಅವಕಾಶ ಇಲ್ಲ. ಬದಲಿಗೆ ೨೦೧೩ರ ಸುಪ್ರೀಂಕೋಟ್ ನಿಯಮಾವಳಿಗಳು ಸಿವಿಲ್ ಮೇಲ್ಮನವಿ ಮತ್ತು ಚುನಾವಣಾ ಅರ್ಜಿಗಳಲ್ಲಿ ವಾದ ಆಲಿಕೆಯ ಬಳಿಕ ಸಾವು ಸಂಭವಿಸಿದರೆ  ಮೇಲ್ಮನವಿ ರದ್ದು ಪಡಿಸಲು ಬರುವುದಿಲ್ಲ ಎಂದು ಹೇಳುತ್ತವೆ ಎಂದು ಕರ್ನಾಟಕದ ಕುರೇಟಿವ್ ಅರ್ಜಿ ಪ್ರತಿಪಾದಿಸಿತ್ತು. ಜಯಲಲಿತಾ ಅವರ ಎಸ್ಟೇಟಿನಿಂದ ದಂಡ ವಸೂಲಿ ಮಾಡಬೇಕು ಎಂದು ಕರ್ನಾಟಕ ವಾದಿಸಿತ್ತು. ಸರ್ಕಾರಿ ನೌಕರರಿಂದ ಅಕ್ರಮ ಆಸ್ತಿ ಸ್ವಾಧೀನದ ಆಪಾದನೆ ಇರುವ ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಬರುವ ಅಪರಾಧಗಳಿಗೆ ಸಂಬಂಧಿಸಿದ ಕ್ರಿಮಿನಲ್ ಮೇಲ್ಮನವಿಯು ಸ್ವಲ್ಪ ಭಿನ್ನ ರೀತಿಯದ್ದಾಗಿರುತ್ತದೆ ಎಂದೂ ಕರ್ನಾಟಕ ವಾದಿಸಿತ್ತು.

2018: ನವದೆಹಲಿ: ಭಾರತವು ಪಾಕ್ ಗಡಿಯಾಚೆ ನುಗ್ಗಿ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ್ದ ಸರ್ಜಿಕಲ್ ದಾಳಿಯ ಎರಡನೇ ವರ್ಷಾಚರಣೆಗೆ ಮುನ್ನ ಪಾಕಿಸ್ತಾನದ ಮೇಲೆ ಇನ್ನೊಂದು ಸರ್ಜಿಕಲ್ ದಾಳಿ ನಡೆದಿದೆಯೇ? ೨೦೧೬ರ ಸರ್ಜಿಕಲ್ ದಾಳಿ ೨ನೇ ವರ್ಷಾಚರಣೆಯ ಮುನ್ನಾ ಗೃಹ ಸಚಿವರಾಜನಾಥ್ ಸಿಂಗ್ ಅವರುಕಳೆದೆರಡು ದಿನಗಳಲ್ಲಿ ಏನೂ ಮಹತ್ತರವಾದುದು ನಡೆದಿದೆಎಂದು ಸುಳಿವು ನೀಡಿದರು.  ಗಡಿ ನಿಯಂತ್ರಣರೇಖೆಯಲ್ಲಿ ಪಾಕಿಸ್ತಾನಿ ಪಡೆಗಳು ಭಾರತದಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧನನ್ನು ಕೊಲೆಗೈದ ಹಿನ್ನೆಲೆಯಲ್ಲಿ ಮಾತನಾಡುತ್ತಾ ಸಚಿವರು ಸುಳಿವು ಕೊಟ್ಟರು. ಬಿಎಸ್‌ಎಫ್ ಯೋಧನನ್ನು ಕ್ರೂರವಾಗಿ ಕೊಂದಿರುವುದಕ್ಕೆ ಸೇಡುತೀರಿಸಲು ಭಾರತೀಯ ಪಡೆಗಳು ಪಾಕಿಸ್ತಾನಿ ಗುರಿಗಳ ಮೇಲೆ ದಾಳಿ ನಡೆಸಿರುವ ಸಾಧ್ಯತೆಗಳ ಬಗ್ಗೆ ಸಿಂಗ್ ಪರೋಕ್ಷವಾಗಿ ಮಾತನಾಡಿದರು. ಏನೋ ಸಂಭವಿಸಿದೆ, ನಾನು ಈಗ ಬಹಿರಂಗ ಪಡಿಸುವುದಿಲ್ಲ. ಏನು ಸಂಭವಿಸಿದೆಯೋ ಅದು ಒಳ್ಳೆಯದಕ್ಕಾಗಿಯೇ ಸಂಭವಿಸಿದೆ. ನನ್ನ ಮೇಲೆ ವಿಶ್ವಾಸ ಇಡಿ. - ದಿನಗಳ ಹಿಂದೆ ದೊಡ್ಡ ಘಟನೆ ಘಟಿಸಿದೆ. ಭವಿಷ್ಯದಲ್ಲಿಯೂ ಇದು ಘಟಿಸುತ್ತದೆಎಂದುರಾಜನಾಥ್ ಸಿಂಗ್ ಅವರು ಬಿಎಸ್‌ಎಫ್‌ಯೋಧ ನರೇಂದ್ರ ಸಿಂಗ್ ಹತ್ಯೆಯನ್ನು ಪ್ರಸ್ತಾಪಿಸುತ್ತಾ ಹೇಳಿದರು. ಅವರು ನಮ್ಮ ನೆರೆಹೊರೆಯವರಾದ್ದರಿಂದ ಮೊದಲು ಗುಂಡು ಹಾರಿಸಬೇಡಿ ಎಂದು ನಾನು ಬಿಎಸ್‌ಎಫ್ ಯೋಧರಿಗೆ ಹೇಳಿದ್ದೇನೆ. ಆದರೆ ಅವರು ಮೊದಲ ಗುಂಡು ಹಾರಿಸಿದರೆ, ಪ್ರತಿಯಾಗಿ ನೀವು ಹಾರಿಸುವ ಗುಂಡುಗಳ ಲೆಕ್ಕ ಇಡಬೇಡಿ ಎಂದು ಹೇಳಿದ್ದೇನೆಎಂದು ಗೃಹ ಸಚಿವರು ನುಡಿದರು. ಕೆಲ ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಬಿಎಸ್‌ಎಫ್ ಯೋಧ ನರೇಂದ್ರ ಸಿಂಗ್ ಅವರನ್ನು ಗುಂಡಿಟ್ಟು ಕೊಂದು ದೇಹವನ್ನು ಛಿದ್ರ ಗೊಳಿಸಲಾಗಿತ್ತು. ಕೃತ್ಯಕ್ಕೆ ಪ್ರತಿಕ್ರಮವನ್ನು ಇಷ್ಟರಲ್ಲೇ ಕೈಗೊಳ್ಳಲಾಗುವುದು ಎಂದು ಬಿಎಸ್‌ಎಫ್ ಪ್ರಕಟಿಸಿತ್ತು.ಸರ್ಕಾರವು ಸೆಪ್ಟೆಂಬರ್ ೨೭ರಂದು ೨೦೧೬ರ ಸರ್ಜಿಕಲ್ ದಾಳಿಯ ವಿಡಿಯೋ ಬಿಡುಗಡೆ ಮಾಡಿದ್ದರೆ, ಬಿಜೆಪಿ ದಾಳಿಯ ಚಿತ್ರಗಳನ್ನು ಪ್ರಕಟಿಸಿತ್ತು. ಇದೇ ಸಂದರ್ಭದಲ್ಲಿ ಮಾಧ್ಯಮವೊಂದು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯ ಆಚೆ ಪಾಕ್ ಆಕ್ರಮಿತ ಪ್ರದೇಶದಲ್ಲಿ ಸುಮಾರು ೨೫೦ ಭಯೋತ್ಪಾದಕರು ೨೭ ಲಾಂಚ್ ಪ್ಯಾಡ್ ಗಳನ್ನು ನಿರ್ಮಿಸಿ  ಭಾರತಕ್ಕೆ ನುಗ್ಗಲು ಬೀಡು ಬಿಟ್ಟಿದ್ದಾರೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿತ್ತು.


2017: ಮುಂಬಯಿ: ಪರೇಲ್ ಎಲ್ಫಿನ್ಸ್ಟನ್ ರೈಲ್ವೇ ನಿಲ್ದಾಣದಲ್ಲಿ ಬೆಳಗ್ಗೆ ಸಂಭವಿಸಿದ ಭೀಕರ  ಕಾಲ್ತುಳಿತದಲ್ಲಿ ದಕ್ಷಿಣ ಕನ್ನಡ ಮೂಲದ ಇಬ್ಬರು ಮಹಿಳೆಯರುಸೇರಿದಂತೆ 23 ಮಂದಿ ದಾರುಣವಾಗಿ ಸಾವನ್ನಪ್ಪಿದರು. ದುರಂತದಲ್ಲಿ ಮೃತರಾದ ದಕ್ಷಿಣ ಕನ್ನಡದ ಮಹಿಳೆಯರನ್ನು  ಮುಂಬೈಯ ಬಂಟ್ಸ್ ಸಂಘದ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿ ಸದಸ್ಯೆಯರಾದ ಸುಜಾತಾ ಪಿ.ಆಳ್ವ (42) ಮತ್ತು ಸುಮಲತಾ ಸಿ.ಶೆಟ್ಟಿ (45) ಎಂದು ಗುರುತಿಸಲಾಯಿತು. ಸುಜಾತಾ ಪಿ.ಆಳ್ವ ಮತ್ತು ಸುಮಲತಾ ಸಿ.ಶೆಟ್ಟಿ ಕಾಂಜೂರ್ಮಾರ್ಗ ಪೂರ್ವದ ನೆಹರೂ ನಗರ ನಿವಾಸಿಗಳಾಗಿದ್ದರು. ದಸರಾ ಹಬ್ಬದ ಪೂಜೆಗೆ ಹೂವು ಖರೀದಿಸಲೆಂದೇ ಹೋದವರು ಅವಘಡದಲ್ಲಿ ಮೃತರಾದರು. ಸುಮಲತಾ ಶೆಟ್ಟಿ ಮೂಲತಃ ಇನ್ನಾ ಮಡ್ಮಾಣ್ ಪಾದೆಮನೆ (ತಾಯಿಮನೆ), ಕಡಂದಲೆ ಹೊಯ್ಗೆಮನೆ ಕೃಷ್ಣಶೆಟ್ಟಿ ದಂಪತಿಯ ಪುತ್ರಿ. ಪ್ರತಿಭಾನ್ವಿತೆ ಮತ್ತು ಅತ್ಯುತ್ತಮ ಕ್ರೀಡಾಪಟುವಾಗಿದ್ದರು. ಪತಿ ಎಳಿಯಾಲು ಶೆಟ್ಟಿ ಬೆಟ್ಟುಮನೆತನದ ಚಂದ್ರಶೇಖರ್ ಶೆಟ್ಟಿ ಸೀಮೆನ್ಸ್ ಉದ್ಯೋಗಿಯಾಗಿದ್ದು, ಏಕೈಕ ಪುತ್ರಿ ನಿಧಿ ಶೆಟ್ಟಿ ಸಯಾನ್ನಲ್ಲಿ ಬಿಎಸ್ಸಿ  ವಿದ್ಯಾರ್ಥಿನಿ. ವಾಮಂಜೂರು ಮೂಲದವರಾದ ಸುಜಾತಾ ಆಳ್ವ ಅತ್ಯುತ್ತಮ ರಂಗಭೂಮಿ ಕಲಾವಿದೆ. ಇವರ ಪತಿ ಪುರುಷೋತ್ತಮ ಆಳ್ವ ಆದಾಯ ತೆರಿಗೆ ಉನ್ನತಾಧಿಕಾರಿಯಾಗಿದ್ದು ಮತ್ತು ಇಬ್ಬರು ಪುತ್ರಿಯರಾದ ಪ್ರಜ್ಞಾ ಆಳ್ವ ಮತ್ತು ಪ್ರೇರಣಾ ಆಳ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು. ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಪ್ರದರ್ಶನಗೊಂಡ ನಾಟಕ ತಜ್ಞ, ಪ್ರಶಸ್ತಿ ವಿಜೇತ ಸಾ.ದಯಾ (ದಯಾನಂದ್ ಸಾಲ್ಯಾನ್) ರಚಿಸಿ ನಿರ್ದೇಶಿಸಿದ ಅಬ್ಬ' ಕನ್ನಡ ನಾಟಕದಲ್ಲಿ  ಸುಜಾತ ಪಾತ್ರ ನಿರ್ವಹಿಸಿದ್ದರು. ಶಾರ್ಟ್ ಸರ್ಕ್ಯೂಟ್ ಆಗಿದೆ ಎಂಬ ಸುಳ್ಳು ವದಂತಿ ಹಿನ್ನೆಲೆಯಲ್ಲಿ  ಜನರ ಭಾರೀ ತಳ್ಳಾಟ, ನೂಕಾಟದಿಂದಾಗಿ ದುರಂತ ಸಂಭವಿಸಿತ್ತು.
 
2016: ನವದೆಹಲಿ: ಭಾರತೀಯ ಸೇನೆಯು 2016 ಸೆಪ್ಟೆಂಬರ್ 28 ಮತ್ತು 29ರ ನಡುವಣ ರಾತ್ರಿ 12.30
ಗಂಟೆಯಿಂದ 4.30 ಗಂಟೆ ಒಳಗಿನ ವೇಳೆಯಲ್ಲಿ, ಗಡಿ ನಿಯಂತ್ರಣ ರೇಖೆಯಾಚೆಗೆ ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ ಅಲ್ಲಿನ ಭಯೋತ್ಪಾದಕರ ನೆಲೆಗಳ ಮೇಲೆ ಸರ್ಜಿಕಲ್ ದಾಳಿಗಳನ್ನು ನಡೆಸಿ, ಭಯೋತ್ಪಾದಕರಿಗೆ ಅಪಾರ ಪ್ರಮಾಣದ ಸಾವು ನೋವು ಉಂಟು ಮಾಡಿದೆ ಎಂದು ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ಈದಿನ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಭಯೋತ್ಪಾದಕ ಗುಂಪುಗಳು ಭಾರತದೊಳಕ್ಕೆ ನುಸುಳಲು ಸಜ್ಜಾಗಿವೆ ಎಂಬ ನಿರ್ದಿಷ್ಟ ಗುಪ್ತಚರ ವರದಿಗಳನ್ನು ಆಧರಿಸಿ ಸರ್ಜಿಕಲ್ ದಾಳಿಯನ್ನು ನಡೆಸಲಾಯಿತು. ಗಮನಾರ್ಹ ಸಾವುನೋವು ಸಂಭವಿಸಿದೆ. ಕಾರ್ಯಾಚರಣೆ ಇದೀಗ ಮುಕ್ತಾಯಗೊಂಡಿದ್ದು ಭಾರತದ ಕಡೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಡಿಜಿಎಂಒ ಹೇಳಿದರು. ಇದಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಸಭೆ ನಡೆಯಿತು. ಸಮಿತಿಯು ಗಡಿ ನಿಯಂತ್ರಣ ರೇಖೆಯ ಪರಿಸ್ಥಿತಿಯನ್ನು ಅವಲೋಕಿಸಿತು. ಸರ್ಜಿಕಲ್ ದಾಳಿ ನಡೆಸಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೂ ಈದಿನ ಮಾಹಿತಿ ನೀಡಿದರು. ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರಿಗೆ ಸರ್ಜಿಕಲ್ ದಾಳಿ ಬಗ್ಗೆ ಭಾರತೀಯ ಸೇನೆ ಮಾಹಿತಿ ನೀಡಿತು. ಭಯೋತ್ಪಾದಕರ ದಾಳಿ, ಕದನ ವಿರಾಮ ಉಲ್ಲಂಘನೆಗಳ ಬಗ್ಗೆ ಪಾಕ್ ಡಿಜಿಎಂಒ ಗಮನಕ್ಕೆ ತರಲಾಗಿತ್ತು. ಆದರೆ ಅವರಿಂದ ಯಾವುದೇ ಸ್ಪಂದನೆ ಲಭಿಸಿಲ್ಲ. ಹೀಗಾಗಿ ಸರ್ಜಿಕಲ್ ದಾಳಿ ನಡೆಸಲಾಯಿತು ಎಂದು ರಣಬೀರ್ ಸಿಂಗ್ ಹೇಳಿದರು. ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇರುವ 7 ಸ್ಥಳಗಳನ್ನು ಗುರುತಿಸಿ ದಾಳಿಗೆ ಸಿದ್ಧತೆ ನಡೆಸಿತ್ತು. ಎಲ್ಲಾ ಸ್ಥಳಗಳು ಗಡಿ ನಿಯಂತ್ರಣ ರೇಖೆಯಿಂದ 2 ರಿಂದ 3 ಕಿ.ಮೀ. ವ್ಯಾಪ್ತಿಯಲ್ಲಿದ್ದವು. ಗುರಿಯನ್ನು ಗುರುತಿಸಿದ ನಂತರ  ರಾತ್ರಿ 12.30 ರಿಂದ ಬೆಳಗಿನ ಜಾವ 4.30 ಅವಧಿಯಲ್ಲಿ ದಾಳಿ ನಡೆಸಲಾಯಿತು.. ದಾಳಿಯಲ್ಲಿ ವಾಯುಪಡೆಯ ಹೆಲಿಕ್ಯಾಪ್ಟರ್ಗಳು, ಪಾರಾಟ್ರೂಪರ್ಗಳು ಮತ್ತು ಕಮ್ಯಾಂಡೋ ಪಡೆ ಪಾಲ್ಗೊಂಡಿತ್ತು. ಉಗ್ರರ ವಿರುದ್ಧ ನಡೆದ ದಾಳಿಯಲ್ಲಿ ಭಾರತೀಯ ಸೈನಿಕರಿಗೆ ಗಾಯಗಳಾಗಿಲ್ಲ, ಎಲ್ಲರೂ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ಕೇವಲ ಒಂದೇ ಸಂಘಟನೆಯ ಉಗ್ರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸದೆ ವಿವಿಧ ಸಂಘಟನೆಗಳ ಉಗ್ರರನ್ನು ಗುರಿಯಾಗಿಸಿ ದಾಳಿ ಸಂಘಟಿಸಲಾಗಿತ್ತು. ಭಾರತೀಯ ಸೇನೆ ಭಿಂಬೆರ್, ಹಾಟ್ಸ್ಪ್ರಿಂಗ್, ಕೆಲ್ ಮತ್ತು ಲಿಪಾ ಪ್ರದೇಶಗಳಲ್ಲಿ ದಾಳಿ ನಡೆಸಿತ್ತು. ಉಗ್ರರ ನೆಲೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ. ಭಾರತೀಯ ಸೈನಿಕರ ದಾಳಿಯಿಂದ ಉಗ್ರರ ನೆಲೆಯಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ. ಆದರೆ ಹಾನಿಯ ಪ್ರಮಾಣ ನಿಖರವಾಗಿ ತಿಳಿದು ಬಂದಿಲ್ಲ ಎಂದು ಸೇನೆಯ ಮೂಲಗಳು ತಿಳಿಸಿವೆ. ದಾಳಿಯ ಬಳಿಕ ಈದಿನ ಮುಂಜಾಗರೂಕತಾ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬಿನ ಗಡಿ ಪ್ರದೇಶಗಳಿಂದ ಗ್ರಾಮಸ್ಥರನ್ನು ತೆರವುಗೊಳಿಸಿ ಸ್ಥಳಾಂತರಿಸಲಾಯಿತು. ವರದಿಗಳ ಪ್ರಕಾರ ದಾಳಿಯಲ್ಲಿ 38 ಮಂದಿ ಭಯೋತ್ಪಾದಕರು ಮತ್ತು 9 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದರು. ಆದರೆ ಪಾಕಿಸ್ತಾನ ಇದನ್ನು ನಿರಾಕರಿಸಿ, ಕೇವಲ ಇಬ್ಬರು ಸೈನಿಕರು ಗಡಿಯಾಚೆಯ ಗುಂಡಿನ ದಾಳಿಯಲ್ಲಿ ಅಸು ನೀಗಿದ್ದಾರೆ ಎಂದು ಪ್ರತಿಪಾದಿಸಿತು.


2016: ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಜಲ ಬಿಕ್ಕಟ್ಟು ಇನ್ನಷ್ಟು ಜಟಿಲಗೊಳ್ಳುವ ಲಕ್ಷಣಗಳು ಕಾಣಿಸಿದವು.  ನವದೆಹಲಿಯಲ್ಲಿ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಮಧ್ಯಸ್ಥಿಕೆಯಲ್ಲಿ ಈದಿನ ನಡೆದ ಸಂಧಾನ ಸಭೆಯೂ ವಿಫಲಗೊಂಡಿತು. ಕರ್ನಾಟಕ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಪಟ್ಟು ಹಿಡಿದು ಕುಳಿತರೆ, ತಮಿಳುನಾಡು ನೀರು ಬಿಡಬೇಕೆಂದು ಪಟ್ಟು ಹಿಡಿಯಿತು. ಹೀಗಾಗಿ ಸಂಧಾನ ಸಭೆಯನ್ನು ಊಟದ ವಿರಾಮದ ಬಳಿಕ ಕೆಲ ಸಮಯ ನಡೆಸಿ ಅಂತ್ಯಗೊಳಿಸಲಾಯಿತು. ಬೆಳಗ್ಗೆ 11.30ರಿಂದ ಆರಂಭವಾದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದ್ಯದ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವಿಲ್ಲ. ನೀರು ಬಿಟ್ಟಲ್ಲಿ ಕರ್ನಾಟಕದಲ್ಲಿ ಕುಡಿಯುವುದಕ್ಕೂ ನೀರು ಇರುವುದಿಲ್ಲ. ಕಾರಣ ಕೇಂದ್ರ ಸರ್ಕಾರ ಸತ್ಯಾಸತ್ಯತೆಯನ್ನು ಅರಿಯಲು ಕೂಡಲೇ ತಜ್ಞರ ತಂಡ ಕಳುಹಿಸಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಅಧ್ಯಯನ ನಡೆಸಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಆಕ್ಷೇಪವೆತ್ತಿದ ತಮಿಳುನಾಡು ಸುಪ್ರೀಂ ಕೋರ್ಟ್ ತೀರ್ಪಿನಂತೆಯೇ ನೀರು ಬಿಡುಗಡೆಗೆ ಒತ್ತಾಯಿಸಿತು. ಜತೆಗೆ ಶೀಘ್ರದಲ್ಲಿಯೇ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸಿತು. ಇದಕ್ಕೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿತು. ಸಂಧಾನ ಸಭೆ ವಿಫಲವಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಮಾಭಾರತಿ, ನಾಳೆ ಸುಪ್ರೀಂಕೋರ್ಟ್ ನೀಡುವ ತೀರ್ಪಿಗೆ ಎರಡೂ ಸರ್ಕಾರಗಳು ಬದ್ಧವಾಗಿರಬೇಕು. ಉಭಯ ರಾಜ್ಯಗಳು ಸಂಧಾನಕ್ಕೆ ಸ್ಪಂದಿಸದೇ ಇರುವ ಹಿನ್ನೆಲೆಯಲ್ಲಿ ಕೇಂದ್ರ ತನ್ನ ನಿರ್ಧಾರವನ್ನು ಕೋಟ್ಗೆ ತಿಳಿಸಲಿದೆ. ನೀರಿನ ವಿಚಾರದಲ್ಲಿ ರಾಜಕೀಯ ನಡೆಯಬಾರದು. ಜಲವಿವಾದವನ್ನು ಕೋರ್ಟ್ನಿಂದ ಆಚೆ ಬಗೆಹರಿಸಿಕೊಳ್ಳುವುದು ಉತ್ತಮ. ಇದನ್ನು ಎರಡೂ ರಾಜ್ಯಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.

2014: ಚೆನ್ನೈ: ತಮಿಳುನಾಡಿನ ಹಣಕಾಸು ಸಚಿವ ಒ. ಪನ್ನೀರ್​ಸೆಲ್ವಂ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ರೋಸಯ್ಯ ಅವರು ಸೆಲ್ವಂ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಹಿಂದಿನ ದಿನ ಸಂಜೆ ಏಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನಾಗಿ ಆಯ್ಕೆಯಾದ 63ರ ಹರೆಯದ ಪನ್ನೀರ್​ಸೆಲ್ವಂ ಅವರು, ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಶಿಕ್ಷಿತರಾಗಿ ಸೆರೆಮನೆ ಸೇರಿದ ಜೆ. ಜಯಲಲಿತಾ ಅವರ ಉತ್ತರಾಧಿಕಾರಿಯಾಗಿ ಕಾರ್ಯ ನಿರ್ವಹಿಸುವರು. ಥೇಣಿ ಜಿಲ್ಲೆಯ ರೈತರಾದ ಪನ್ನೀರ್​ಸೆಲ್ವಂ ಅಥವಾ ಪಕ್ಷದಲ್ಲಿ ಒಪಿಎಸ್ ಎಂದೇ ಪರಿಚಿತರಾದ ಅವರು ಜಯಲಲಿತಾ ಅವರ ಕಟ್ಟಾ ಅನುಯಾಯಿ. 1996ರಲ್ಲಿ ಸ್ಥಳೀಯ ಸಂಸ್ಥೆಯೊಂದರ ಮುಖ್ಯಸ್ಥನಾಗಿ ರಾಜಕೀಯ ಪ್ರವೇಶಿಸಿದರು. 2001ರಲ್ಲಿ ಪೆರಿಕುಲಂ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ ಅವರು ಲೋಕೋಪಯೋಗಿ ಸಚಿವರಾಗಿದ್ದರು. 2001ರಲ್ಲಿ ಈಗಿನಂತಹುದೇ ಸನ್ನಿವೇಶದಲ್ಲಿ ಪನ್ನೀರ್​ಸೆಲ್ವಂ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. 2006ರಲ್ಲಿ ಏಐಎಡಿಎಂಕೆ ಪರಾಭವಗೊಂಡಿದ್ದಾಗ ಅವರು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಭಾನುವಾರ ಪನ್ನೀರ್​ಸೆಲ್ವಂ ಮತ್ತು ಏಐಡಿಎಂಕೆಯ ಇತರ ಕೆಲವು ನಾಯಕರು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಜಯಲಲಿತಾ ಅವರನ್ನು ಭೇಟಿ ಮಾಡಿದ್ದರು.

2014: ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನ್​ನಲ್ಲಿ ನಡೆದ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಡಬಲ್ಸ್ ಟೆನಿಸ್ ಫೈನಲ್​ನಲ್ಲಿ ಭಾರತದ ಸನಮ್​ಸಿಂಗ್ ಮತ್ತು ಸಾಕೇತ್​ವೆುೖನೇನಿ ಜೋಡಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಡಬಲ್ಸ್ ಟೆನಿಸ್ ಫೈನಲ್​ನಲ್ಲಿ ದಕ್ಷಿಣ ಕೊರಿಯಾದ ಯೊಂಗ್ಕ್ಯೂ ಲಿಮ್​ವುತ್ತು ಹೈಯಿಯೋನ್ ಚುಂಗ್ ಜೋಡಿಯಿಂದ 7-5, 7-6(2-7) ಅಂಕಗಳ ಅಂತರದಲ್ಲಿ ಪರಾಭವಗೊಳ್ಳುವುದರೊಂದಿಗೆ ಭಾರತದ ಜೋಡಿ ಬೆಳ್ಳಿ ಪದಕ್ಕೆ ತೃಪ್ತಿಪಡಬೇಕಾಯಿತು. ಏಷ್ಯಾಡ್ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಭಜರಂಗ್ ಎರಡು ನಿರ್ಣಾಯಕ ಪಾಯಿಂಟ್ ಗಳಿಸಿಕೊಂಡು ಜಪಾನಿನ ತಕತ್ಸುಕಾ ಓಟಕ್ಕೆ ಬ್ರೇಕ್ ಹಾಕಿ, ಫೈನಲ್ ತಲುಪಿದರು. ಪುರುಷರ ಫ್ರೀಸ್ಟೈಲ್ 61 ಕೆಜಿ ಸ್ಪರ್ಧೆಯಲ್ಲಿ 3-1 ಅಂಕಗಳ ಅಂತರದಲ್ಲಿ ಅವರು ಜಯಗಳಿಸಿ, ಚಿನ್ನದ ಪದಕದ ಮೇಲೆ ಕಣ್ಣಿಟ್ಟರು.

2014: ಇಸ್ಲಾಮಾಬಾದ್: ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಮಾಡಿದ ಭಾಷಣವನ್ನು ಮೀರಿಸಿದೆ. ಮೋದಿ ಭಾಷಣದಲ್ಲಿ ಎಲ್ಲವೂ ಇತ್ತು, ಆದರೆ ಷರೀಫ್ ಭಾಷಣದಲ್ಲಿ ಏನೂ ಇರಲಿಲ್ಲ ಎಂದು ಪಾಕಿಸ್ತಾನಿ ದಿನ ಪತ್ರಿಕೆ 'ಡೈಲಿ ಟೈಮ್ಸ್ ಶ್ಲಾಘಿಸಿತು. 'ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದೊಂದಿಗೆ ಮೋದಿಯವರು ಪಶ್ಚಿಮ ದೇಶಗಳಲ್ಲಿ ತಮ್ಮ ವರ್ಚಸ್ಸು ವೃದ್ಧಿಯನ್ನು ಮುನ್ನಡೆಸಿದ್ದಾರೆ. ಅವರ ಭಾಷಣದಲ್ಲಿ ಎಲ್ಲವೂ ಇತ್ತು, ನವಾಜ್ ಷರೀಪ್ ಭಾಷಣದಲ್ಲಿ ಏನೂ ಇರಲಿಲ್ಲ' ಎಂದು ಡೈಲಿ ಟೈಮ್ಸ್ ತನ್ನ ಸಂಪಾಕೀಯದಲ್ಲಿ ಹೇಳಿತು. ಮೋದಿಯವರು ಭಾರತದ ಪ್ರಾಚೀನ ವೈದಿಕ ಸಂಸ್ಕೃತಿಯನ್ನು ಉಲ್ಲೇಖಿಸುತ್ತಾ ತಮ್ಮ ಭಾಷಣ ಆರಂಭಿಸಿ ಅದರ ಸಾರವನ್ನು ಭಾಷಣದುದ್ದಕ್ಕೂ ಹರಡಿದರು. ನವಾಜ್ ಷರೀಫ್ ಅವರು ಒಂದು ದಿನದ ಹಿಂದಷ್ಟೇ ಮಾಡಿದ್ದ ಭಾಷಣಕ್ಕೆ ಪರಿಣಾಮಕಾರಿಯಾಗಿ ಉತ್ತರ ನೀಡಲು ಮೋದಿ ಅವರು ಈ ಅವಕಾಶವನ್ನು ಬಳಸಿಕೊಂಡರು ಎಂದು ಪತ್ರಿಕೆ ಬರೆಯಿತು. 'ಬಹುಶಃ ಅವರು (ಮೋದಿ) ಅವರ ನಡೆ ಸರಿ. ವಿಶ್ವಸಂಸ್ಥೆ ಗಂಭೀರ ಚರ್ಚೆಯ ವೇದಿಕೆಯಾಗಿಯಷ್ಟೇ ಉಳಿದಿಲ್ಲ. ತಮ್ಮ ರಾಷ್ಟ್ರ ಹಾಗೂ ತಮ್ಮ ವರ್ಚಸ್ಸು ವೃದ್ಧಿಗಾಗಿ ರಾಷ್ಟ್ರಗಳ ಪ್ರಮುಖರಿಗೆ ಅದೊಂದು ಮಾರ್ಗವಾಗಿದೆ' ಎಂದು ಸಂಪಾದಕೀಯ ಹೇಳಿತು. ಭಾರತದ ಆಧ್ಯಾತ್ಮಿಕ ಪರಂಪರೆಗಳನ್ನು ಉಲ್ಲೇಖಿಸುವ ಮೂಲಕ ಮೋದಿ ಅವರು ಅಮೆರಿಕದ ಜನರಿಗೆ ತಾವು ಹೇಳುವುದನ್ನು ಸುಲಭವಾಗಿ ಅರಗಿಸಿದರು. ಷರೀಫ್ ಅವರ ಸಂಕುಚಿತ ದೃಷ್ಟಿಕೋನದ ಭಾಷಣ ಪಾಶ್ಚಾತ್ಯರು ಪಾಕಿಸ್ತಾನದ್ದು ತಪ್ಪುದಾರಿ ಎಂದು ಭಾವಿಸುವಂತೆ ಮಾಡಿತು ಎಂದು ಪತ್ರಿಕೆ ಹೇಳಿತು. 'ಪಾಕಿಸ್ತಾನಕ್ಕೆ ಭಾರತದ್ದೇ ಗೀಳು, ಅದಕ್ಕಿರುವುದು ಪ್ರದೇಶ ವಿಸ್ತರಣೆಯ ಇಚ್ಛೆ ಎಂದು ಪಾಶ್ಚಾತ್ಯರು ಭಾವಿಸುವಂತೆ ಮಾಡಿತು. ಷರೀಫ್ ಭಾಷಣದಲ್ಲಿ ಪ್ರಭಾವ ಬೀರುವಂತಹ ಯಾವುದೇ ಶಕ್ತಿಯೂ ಇರಲಿಲ್ಲ' ಎಂದು ಅದು ಬಣ್ಣಿಸಿತು. ಭಾರತದ ಪ್ರಧಾನಿಯ ಭಾಷಣ ಎಲ್ಲಿಯೂ ಪಾಕಿಸ್ತಾನದ ಬಗ್ಗೆ ನೇರವಾಗಿ ಹೇಳಲಿಲ್ಲ. ಆದರೆ ಅಂತರ್ಗತವಾಗಿತ್ತು ಎಂದೂ ಪತ್ರಿಕೆ ಹೇಳಿತು.

2014: ನ್ಯೂಯಾರ್ಕ್: ವಿಶ್ವಸಂಸ್ಥೆ ಮಹಾಧಿವೇಶನದ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿ ರಕ್ಷಣಾ ಸಹಕಾರ ಮತ್ತು ಪಶ್ಚಿಮ ಏಷ್ಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಸೃಷ್ಟಿಸಿದ ಪರಿಸ್ಥಿತಿ ಸೇರಿದಂತೆ ವ್ಯಾಪಕ ವಿಷಯಗಳ ಬಗ್ಗೆ ರ್ಚಚಿಸಿದರು. 30 ನಿಮಿಷಗಳ ಮಾತುಕತೆ ಕಾಲದಲ್ಲಿ ಆದಷ್ಟೂ ಶೀಘ್ರದಲ್ಲೇ ಇಸ್ರೇಲ್​ಗೆ ಭೇಟಿ ನೀಡುವಂತೆ ಮೋದಿ ಅವರಿಗೆ ನೆತನ್ಯಾಹು ಆಹ್ವಾನ ನೀಡಿದರು. ಗುಜರಾತಿನ ಮುಖ್ಯಮಂತ್ರಿಯಾಗಿ ಇಸ್ರೆಲ್​ಗೆ ಮೋದಿ ಅವರು ಭೇಟಿ ನೀಡಿದ್ದುದನ್ನು ನೆನಪಿಸಿದ ನೆತನ್ಯಾಹು, ಈಗ ಪ್ರಧಾನಿಯಾಗಿ ಅವರು ಇಸ್ರೇಲ್​ಗೆ ಭೇಟಿ ನೀಡಬಹುದು ಎಂದು ಹಾರೈಸಿದರು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದರು. ಪ್ರಧಾನಿಯವರು ಆಹ್ವಾನವನ್ನು ಗಮನದಲ್ಲಿ ಇಟ್ಟುಕೊಂಡಿದ್ದು, ರಾಜತಾಂತ್ರಿಕ ವಿಧಾನದ ಮೂಲಕ ಈ ಬಗ್ಗೆ ಹೆಚ್ಚಿನ ಮಾತುಕತೆ ನಡೆಸಲಾಗುವುದು ಎಂದು ಅವರು ನುಡಿದರು. ಆರ್ಥಿಕ ಸಹಕಾರ ವೃದ್ಧಿ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಜಲ ನಿರ್ವಹಣೆ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ತನ್ನ ತಜ್ಞರ ನೆರವು ಒದಗಿಸುವ ಕೊಡುಗೆಯನ್ನು ಇಸ್ರೇಲ್ ಮುಂದಿಟ್ಟಿತು ಎಂದು ವಕ್ತಾರರು ವಿವರಿಸಿದರು. ಭಾರತ ಮತ್ತು ಇಸ್ರೇಲ್ ಮಧ್ಯೆ ಉತ್ತಮ ಬಾಂಧವ್ಯ ಇದ್ದು, ಪ್ರಸ್ತುತ 60 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ದ್ವಿಪಕ್ಷೀಯ ವಹಿವಾಟು ಉಭಯ ರಾಷ್ಟ್ರಗಳ ನಡುವೆ ಇದೆ.

2014: ಕಾಬೂಲ್ (ಆಫ್ಘಾನಿಸ್ಥಾನ): ಆಫ್ಘಾನಿಸ್ಥಾನದ ನೂತನ ಅಧ್ಯಕ್ಷರಾಗಿ ಅಶ್ರಫ್ ಘನಿ ಅಹ್ಮದ್​ಜೈ ಅವರು ಹಮೀದ್ ಕರ್ಜೈ ಅವರ ಸ್ಥಾನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕರ್ಜೈ ಅವರು 2001ರಲ್ಲಿ ಅಮೆರಿಕ ನೇತೃತ್ವದ ದಾಳಿಯಲ್ಲಿ ತಾಲಿಬಾನ್ ಆಡಳಿತಕ್ಕೆ ತೆರೆ ಎಳೆದ ಬಳಿಕ ಅಧಿಕಾರಕ್ಕೆ ಬಂದಿದ್ದರು. 2001ರ ಬಳಿಕ ಇದೇ ಮೊದಲ ಬಾರಿಗೆ ಪ್ರಜಾತಾಂತ್ರಿಕವಾಗಿ ಅಧಿಕಾರ ವರ್ಗಾವಣೆಗೊಂಡಿದ್ದು, ಪ್ರಮಾಣವಚನ ಸ್ವೀಕರಿಸಿದ ಕೆಲವೇ ಕ್ಷಣಗಳ ಬಳಿಕ ಚುನಾವಣೆಯಲ್ಲಿ ತಮಗೆ ಪ್ರಬಲ ಎದುರಾಳಿಯಾಗಿದ್ದ ಅಬ್ದುಲ್ಲಾ ಅಬ್ದುಲ್ಲಾ ಅವರನ್ನು ಮುಖ್ಯ ಕಾರ್ಯನಿರ್ವಾಹಕರನ್ನಾಗಿ ಘನಿ ಅಹ್ಮದ್​ಜೈ ಅವರು ನೇಮಕ ಮಾಡಿದರು. ತನ್ಮೂಲಕ ಚುನಾವಣಾ ಪ್ರಕ್ಷುಬ್ಧತೆ ಶಮನಗೊಳಿಸಲು ಅಧಿಕಾರ ಹಂಚಿಕೊಳ್ಳುವುದಾಗಿ ಮಾಡಿದ್ದ ರಾಜಕೀಯ ಪ್ರತಿಜ್ಞೆಯನ್ನು ಅವರು ಈಡೇರಿಸಿದರು. ಸ್ಪಷ್ಟ ಬಹುಮತ ಬಾರದೇ ಇದ್ದ ಹಿನ್ನೆಲೆಯಲ್ಲಿ ರಾಷ್ಟ್ರದ ಉತ್ತರ ಭಾಗ ಮತ್ತು ದಕ್ಷಿಣ ಭಾಗದಲ್ಲಿ ಹಿಂಸಾಚಾರದ ಸಂಭಾವ್ಯತೆ ಹಿನ್ನೆಲೆಯಲ್ಲಿ ಬಿಕ್ಕಟ್ಟು ಶಮನಗೊಳಿಸಲು ಅಧಿಕಾರ ಹಂಚಿಕೊಳ್ಳುವ ಭರವಸೆಯನ್ನು ಘನಿ ಅಹ್ಮದ್​ಜೈ ನೀಡಿದ್ದರು. ಮೊದಲಿಗೆ ಮಾತನಾಡಿದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಅಬ್ದುಲ್ಲಾ ಅವರು ಕರ್ಜೈ ಅವರಿಗೆ ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಗಾಗಿ ಧನ್ಯವಾದ ಅರ್ಪಿಸಿದರು. ಚುನಾವಣಾ ಪ್ರಕ್ರಿಯೆಯನ್ನೇ ಹಾಳುಗೆಡವಲು ದಾಳಿಯ ಬೆದರಿಕೆ ಹಾಕಿದ್ದ ತಾಲಿಬಾನ್ ಉಗ್ರರ ಬೆದರಿಕೆ ಹೊರತಾಗಿಯೂ ಹೆದರದೇ ಬಂದು ಮತದಾನದಲ್ಲಿ ಪಾಲ್ಗೊಂಡ ಲಕ್ಷಾಂತರ ಸಂಖ್ಯೆಯ ಜನರಿಗೂ ಅವರು ವಂದನೆಗಳನ್ನು ಸಲ್ಲಿಸಿದರು. 'ರಾಷ್ಟ್ರದ ಐಕ್ಯ ಸರ್ಕಾರದಲ್ಲಿ ನಾವು ಒಂದಾಗಿ ಬದ್ಧತೆಯಿಂದ ಕೆಲಸ ಮಾಡುತ್ತೇವೆ. ರಾಷ್ಟ್ರೀಯ ಏಕತೆಗಾಗಿ ಏಕತಂಡವಾಗಿ ಕೆಲಸ ಮಾಡುವ ಮೂಲಕ ನಮ್ಮ ಬದ್ಧತೆಯನ್ನು ಈಡೇರಿಸುತ್ತೇವೆ' ಎಂದು ಅವರು ನುಡಿದರು. ಶಾಂತಿಯುತವಾಗಿ ಪ್ರಜಾತಾಂತ್ರಿಕ ರೀತಿಯಲ್ಲಿ ಅಧಿಕಾರ ಹಸ್ತಾಂತರಿಸಿದ್ದಕ್ಕಾಗಿ ಘನಿ ಅಹ್ಮದ್​ಜೈ ಅವರು ಕರ್ಜೈ ಅವರನ್ನು ಅಭಿನಂದಿಸಿದರು. ರಾಷ್ಟ್ರೀಯ ಐಕ್ಯ ಸರ್ಕಾರ ರಚನೆಯನ್ನು ಸಾಧ್ಯವಾಗಿಸಿದ್ದಕ್ಕಾಗಿ ಅವರು ಅಬ್ದುಲ್ಲಾ ಅವರಿಗೂ ಧನ್ಯವಾದ ಸಲ್ಲಿಸಿದರು.

2014: ಬೆಂಗಳೂರು: ಸೆರೆವಾಸಕ್ಕೆ ಗುರಿಯಾದ ಏಐಎಡಿಎಂಕೆ ಮುಖ್ಯಸ್ಥೆ ಜೆ. ಜಯಲಲಿತಾ ಅವರ ಪರವಾಗಿ ವಕೀಲರು ಕರ್ನಾಟಕ ಹೈಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿದರು. ಜೊತೆಗೇ ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಅವರನ್ನು ಅಪರಾಧಿ ಎಂಬುದಾಗಿ ಘೋಷಿಸಿರುವುದಕ್ಕೆ ಮತ್ತು ಶಿಕ್ಷೆಗೆ ತಡೆಯಾಜ್ಞೆ ಕೋರಿದರು. ಜಾಮೀನು ಕೋರಿ ಈದಿನ ಅರ್ಜಿ ಸಲ್ಲಿಸಲಾಗಿದ್ದರೂ, ಅದು ರಜಾಕಾಲೀನ ಪೀಠದ ಮುಂದೆ ಒಂದು ದಿನದ ಬಳಿಕ ಬರುವ ನಿರೀಕ್ಷೆಯಿದೆ. ಈ ಮಧ್ಯೆ ಜಯಲಲಿತಾ ಅವರ ನಿಕಟವರ್ತಿ ಶಶಿಕಲಾ, ಬಂಧುಗಳಾದ ವಿ.ಎನ್. ಸುಧಾಕರನ್ ಮತ್ತು ಇಳವರಸಿ ಅವರೂ ಜಾಮೀನು ಕೋರಿಕೆ ಅರ್ಜಿಯೊಂದಿಗೆ ಶಿಕ್ಷೆ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. 66.65 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ವಿಶೇಷ ನ್ಯಾಯಾಧೀಶ ಜಾನ್ ಮೈಕೆಲ್ ಡಿ'ಕುನ್ಹಾ ಅವರಿಂದ ಸೆಪ್ಟೆಂಬರ್ 27ರಂದು ಅಪರಾಧಿ ಎಂಬುದಾಗಿ ಘೋಷಿತರಾಗಿ 4 ವರ್ಷಗಳ ಸೆರೆವಾಸಕ್ಕೆ ಜಯಲಲಿತಾ ಗುರಿಯಾಗಿದ್ದರು.

2014: ನವದೆಹಲಿ: ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಅನಂತ ಗೀತೆ ಅವರು ನರೇಂದ್ರ ಮೋದಿ ಅವರ ಸಂಪುಟಕ್ಕೆ ರಾಜೀನಾಮೆ ನೀಡಲು ಸಜ್ಜಾಗುವುದರೊಂದಿಗೆ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವಣ ಘರ್ಷಣೆ ರೈಸೀನಾ ಹಿಲ್ಸ್ ತಲುಪಿತು. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಈ ಬಗ್ಗೆ ಸುಳಿವು ನೀಡಿದರು. ಅನಂತ ಗೀತೆ ಅವರು ಎನ್​ಡಿಎ ಸರ್ಕಾರದಲ್ಲಿ ಶಿವಸೇನೆಯ ಏಕೈಕ ಸಚಿವರಾಗಿದ್ದು, ಮೋದಿ ಅವರು ಅಮೆರಿಕ ಪ್ರವಾಸ ಮುಗಿಸಿ ಹಿಂತಿರುಗಿದ ಬಳಿಕ ಸಂಪುಟ ತ್ಯಜಿಸುವ ಸಾಧ್ಯತೆ ಎನ್ನಲಾಯಿತು. ಅನಂತ ಗೀತೆ ಅವರು ಸಂಪುಟದಲ್ಲಿ ಮುಂದುವರಿಯುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂಬುದಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ ಒಂದು ದಿನದ ಬಳಿಕ ಗೀತೆ ಅವರ ರಾಜೀನಾಮೆ ವಿಚಾರ ಬಂದಿತು. ಅಕ್ಟೋಬರ್ 15ರಂದು ನಡೆಯುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ಕುರಿತ ಎರಡು ವಾರಗಳ ಬಿರುಸಿನ ಮಾತುಕತೆ ವೈಫಲ್ಯದ ಬಳಿಕ ಕಳೆದ ವಾರ ಬಿಜೆಪಿ ಮತ್ತು ಶಿವಸೇನೆ ತಮ್ಮ 25 ವರ್ಷಗಳ ಮೈತ್ರಿಯನ್ನು ಕಡಿದುಕೊಂಡಿದ್ದವು.

2008: ಜಮ್ಮಿವಿನ ದೋಡಾ ಜಿಲ್ಲೆಯಲ್ಲಿ ಬಸ್ಸೊಂದು 500 ಅಡಿ ಆಳದ  ಕಂದಕಕ್ಕೆ ಉರುಳಿ ಬಿದ್ದು ಆರು ಜನ  ಮೃತರಾಗಿ 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ  ಘಟನೆ ಘಟಿಸಿತು. ದೋಡಾ ಜಿಲ್ಲೆಯಿಂದ ಸುಮಾರು 200 ಕಿ.ಮೀ. ದೂರದ  ಭದೇರ್ ವಾಹ್ನಿಂದ ಮೂವತ್ತು ಜನರನ್ನು ಹೊತ್ತು ಪ್ರಯಾಣಿಸುತ್ತಿದ್ದ ಈ ಬಸ್ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿ ಬಿತ್ತು..

2008: ಜಾರ್ಖಂಡಿನ ಪಲಮಾವು ಜಿಲ್ಲೆಯಲ್ಲಿ ಮಾವೋ ಉಗ್ರರು ಶಾಲಾ ಕಟ್ಟಡವನ್ನು ಸ್ಫೋಟಿಸಿದರು. ಅಂದಾಜು 20 ರಿಂದ 30ರಷ್ಟಿದ್ದ ಸಿಪಿಐ-ಮಾವೊ ಉಗ್ರರು ಶಾಲೆ ಸುತ್ತುವರಿದು ಕಟ್ಟಡವನ್ನು ಸ್ಫೋಟಿಸಿದರು.  ಈ ಘಟನೆಯಲ್ಲಿ ಯಾರೂ ಗಾಯಗೊಳಲಿಲ್ಲ. ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಪಡೆಗಳು ಈ ಶಾಲೆಯನ್ನು ಬಳಸುತ್ತಿದ್ದವು. ಈ ಕಾರಣದಿಂದಲೇ ಅದನ್ನು ಸ್ಫೋಟಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

2008: ಸಾರ್ವಜನಿಕರ ಪ್ರವೇಶವಿರುವ ಖಾಸಗಿ ಕಚೇರಿಗಳೂ ಸೇರಿದಂತೆ ಜನರು ಸೇರುವ ಎಲ್ಲಾ ಸ್ಥಳಗಳಲ್ಲಿ ಗಾಂಧಿ ಜಯಂತಿ ದಿನವಾದ ಅ.2ರಿಂದ ಧೂಮಪಾನ ನಿಷೇಧವನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ನೀಡಿತು. ವಕೀಲರ ಕಚೇರಿ, ಚಾರ್ಟರ್ಡ್ ಅಕೌಂಟೆಂಟ್ ಕಚೇರಿ, ವೈದ್ಯರ ಕ್ಲಿನಿಕ್, ವಾಸ್ತುಶಿಲ್ಪಿಗಳ ಕಚೇರಿ ಹಾಗೂ ಸಾರ್ವಜನಿಕರ ಪ್ರವೇಶವಿರುವ ಇನ್ನಿತರ ಖಾಸಗಿ ಕಚೇರಿಗಳಿಗೆ ಇದು ಅನ್ವಯವಾಗುವುದು.

2007: ಮುಖ್ಯಮಂತ್ರಿ ವಿರುದ್ಧ ಕೊಲೆ ಆರೋಪ ಮಾಡುವುದರ ಮೂಲಕ ಮಿತ್ರಪಕ್ಷದೊಂದಿಗೆ ವೈಮನಸ್ಯಕ್ಕೆ ಕಾರಣವಾಗಿ, ಅಧಿಕಾರ ಹಸ್ತಾಂತರದ ವಿಚಾರದಲ್ಲಿ ಗೊಂದಲಕ್ಕೆ ಕಾರಣರಾದ ಪ್ರವಾಸೋದ್ಯಮ ಸಚಿವ ಬಿ. ಶ್ರೀರಾಮುಲು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಡಿ.ವಿ.ಸದಾನಂದಗೌಡರಿಗೆ ಸಚಿವ ಸ್ಥಾನದ ರಾಜೀನಾಮೆ ಪತ್ರ ಸಲ್ಲಿಸಿದರು. ಇದರೊಂದಿಗೆ ರಾಜ್ಯ ರಾಜಕೀಯ ಹಾಗೂ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಎದ್ದಿದ್ದ ಬೆಂಕಿಯನ್ನು ಬಿಜೆಪಿ ವರಿಷ್ಠರು ಶ್ರೀರಾಮುಲು ರಾಜೀನಾಮೆ ಪಡೆಯುವ ಮೂಲಕ ಶಮನಗೊಳಿಸಿದಂತಾಯಿತು. ಬಳ್ಳಾರಿಯಿಂದ ಹೆಲಿಕಾಪ್ಟರಿನಲ್ಲಿ ಆಗಮಿಸಿದ ಶ್ರೀರಾಮುಲು ಅವರು ರಾಜ್ಯದಲ್ಲಿಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯಶವಂತ ಸಿನ್ಹಾ, ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಇತರೆ ಹಿರಿಯ ಸಚಿವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಪತ್ರದಲ್ಲಿ `ಪಕ್ಷದ ಹಿತಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ' ಎಂದು ಶ್ರೀರಾಮುಲು ವಿವರಿಸಿದರು. ಮುಖ್ಯಮಂತ್ರಿ ವಿರುದ್ಧವೇ ಮೊಕದ್ದಮೆ ಹೂಡಿದ ಹಿನ್ನೆಲೆಯಲ್ಲಿ ಹಸ್ತಾಂತರ ವಿಚಾರದಲ್ಲಿ ಬಿಜೆಪಿ ವರಿಷ್ಠರ ಜೊತೆ ಚರ್ಚೆನಡೆಸಲು ನವದೆಹಲಿಗೆ ತೆರಳಿದ್ದ ಜೆಡಿ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಮಾತುಕತೆ ನಡೆಸದೆ ವಾಪಸಾಗಿದ್ದರು. ಇದರ ಜೊತೆ ಬಳ್ಳಾರಿ ಘಟನೆಯಿಂದ ರಾಜಕೀಯವಾಗಿ ಹೆಚ್ಚೂ ಕಡಿಮೆಯಾದರೆ ತಾವು ಹೊಣೆಯಲ್ಲ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎಚ್ಚರಿಸಿದ್ದರು.

2007: ಆಧುನಿಕ ಪ್ರಜ್ಞೆಯ ಕವಿ, ಕನ್ನಡ ಸಾರಸ್ವತ ಲೋಕದ ವಿಶಿಷ್ಟ ಧ್ವನಿ, ವೀ. ಚಿಕ್ಕವೀರಯ್ಯ (ವೀಚಿ) (77) ಅವರು ತುಮಕೂರಿನ ಸ್ವಗೃಹದಲ್ಲಿ ನಿಧನರಾದರು. ಸಾಹಿತಿ ವೀಚಿ ಅವರದ್ದು ಬಹುಮುಖ ವ್ಯಕ್ತಿತ್ವ. ಓದಿದ್ದು ಮೆಟ್ರಿಕ್ಯುಲೇಷನ್. ಆದರೆ ಜೀವನ ಅನುಭವ ಪದವಿಗಳ ಮಿತಿಯನ್ನು ಮೀರಿದ್ದು. ಅತ್ಯಂತ ಸರಳ, ಸಜ್ಜನಿಕೆಯ ವೀಚಿ ಕೃಷಿಕರಾಗಿ, ಸಮಾಜ ಸೇವಕರಾಗಿ, ಸಮಾಜಕ್ಕಾಗಿ ರಾಜಕೀಯ ಪ್ರವೇಶಿಸಿದ ವಿಶಿಷ್ಟ ವ್ಯಕ್ತಿಯಾಗಿ ತುಮಕೂರಿನ ಬದುಕನ್ನು ಶ್ರೀಮಂತಗೊಳಿಸಿದವರು. `ಪ್ರಣಯ ಚೈತ್ರ' ಇವರ ಮೊದಲ ಕವನ ಸಂಕಲನ. `ವಿಷಾದ ನಕ್ಷೆ', `ಸಂಕರತಳಿ', `ನವಿಲ ಮನೆ', `ಅಭಿನಯದ ಬಯಲು', `ನಿತ್ಯ ಮದುವಣಗಿತ್ತಿ', `ಮಹಾಯಾನ', `ಹಸಿವಿನ ಲೋಕ', `ಹಿಡಿ ಶಾಪ', `ಬಂತೆಂದರೂ ಇದ್ದುದಿದ್ದೆಯಿತ್ತು' ಇತರ ಕವನ ಸಂಕಲನಗಳು. `ಸಿದ್ದರಬೆಟ್ಟ', `ಇವರು ನನ್ನವರು', `ನೆಚ್ಚಿನವರು' ಮತ್ತು `ಇಷ್ಟಮಿತ್ರರು' ವೀಚಿಯವರ ಪ್ರಮುಖ ಗದ್ಯ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಅವರು ಪಾತ್ರರಾಗಿದ್ದರು. 1971ರಿಂದ 1973ರವರೆಗೆ ತುಮಕೂರು ನಗರಸಭೆಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ವೀಚಿ ಬೈಸಿಕಲ್ಲಿನಲ್ಲಿ ಸುತ್ತಾಡುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಕವಿ ವೀ.ಚಿಕ್ಕವೀರಯ್ಯ (ವೀಚಿ)  ತುಮಕೂರು ಸಮೀಪದ ಅಮೀನುದ್ದೀನ್ ಸಾಹೇಬರ ಪಾಳ್ಯದಲ್ಲಿ ನವೆಂಬರ್ 5, 1930ರಂದು ಜನಿಸಿದರು.

2007: ಭಾರತದ ವಿಶ್ವನಾಥನ್ ಆನಂದ್ ಮೆಕ್ಸಿಕೊ ಸಿಟಿಯಲ್ಲಿ ಮುಕ್ತಾಯವಾದ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ವಿಶ್ವದ ಎಂಟು ಶ್ರೇಷ್ಠ ಆಟಗಾರರು ಪೈಪೋಟಿ ನಡೆಸಿದ 14 ಸುತ್ತುಗಳ ಡಬಲ್ ರೌಂಡ್ ರಾಬಿನ್ ಲೀಗ್ ಮಾದರಿಯ ಈ ಟೂರ್ನಿಯಲ್ಲಿ ಆನಂದ್ ಉತ್ತಮ ಪ್ರದರ್ಶನದಿಂದ ಗಮನ ಸೆಳೆದು, ಅಗ್ರಸ್ಥಾನದ ಗೌರವ ಪಡೆದು ಕೊಂಡರು. 14ನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ ಆನಂದ್ ಅವರು ಪೀಟರ್ ಲೆಕೊ ಜೊತೆಗೆ ಪಾಯಿಂಟು ಹಂಚಿಕೊಂಡರು.

2007: ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಶಾಲಾ- ಕಾಲೇಜುಗಳಲ್ಲಿ ಮೊಬೈಲ್ ದೂರವಾಣಿ ಬಳಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದು ಅದು ಅಕ್ಟೋಬರ್ 5ರಿಂದ ಜಾರಿಗೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಅರವತ್ತರ ಹರೆಯದ ಮಹಿಳೆಯೊಬ್ಬಳು ಪ್ರಣಾಳ ಶಿಶು ವಿಧಾನದ ಮೂಲಕ ಪುಣೆಯ ಆಸ್ಪತ್ರೆಯೊಂದರಲ್ಲಿ ತನ್ನ ಪುತ್ರಿಯ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಏಕಕಾಲದಲ್ಲಿ ಈ ಅವಳಿ ಮಕ್ಕಳಿಗೆ ಅಮ್ಮ ಹಾಗೂ ಅಜ್ಜಿಯಾದರು. ಈ ಅಜ್ಜಿಯ ಪುತ್ರಿ ಕ್ಯಾನ್ಸರಿನಿಂದ ಬಳಲುತ್ತಿದ್ದ ಕಾರಣ ಕೃತಕ ಗರ್ಭ ಧಾರಣೆಯ ಮೂಲಕ ಬಾಡಿಗೆ ತಾಯಿಯ ಗರ್ಭದಲ್ಲಿ ವಂಶದ ಕುಡಿ ಬೆಳೆಸಲು ಸಾಧ್ಯ ಎಂದು ವೈದ್ಯರು  ಹೇಳಿದ್ದರು. ಅಮೆರಿಕದಲ್ಲಿದ್ದ ಈ ಮಹಿಳೆ ತನ್ನ ಮಗುವಿಗೆ ಕುಟುಂಬದವರೇ ಬಾಡಿಗೆ ತಾಯಿ ಆಗಬೇಕೆಂದು ಬಯಸಿದಾಗ, ಮಗಳಿಗೆ ಮಕ್ಕಳನ್ನು ಹೆತ್ತು ಕೊಡಲು ಹೆತ್ತಮ್ಮನೇ ಮುಂದೆ ಬಂದರು. ಕೃತಕ ಗರ್ಭಧಾರಣೆ  ಮೂಲಕ ಇವರು ತಮ್ಮ ಪುತ್ರಿಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು ಎಂದು ಪುಣೆಯ ರುಬಿ ಹಾಲ್ ಕ್ಲಿನಿಕ್ಕಿನ ಕೃತಕ ಗರ್ಭಧಾರಣೆ ವಿಭಾಗದ ಮುಖ್ಯಸ್ಥೆ ಡಾ. ಸುನೀತಾ ತೆಂಡೂಲ್ ವಾಡ್ಕರ್ ಸುದ್ದಿಗಾರರಿಗೆ ತಿಳಿಸಿದರು. ಅವಳಿ ಮಕ್ಕಳು ಕ್ರಮವಾಗಿ 1.7 ಕೆ.ಜಿ ಹಾಗೂ 1.4 ಕೆ.ಜಿ ತೂಕ ಹೊಂದಿದ್ದು ಆರೋಗ್ಯವಾಗಿದ್ದವು.

 2007: ರಿಲಯನ್ಸ್ ಸಮೂಹ ಉದ್ಯಮಿ ಮುಖೇಶ್ ಅಂಬಾನಿ ಅವರಿಗೆ ಬರೋಡಾದ ಮಹಾರಾಜಾ ಸಯಾಜಿರಾವ್ ವಿಶ್ವವಿದ್ಯಾಲಯವು ಡಾಕ್ಟ್ರೇಟ್ ಪದವಿ ನೀಡಿ ಗೌರವಿಸಿತು.

2006: ಎರಡು ವಿಮಾನಗಳ ಪರಸ್ಪರ ಡಿಕ್ಕಿಯ ಬಳಿಕ ಬ್ರೆಜಿಲಿನ ಅಮೆಜಾನ್ ಅರಣ್ಯ ಪ್ರದೇಶದಲ್ಲಿ ಬ್ರೆಜಿಲ್ ಜೆಟ್ ವಿಮಾನ ನೆಲಕ್ಕೆ ಅಪ್ಪಳಿಸಿ ಅದರಲ್ಲಿದ್ದ 115 ಜನ ಮೃತರಾದರು. ಬ್ರೆಜಿಲಲಿನ ಇತಿಹಾಸದಲ್ಲೇ ಇದು ಅತಿ ಭೀಕರ ವಿಮಾನ ದುರಂತ ಎನಿಸಿತು. ಬೋಯಿಂಗ್ 737-800 (ಗೋಲ್ ಏರ್ ಲೈನ್ಸ್ ಫ್ಲೈಟ್ 1907) ವಿಮಾನ ಮತ್ತು ಸಣ್ಣ ಎಕ್ಸಿಕ್ಯೂಟಿವ್ ವಿಮಾನ ಗಗನದಲ್ಲಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಗೋಲ್ ಏರ್ ಲೈನ್ಸ್ ವಿಮಾನ ಅಮೆಜಾನ್ ದಟ್ಟ ಅರಣ್ಯದಲ್ಲಿ ನೆಲಕ್ಕೆ ಅಪ್ಪಳಿಸಿತ್ತು. ಬ್ರೆಜಿಲಿನಲ್ಲಿ ಹಿಂದೆ 1982ರಲ್ಲಿ ಸಂಭವಿಸಿದ್ದ ಬೋಯಿಂಗ್ 727 ವಿಮಾನ ಅಪಘಾತದಲ್ಲಿ 137 ಜನ ಮೃತರಾಗಿದ್ದುದೇ ರಾಷ್ಟ್ರದ ಅತಿ ಭೀಕರ ಅಪಘಾತವಾಗಿತ್ತು. ವಾಸ್ಪ್ ಏರ್ ಲೈನ್ಸಿನ ಈ ವಿಮಾನ ಅಪಘಾತ ಫೋರ್ಟ್ ಲೇಜಾ ನಗರದ ಈಶಾನ್ಯ ಭಾಗದಲ್ಲಿ ಸಂಭವಿಸಿತ್ತು.

2006: ಎರಡು ಕೋಟಿ ಡಾಲರ್ (ಸುಮಾರು 90 ಕೋಟಿ ರೂಪಾಯಿ) ಶುಲ್ಕ ತೆತ್ತು ಅಂತರಿಕ್ಷ ಯಾತ್ರೆ ಕೈಗೊಂಡಿದ್ದ ಇರಾನ್ ಮೂಲದ ಮಹಿಳೆ ಅನೌಷಿ ಅನ್ಸಾರಿ ಈದಿನ ಬೆಳಗ್ಗೆ ಸುರಕ್ಷಿತವಾಗಿ ಧರೆಗೆ ವಾಪಸಾದರು. ಈ ಮೂಲಕ ಕುತೂಹಲಕ್ಕೆ ಯಾತ್ರೆ ಕೈಗೊಂಡು ಯಶಸ್ವಿಯಾಗಿ ಮುಗಿಸಿದ ವಿಶ್ವದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಅನೌಷಿ ಪಾತ್ರರಾದರು. ಅವರು ಸೆಪ್ಟೆಂಬರ 18ರಂದು ಬೈಕನೂರ್ ಉಡಾವಣಾ ಕೇಂದ್ರದಿಂದ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣ ಹೊರಟಿದ್ದರು.

2006: ಮಾಜಿ ನಟಿ, ಭೂಗತ ಪಾತಕಿ ಅಬು ಸಲೇಂನ ಗೆಳತಿ ಮೋನಿಕಾ ಬೇಡಿ ಅವರಿಗೆ ಹೈದರಾಬಾದಿನ ನಾಂಪಲ್ಲಿ ಕ್ರಿಮಿನಲ್ ನ್ಯಾಯಾಲಯಗಳಲ್ಲಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರು ಪಾಸ್ ಪೋರ್ಟ್ಟ್ ನಕಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಸಜೆ ಹಾಗೂ 5000 ರೂಪಾಯಿಗಳ ದಂಡ ವಿಧಿಸಿದರು. ಮೋನಿಕಾಳನ್ನು 2005ರ ನವೆಂಬರ್ 11ರಂದು ಪೋಚರ್ುಗಲ್ಲಿನಿಂದ ಗಡೀಪಾರು ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ನಿವೃತ್ತ ಎಎಸ್ ಐ ಅಬ್ದುಲ್ ಸತ್ತಾರ್ ಮತ್ತು ಪೋಸ್ಟ್ ಮ್ಯಾನ್ ಗೋಕರಿ ಸಾಹೇಬ್ ಗೂ ನ್ಯಾಯಾಲಯ ತಲಾ ಐದು ವರ್ಷಗಳ ಸೆರೆವಾಸವನ್ನು ವಿಧಿಸಿತು.

2006: ಭಾರತ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ಎರಪಳ್ಳಿ ಪ್ರಸನ್ನ ಅವರನ್ನು ಮುಂಬೈಯಲ್ಲಿ ಕ್ಯಾಸ್ಟ್ರಾಲ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2006: ರಾಯಚೂರಿನ ಹಿಂದೂಸ್ಥಾನಿ ಸಂಗೀತಗಾರ ಪಂಡಿತ್ ಮಾಣಿಕರಾವ್ ರಾಯಚೂರಕರ್ ಅವರು 2006ನೇ ಸಾಲಿನ `ರಾಜ್ಯ ಸಂಗೀತ ವಿದ್ವಾನ್' ಪ್ರಶಸ್ತಿಗೆ ಆಯ್ಕೆಯಾದರು.

2006: ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಐದು ದಿನಗಳ ಚಾರಿತ್ರಿಕ ಅಧಿವೇಶನ ಮುಕ್ತಾಯಗೊಂಡಿತು.

1991: ಆಗ್ರಾ ಘರಾಣಾದ ಖ್ಯಾತ ಗಾಯಕ ಉಸ್ತಾದ್ ಯೂನಸ್ ಹುಸೇನ್ ಖಾನ್ ನಿಧನರಾದರು.

1981: ನೂರ ಹದಿನೇಳು ಜನರಿದ್ದ ಇಂಡಿಯನ್ ಏರ್ ಲೈನಿನ ಬೋಯಿಂಗ್-737 ವಿಮಾನವನ್ನು ಪಾಕಿಸ್ಥಾನದ ಲಾಹೋರಿಗೆ ಅಪಹರಿಸಲಾಯಿತು. ದೆಹಲಿಯಿಂದ ಶ್ರೀನಗರಕ್ಕೆ ಅಮೃತಸರ ಮಾರ್ಗವಾಗಿ ಹೊರಟಿದ್ದಾಗ ಈ ಅಪಹರಣ ನಡೆಯಿತು.

1962: ಏಷ್ಯಾದ ಮೊತ್ತ ಮೊದಲ ತಾರಾಲಯ `ಬಿರ್ಲಾ ಪ್ಲಾನೆಟೇರಿಯಂ' ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತ) ಉದ್ಘಾಟನೆಗೊಂಡಿತು.

1936: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಬಾರಿಗೆೆ ರೇಡಿಯೋ ಬಳಸಲಾಯಿತು.

1934: ಕೀಟ ಸಂಶೋಧನಾ ಅಧಿಕಾರಿ, ಛಾಯಾಗ್ರಾಹಕ, ಸಾಹಿತಿ ಕೃಷ್ಣಾನಂದ ಕಾಮತ್ (29-9-1934ರಿಂದ 20-2-2002) ಅವರು ಲಕ್ಷ್ಮಣ ವಾಸುದೇವ ಕಾಮತ್- ರಮಾಬಾಯಿ ದಂಪತಿಯ ಮಗನಾಗಿ ಹೊನ್ನಾವರದಲ್ಲಿ ಜನಿಸಿದರು.

1931: ಸಾಹಿತಿ ನೀಲತ್ತಳ್ಳಿ ಕಸ್ತೂರಿ ಜನನ.

1930: ಸಾಹಿತಿ ಕೃ. ನಾರಾಯಣರಾವ್ ಜನನ.

1919: ಸಾಹಿತಿ ಮಹಾಲಕ್ಷ್ಮೀ ಜನನ.

1914: ಎಸ್ ಎಸ್ ಕೊಮಾಗತಮಾರು ಹಡಗು ವ್ಯಾಂಕೋವರಿನಿಂದ ಕಲ್ಕತ್ತಾದ ಬಜ್ ಬಜ್ ಸಮೀಪ ಬಂದಿತು. ಬ್ರಿಟಿಷ್ ರಾಜ್ಯಕ್ಕೆ ಸವಾಲು ಹಾಕಿದ್ದಕ್ಕಾಗಿ 17 ಯುವಕರನ್ನು ಕೊಂದು 202 ಜನರನ್ನು ಸೆರೆಮನೆಗೆ ತಳ್ಳಲಾಯಿತು. ಮಾರ್ಚಿಯಲ್ಲಿ ಘದರ್ ಚಳವಳಿಯ ಅಂಗವಾಗಿ ಇದೇ ಹಡಗು ಹಾಂಕಾಂಗಿನಿಂದ ವ್ಯಾಂಕೋವರಿಗೆ ಪ್ರಯಾಣ ಬೆಳೆಸಿತು. ಆದರೆ ಜುಲೈ 28ರಂದು ಅದನ್ನು ಬಲಾತ್ಕಾರವಾಗಿ ವ್ಯಾಂಕೋವರಿನಿಂದ ಹೊರಕ್ಕೆ ಕಳುಹಿಸಲಾಯಿತು.

1829: ಲಂಡನ್ನಿನ ಮಾನ್ಯತೆ ಪಡೆದ ಪೊಲೀಸ್ ಪಡೆ ಲಂಡನ್ನಿನ ಬೀದಿಗಳಲ್ಲಿ ಕರ್ತವ್ಯ ನಿರ್ವಹಿಸಲು ಆರಂಭಿಸಿತು. ಮುಂದೆ ಇದೇ ಪೊಲೀಸ್ ಪಡೆ `ಸ್ಕಾಟ್ಲೆಂಡ್ ಯಾರ್ಡ್' ಎಂಬ ಹೆಸರು ಪಡೆಯಿತು.

1725: ರಾಬರ್ಟ್ ಕ್ಲೈವ್ (1725-1774) ಜನ್ಮದಿನ. ಪ್ಲಾಸಿ ಕದನದಲ್ಲಿ ಮುಖ್ಯಪಾತ್ರ ವಹಿಸಿದ್ದ ಈತ ಬಂಗಾಳದ ಮೊದಲ ಬ್ರಿಟಿಷ್ ಆಡಳಿತಗಾರನಾಗಿದ್ದು, ಭಾರತದಲ್ಲಿ ಬ್ರಿಟಿಷ್ ಅಧಿಕಾರ ಸ್ಥಾಪನೆ ಮಾಡಿದ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment