Sunday, December 9, 2018

ಇಂದಿನ ಇತಿಹಾಸ History Today ಡಿಸೆಂಬರ್ 09

ಇಂದಿನ ಇತಿಹಾಸ History Today ಡಿಸೆಂಬರ್  09
2018: ಕಣ್ಣೂರು: ಕಣ್ಣೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಳಗ್ಗೆ ಲೋಕಾರ್ಪಣೆಗೊಳ್ಳುವ ಮೂಲಕ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಏಕೈಕ ರಾಜ್ಯ ಎಂಬ ಹಿರಿಮೆಗೆ ಕೇರಳ ಪಾತ್ರವಾಯಿತು.  ಕೇರಳದ ಇತರ ಮೂರು ಅಂತಾರಾಷ್ಟ್ರೀಯ ಏರ್ಪೋರ್ಟ್ ಗಳೆಂದರೆ - ತಿರುವನಂತ ಪುರಂ,  ಕೊಚ್ಚಿ, ಕೊಯಿಕ್ಕೋಡ್‌.  ಕರ್ನಾಟಕದ ಗಡಿಯಲ್ಲಿರುವ ಏರ್ಪೋರ್ಟ್ನಿಂದ ರಾಜ್ಯದ ವಾಣಿಜ್ಯೋದ್ಯಮಕ್ಕೂ ಸಾಕಷ್ಟು ಅನುಕೂಲ ಆಗಲಿದೆಬೆಳಗ್ಗೆ 10.07ಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಹಾಗೂ ಕೇಂದ್ರ ವಿಮಾನಯಾನ ಸಚಿವ ಸುರೇಶ್ಪ್ರಭು ಜತೆಯಾಗಿ ಹಸಿರು ನಿಶಾನೆ ತೋರಿಸುವ ಮೂಲಕ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದರು. ಬೆಳಗ್ಗೆ 10.12ಕ್ಕೆ 185 ಪ್ರಯಾಣಿಕರನ್ನೊಳಗೊಂಡ ಏರ್ಇಂಡಿಯಾ ವಿಮಾನ ಅಬುದಾಬಿಗೆ ಟೇಕಾಫ್ಆಯಿತು. ಮೊದಲ ವಿಮಾನದಲ್ಲಿ ಪೈಲಟ್ಆಗಿ ವಿವೇಕ್ಕುಲಕರ್ಣಿ ಹಾಗೂ ಸಹ ಪೈಲಟ್ಆಗಿ ಮಂಜರೇಕ್ಕರ್ಇದ್ದರು. ಇದೇ ವಿಮಾನ ಅಬುದಾಬಿಯಿಂದ ರಾತ್ರಿ 7.30ಕ್ಕೆ ಕಣ್ಣೂರಿಗೆ ವಾಪಸಾಯಿತು. ಉದ್ಘಾಟನಾ ಸಮಾರಂಭದ ಅಂಗವಾಗಿ ಕಥಕ್ಕಳಿ, ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ಕಲೆಗಳ ಪ್ರದರ್ಶನ ನಡೆಯಿತು. ಸಾರ್ವಜನಿಕರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಲು ಉಚಿತ ಬಸ್ಸೇವೆಯನ್ನು ಕಣ್ಣೂರು ಅಂತಾರಾಷ್ಟ್ರೀಯ ಏರ್ಪೋರ್ಟ್ಲಿಮಿಟೆಡ್‌(ಕಿಯಾಲ್‌) ವ್ಯವಸ್ಥೆಗೊಳಿಸಿತ್ತು. ಇದರಿಂದ * ಮೈಸೂರು, ಕೊಡಗು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳಿಗೆ ಹೆಚ್ಚು ಪ್ರಯೋಜನವಾಗುವ ಸಾಧ್ಯತೆ ಇದೆ.  *  ಜಿಲ್ಲೆಗಳಲ್ಲಿ ಬೆಳೆಯುವ ಕೃಷಿ ಹಾಗೂ ಪುಷ್ಪೋದ್ಯಮಕ್ಕೆ ವಿದೇಶದಲ್ಲಿ ಮಾರುಕಟ್ಟೆ ದೊರೆಯಲಿದೆ. * ಉಭಯ ರಾಜ್ಯಗಳ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ.  * ಕಣ್ಣೂರು-ವಿರಾಜಪೇಟೆ-ಮೈಸೂರು ಸಂಪರ್ಕ ಮೇಲ್ದರ್ಜೆಗೆ ಏರಲಿದ್ದು, ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಲಿದೆ

2018: ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ತ್ವರಿತ ಕ್ರಮ ಕೈಗೊಳ್ಳುವ ಮೂಲಕ ಮೋದಿ ಸರಕಾರ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ತಾಕೀತು ಮಾಡಿತು. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ 'ಧರ್ಮ ಸಂಸತ್‌' ಸಭೆಯಲ್ಲಿ ಸಭೆಯಲ್ಲಿ ಬೃಹತ್ಶಕ್ತಿ ಪ್ರದರ್ಶನದ ಮೂಲಕ ಸರಕಾರದ ಮೇಲೆ ವಿಎಚ್ಪಿ ಸಂಬಂಧ ಮತ್ತಷ್ಟು ಒತ್ತಡ ಹೆಚ್ಚಿಸಿತು.  ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಎಚ್ಪಿ ಕಾರ್ಯಕಾರಿಣಿ ಮುಖ್ಯಸ್ಥ ಸುರೇಶ್ಭಯ್ಯಾಜಿ, ''ರಾಮ ಮಂದಿರಕ್ಕಾಗಿ ಜನರು ಭಿಕ್ಷೆ ಬೇಡುವ ಅಗತ್ಯವಿಲ್ಲ. ಮೋದಿ ಅವರು ಕೊಟ್ಟ ಭರವಸೆಯನ್ನು ಈಡೇರಿಸಬೇಕಷ್ಟೇ,''ಎಂದು ಹೇಳಿದರು


2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು  ತಮ್ಮನ್ನು  ’ಸ್ಟಕ್ ಗ್ರಾಮೋಫೋನ್ ಗೆ ಹೋಲಿಸಿ ಮಾಡಿದ್ದ ಟೀಕೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎರಡು ತಿಂಗಳ ಬಳಿಕ ಪ್ರಧಾನಿಯ ವಿಡಿಯೋ
ಒಂದನ್ನು ಟ್ವೀಟ್ ಮಾಡುವ ಮೂಲಕ ಎದಿರೇಟು ನೀಡಿದರು. ವಿಡಿಯೋದಲ್ಲಿ ಪ್ರಧಾನಿ ಮೋದಿಯವ ಭಾಷಣಗಳಲ್ಲಿ ಮಾಡಲಾಗಿರುವ ಗಾಂಧಿ ಕುಟುಂಬದ ಸದಸ್ಯರ ಕುರಿತ ಪುನರಾವರ್ತಿತ ಉಲ್ಲೇಖಗಳನ್ನು ಸೇರಿಸಿ, ರಿಮಿಕ್ಸ್ ಮಾಡಲಾಯಿತು. ಅಕ್ಟೋಬರ್ ತಿಂಗಳಲ್ಲಿ ಬಿಜೆಪಿ ನಾಯಕರ ಜೊತೆಗಿನ ಸಂವಾದದಲ್ಲಿ ಮೋದಿಯವರು ರಾಹುಲ್ ಗಾಂಧಿಯವರುಸ್ಟಕ್ ಗ್ರಾಮೋಫೋನ್ (ಅಂಟಿದ ಗ್ರಾಮೋಫೋನ್) ರೀತಿಯನ್ನು ತಮ್ಮ ಮಾತುಗಳನ್ನು ಪುನರಾವರ್ತನೆ ಮಾಡುತ್ತಿರುತ್ತಾರೆ. ಆದರೆ ಇಂತಹಬಾಲಿಶ ಪ್ರತಿಪಾದನೆಗಳನ್ನು ಮತ್ತು ಸರ್ಕಾರದ ವಿರುದ್ಧದ ಸುಳ್ಳುಗಳನ್ನು ಜನರು ಸ್ವೀಕರಿಸುವುದಿಲ್ಲ. ಇಂತಹ ಟೀಕೆಗಳನ್ನುಗೇಲಿ ಮಾಡುತ್ತಾರೆ ಎಂದು ಟೀಕಿಸಿದ್ದರು. ಗಾಂಧಿ ಕುಟುಂಬದ ಸದಸ್ಯರ ಕುರಿತ ಪುನರಾವರ್ತಿತ ಉಲ್ಲೇಖಗಳಿರುವ ಮೋದಿ ಭಾಷಣಗಳನ್ನು ಬೆರೆಸಿ ಮಾಡಲಾದ ವಿಡಿಯೋವನ್ನು  ಟ್ವೀಟ್ ಮಾಡುತ್ತಾ ಕಾಂಗ್ರೆಸ್ ಅಧ್ಯಕ್ಷರುನೋಡಿ ಆನಂದಿಸಬಹುದಾದ ವಿಡಿಯೋವನ್ನು ಮಿಸ್ಟರ್ ೩೬ ಅವರಿಂದ ಪ್ರಸ್ತುತ ಪಡಿಸಲಾಗಿದೆ. ಇದನ್ನು ನೋಡುವ ಮೂಲಕ ನೀವು ಆನಂದಿಸುವಿರಿ ಎಂದು ಭಾವಿಸುವೆ. ದಯವಿಟ್ಟು ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರ ಜೊತೆಗೆ ಹಂಚಿಕೊಳ್ಳಿ. ಅವರು ಕೂಡಾ ಇದನ್ನು ನೋಡಿ ಆನಂದ ಪಡಲಿ ಎಂದು ಬರೆದರು. ಮೋದಿ ಅವರು ಬಿಜೆಪಿ ಕಾರ್ಯಕರ್ತರ ಜೊತೆಗೆ ನಡೆಸುವ ಸಂವಾದದ ಜೊತೆಗೆ ವಿಡಿಯೋ ಆರಂಭವಾಗುತ್ತದೆ. ವಿಡಿಯೋದಲ್ಲಿ ಮೋದಿ ಅವರುಹಿಂದೆ ಗ್ರಾಮೋಫೋನ್ಗಳನ್ನು ಬಳಸಲಾಗುತ್ತಿತ್ತು. ಕೆಲವೊಮ್ಮ ಅದು ಸ್ಟಕ್ ಆಗಿ (ಸ್ಥಗಿತಗೊಂಡು) ಹಾಡಿದ ಹಾಡುಗಳನ್ನೇ ಪುನಃ ಪುನಃ ಹಾಡುತ್ತಿತ್ತು. ಕೆಲವು ವ್ಯಕ್ತಿಗಳು ಹೀಗೆಯೇ ಇರುತ್ತಾರೆ. ಒಂದು ವಿಷಯ ಅವರ ಮನಸ್ಸಿಗೆ ಬಂದರೆ ಅವರು ಅದನ್ನೇ ಪುನರಾವರ್ತನೆ ಮಾಡುತ್ತಿರುತ್ತಾರೆ ಎಂದು ಹೇಳಿದ್ದರು.    ಬಳಿಕ ವಿಡಿಯೋದಲ್ಲಿ ಮೋದಿ ಅವರು ತಮ್ಮ ಭಾಷಣಗಳಲ್ಲಿ ಗಾಂಧಿ ಕುಟುಂಬದ ಬಗ್ಗೆ ಮಾಡಿದ ಪುನರಾವರ್ತಿತ ಉಲ್ಲೇಕಗಳು ಬರುತ್ತವೆ. ಪ್ರಧಾನಿಯವರು ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಉಲ್ಲೇಖಿಸಿ ಬೇರೆ ಬೇರೆ ಸ್ಥಳಗಳಲ್ಲಿ ಮಾಡಿದ ಭಾಷಣಗಳನ್ನು , ರಾಹುಲ್ ಗಾಂಧಿಯವರು ಟ್ವೀಟ್ ಮಾಡಿದ ವಿಡಿಯೋದಲ್ಲಿ ರಿಮಿಕ್ಸ್ ಮಾಡಲಾಗಿತ್ತು.

2018: ಪ್ಯಾರಿಸ್: ಇಂಧನ ತೆರಿಗೆ ಹೆಚ್ಚಿಸಿದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ವಾರಾಂತ್ಯದಹಳದಿ ಉಡುಪು ಪ್ರತಿಭಟನೆ ಫ್ರಾನ್ಸಿನಾದ್ಯಂತ ನಾಲ್ಕನೇ ಶನಿವಾರ ಇಡೀದಿನ ಪೊಲೀಸ್ ಸಿಬ್ಬಂದಿ ಜೊತೆ ಘರ್ಷಣೆ, ಆಶ್ರುವಾಯು, ಜಲಫಿರಂಗಿ ಬಳಕೆಗೆ ಕಾರಣವಾಗಿ, ೧೭೦೦ ಮಂದಿಯನ್ನು ಪೊಲೀಸರು ಬಂಧಿಸಿದರು.  ಪ್ಯಾರಿಸ್ ನಗರ ಒಂದರಲ್ಲೇ ೯೨೦ ಜನರನ್ನು ಬಂಧಿಸಲಾಯಿತು.  ೧೭೯ ಮಂದಿ ಗಾಯಗೊಂಡರು. ಶನಿವಾರ ನಡುರಾತ್ರಿಯ ಬಳಿಕ ಪರಿಸ್ಥಿತಿ ತಹಬಂದಿಗೆ ಬರಲು ಆರಂಭವಾಯಿತು  ಎಂದು ವರದಿಗಳು ಹೇಳಿದವು. ಹಿಂದಿನ ವಾರಾಂತ್ಯ ಪ್ರತಿಭಟನೆಗಳ ಕಾಲದಲ್ಲಿ ತೀವ್ರ ಹಿಂಸಾಚಾರ ಸಂಭವಿಸಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಒಳಾಡಳಿತ ಸಚಿವ ಕ್ರಿಸ್ಟೋಫರ್ ಕ್ಯಾಸ್ಟನರ್ ಅವರು ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪುನಃ ಹಳದಿ ಉಡುಪು ಪ್ರತಿಭಟನಕಾರರ ಜೊತೆ ಮಾತುಕತೆಗೆ ಕರೆ ನೀಡಿದ ಪ್ರಧಾನಿ ಎಸ್ವರ್ಡ್ ಫಿಲಿಪ್ ಅವರುರಾಷ್ಟ್ರದ ಏಕತೆಯ ರಕ್ಷಣೆಗಾಗಿ ಅಧ್ಯಕ್ಷ ಮ್ಯಾಕ್ರೋನ್ ಅವರು ಹೊಸ ಕ್ರಮಗಳನ್ನು ಮುಂದಿನ ವಾರ ಪ್ರಕಟಿಸಲಿದ್ದಾರೆ ಎಂದು ಹೇಳಿದರುಫ್ರಾನ್ಸಿನಾದ್ಯಂತ ಸುಮಾರು ,೩೮,೦೦೦ ಮಂದಿ ಪ್ರತಿಭಟನೆಗೆ ಇಳಿದಿದ್ದರು. ಪೈಕಿ ೧೦,೦೦೦ ಮಂದಿ ಪ್ಯಾರಿಸ್ ನಗರ ಒಂದರಲ್ಲೇ ಪ್ರತಿಭಟನೆಯಲ್ಲಿ ತೊಡಗಿದ್ದರು ಎಂದು ಒಳಾಡಳಿತ ಸಚಿವಾಲಯ ಭಾನುವಾರ ಪ್ರಕಟಿಸಿದೆ. ಬೋರ್ಡೆಯಕ್ಸ್, ಟೌಲೋಸ್ನಲ್ಲೂ ಪೊಲೀಸರ ಜೊತೆ ಘರ್ಷಣೆಗಳು ಸಂಭವಿಸಿದ್ದು, ಹೆದ್ದಾರಿಗಳನ್ನು ಅಡ್ಡ ಗಟ್ಟಲಾಗಿತ್ತು.  ಫ್ರಾನ್ಸಿನಲ್ಲಿ ಇದು ನಾಲ್ಕನೇ ವಾರಾಂತ್ಯ ದಂಗೆಯಾಗಿದೆ. ಕಳೆದ ತಿಂಗಳು ನವೆಂಬರ್ ೧೭ರಂದು ಅತಿಯಾದ ಗ್ಯಾಸೋಲಿನ್ ತೆರಿಗೆ ವಿರುದ್ಧ ಆರಂಭವಾದ ಚಳವಳಿಯ ವ್ಯಾಪ್ತಿಗೆ ಈಗ ಇಂಧನ ಖರೀದಿ ಸೇರಿದಂತೆ ಹಲವಾರು ವಿಷಯಗಳ ಕುರಿತ ಬೇಡಿಕೆಗಳು ಸೇರ್ಪಡೆಯಾಗಿವೆ. ಮ್ಯಾಕ್ರೋನ್ ವಿರುದ್ಧ ಸಾಮಾನ್ಯ ಅಸಹನೆ ಪ್ರತಿಭಟನೆಗಳಿಗೆ ಮುಖ್ಯ ಕಾರಣ.  ಚಳವಳಿಯು ದೈತ್ಯನಿಗೆ ಜನ್ಮನೀಡಿದೆ ಎಂದು ಒಳಾಡಳಿತ ಸಚಿವ ಕ್ಯಾಸ್ಟನರ್ ಹೇಳಿದ್ದಾರೆ. ವಾರದ ಹಿಂದೆ ಕಾರುಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದ ಪ್ಯಾರಿಸ್ಸಿನಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ೮೦೦೦ಕ್ಕೂ ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಿದ್ದರೆ ದೇಶಾದ್ಯಂತ ೮೯,೦೦೦ ಪೊಲೀಸ್ ಅಧಿಕಾರಿಗಳನ್ನು ಇದೇ ಉದ್ದೇಶಕ್ಕಾಗಿ ನಿಯೋಜಿಸಲಾಗಿತ್ತುಸಾಮಾಜಿಕ ಮಾಧ್ಯಮದಿಂದ ಸಂಘಟಿತವಾಗಿರುವ ಬುಡಮಟ್ಟದ ಪ್ರತಿಭಟನೆಗೆ ಯಾವುದೇ ನಾಯಕತ್ವ ಇಲ್ಲ, ಆದರೆ ಫ್ರಾನ್ಸಿನ ಮೂರನೇ ಎರಡರಷ್ಟು ಜನರ ಬೆಂಬಲ ಇದೆ ಎಂದು ಸಮೀಕ್ಷೆಗಳು ಹೇಳಿವೆ.
ಹೆಚ್ಚಿನ ಪಿಂಚಣಿ, ಕನಿಷ್ಠ ವೇತನ ಏರಿಕೆ, ಇತರ ತೆರಿಗೆಗಳ ಪರಿಷ್ಕರಣೆ, ಸಂಪತ್ತು ತೆರಿಗೆಯ ಪುನಃಸ್ಥಾಪನೆ, ಕನಿಷ್ಠ ವೇತನ ನಿಗದಿಗೆ ಕಾನೂನು, ಅಧ್ಯಕ್ಷ ಮ್ಯಾಕ್ರೋನ್ ಬದಲಾವಣೆ, ನ್ಯಾಷನಲ್ ಅಸೆಂಬ್ಲಿ ಬದಲಿಗೆ ಪೀಪಲ್ಸ್ ಅಸೆಂಬ್ಲಿ ರಚನೆ ಇತ್ಯಾದಿ ಬೇಡಿಕೆಗಳನ್ನು ಚಳವಳಿಕಾರರು ಮುಂದಿಟ್ಟಿದ್ದರು. ರಾಜಕೀಯ ಪಕ್ಷಗಳು ಚಳವಳಿಗೆ ಬೆಂಬಲ ನೀಡಲು ಯತ್ನಿಸಿದ್ದರೂ, ಹಳದು ಉಡುಪುದಾರರು ಚಳವಳಿಗೆ ಯಾವುದೇ ರಾಜಕೀಯ ಸಂಪರ್ಕ ಕಲ್ಪಿಸಲು ನಿರಾಕರಿಸಿದ್ದರು.

2018: ನವದೆಹಲಿ: ೨೦೧೯ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕೈಗೊಂಡಿರುವ ಕ್ರಮ ಒಂದರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಲೋಕಸಭೆ ಮತ್ತು ರಾಜ್ಯ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸುವ ನಿರ್ಣಯಗಳನ್ನು ಅಂಗೀಕರಿಸುವಂತೆ ಪಕ್ಷ ಅಥವಾ ಸಮ್ಮಿಶ್ರ ಸರ್ಕಾರವು ಅಧಿಕಾರದಲ್ಲಿ ಇರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದರು. ಮಸೂದೆಯ ಅಂಗೀಕಾರಕ್ಕೆ ನಮ್ಮ ಬೆಂಬಲವನ್ನು ಪುನರುಚ್ಚರಿಸುವ ಸಲುವಾಗಿ ರಾಜ್ಯ ವಿಧಾನಸಭೆಗಳು ಲೋಕಸಭೆ ಮತ್ತು ರಾಜ್ಯ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು  ಮೀಸಲಿಡುವಂತೆ ಕರೆ ನೀಡುವ ನಿರ್ಣಯಗಳನ್ನು ತುರ್ತಾಗಿ ಅಂಗೀಕರಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ರಾಹುಲ್ ತಿಳಿಸಿದರು. ಸಂಸತ್ತಿನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಿದ ೧೯೩ ರಾಷ್ಟ್ರಗಳ ಪೈಕಿ ಭಾರತ ೧೪೮ನೇ ಸ್ಥಾನದಲ್ಲಿದೆ. ಇದು ರಾಜ್ಯ ವಿಧಾನಸಭೆಗಳಿಗಿಂತಲೂ ನಿಕೃಷ್ಟ ಪರಿಸ್ಥಿತಿ ಎಂದು ರಾಹುಲ್ ಬೊಟ್ಟು ಮಾಡಿದರು. ನಮ್ಮ ಪ್ರಜಾರಾಜ್ಯ ಪದ್ಧತಿಯಲ್ಲಿ ಮಹಿಳೆಯರಿಗೆ ನೀಡಲಾಗಿರುವ ಅಸಮರ್ಪಕ ಪ್ರಾತಿನಿಧ್ಯವು ನಮ್ಮ ಪ್ರಜಾಪ್ರಭುತ್ವವನ್ನು ಕಡೆಗಣಿಸುತ್ತದೆ ಮತ್ತು ಚಾಲ್ತಿಯಲ್ಲಿರುವ ವ್ಯವಸ್ಥಿತ ಅನ್ಯಾಯಗಳನ್ನು ಶಾಶ್ವತಗೊಳಿಸುತ್ತದೆ. ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಲ್ಲಿನ ಮಹಿಳೆಯರು ಪರಿಣಾಮಕಾರಿ ನಾಯಕರು ಮಾತ್ರವಲ್ಲ, ಸಾರ್ವಜನಿಕ ಬದುಕಿನಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಮೊಟಕುಗೊಳಿಸಿದ ಸಾಂಪ್ರದಾಯಿಕ ಪುರುಷ ಪ್ರಧಾನತೆಗೆ ಸವಾಲು ಎಸೆದಿದ್ದಾರೆ ಎಂದು ರಾಹುಲ್ ಅವರು ಡಿಸೆಂಬರ್ ೬ರ ತಮ್ಮ ಪತ್ರದಲ್ಲಿ ಹೇಳಿದರು. ಮಹಿಳಾ ಮೀಸಲಾತಿ ಮಸೂದೆಯನ್ನು ೨೦೧೦ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿತ್ತು. ಆದರೆ ೨೦೧೪ರಲ್ಲಿ ೧೫ನೇ ಲೋಕಸಭೆ ವಿಸರ್ಜನೆ ಬಳಿಕ ಮಸೂದೆ ರದ್ದಾಗಿತ್ತು. ರಾಹುಲ್ ಗಾಂಧಿಯವರ  ಹೊರತಾಗಿ ಒಡಿಶಾ ಮುಖ್ಯಮಂತ್ರಿ ಮತ್ತು ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರೂ ಡಿಸೆಂಬರ್ ೪ರ ಮಂಗಳವಾರ ಎಲ್ಲ ಮುಖ್ಯಮಂತ್ರಿಗಳಿಗೆ ಶೇಕಡಾ ೩೩ರ ಮೀಸಲಾತಿ ಕಲ್ಪಿಸಲು ಬೆಂಬಲ ನೀಡುವಂತೆ ಕೋರಿ ಪತ್ರ ಬರೆದಿದ್ದರು.   ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ರಾಹುಲ್ ಗಾಂಧಿ ಅವರ ಪತ್ರ ಬಂದಿತು.  ಮಹಿಳೆಯರ ಹಿತದ ಸಲುವಾಗಿ ಬದ್ಧತೆ ಪ್ರದರ್ಶಿಸುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿರುವ ರಾಹುಲ್ಅಧಿವೇಶನದ ಅವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವನ್ನು ಖಚಿತಪಡಿಸುವಂತೆ ಕೋರಿದರು.

2018: ಲಂಡನ್:  ಅಂದಾಜು ೯೦೦೦ ಕೋಟಿ ರೂಪಾಯಿಗಳ ವಂಚನೆ ಹಾಗೂ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರ ಗಡೀಪಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ನಿನ ವೆಸ್ಟ್ ಮಿನ್ ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಲಿದ್ದು, ಮಲ್ಯ ಅವರು ಭಾರತಕ್ಕೆ ಗಡೀಪಾರು ಆಗಿ ಬರಲಿದ್ದಾರೆಯೇ ಎಂಬ ಬಗ್ಗೆ ತೀವ್ರ ಕುತೂಹಲವನ್ನು ಮೂಡಿಸಿತು. ೬೨ರ ಹರೆಯದ ಕಿಂಗ್ ಫಿಶರ್ ಏರ್ ಲೈನ್ಸ್ ಮುಖ್ಯಸ್ಥ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಗಡೀಪಾರು ವಾರಂಟ್ ಅಡಿಯಲ್ಲಿ ಬಂಧನಕ್ಕೆ ಒಳಗಾದಂದಿನಿಂದ ಜಾಮೀನಿನಲ್ಲಿ ಇದ್ದರು. ತಮ್ಮ ವಿರುದ್ಧದ ಪ್ರಕರಣರಾಜಕೀಯ ದುರುದ್ದೇಶದ್ದು  ಮತ್ತು ತಾವು ವಂಚನೆ ಆರೋಪಕ್ಕೆ ಗುರಿಯಾಗಿರುವ ಸಾಲಗಳನ್ನು ನಷ್ಟಕ್ಕೆ ಒಳಗಾಗಿ ಸ್ಥಗಿತಗೊಂಡಿರುವ ಏರ್ ಲೈನ್ಸ್ ಪಡೆದದ್ದೇ ಹೊರತು ತಾನಲ್ಲ ಎಂಬ ನೆಲೆಯಲ್ಲಿ ಮಲ್ಯ ಅವರು ತಮ್ಮ ಗಡೀಪಾರನ್ನು ಪ್ರಶ್ನಿಸಿದ್ದರು. ‘ನಾನು ಒಂದು ನಯಾಪೈಸೆಯನ್ನೂ ಪಡೆದಿಲ್ಲ. ಸಾಲ ಪಡೆದದ್ದು ಕಿಂಗ್ ಫಿಶರ್ ಏರ್ ಲೈನ್ಸ್. ನೈಜ ಉದ್ಯಮ ನಷ್ಟದ ಪರಿಣಾಮಾಗಿ ಹಣ ನಷ್ಟವಾಗಿದೆ. ಖಾತರಿದಾರನಾಗುವುದು ವಂಚನೆಯಲ್ಲ ಎಂದು ಮಲ್ಯ ಅವರು ತಮ್ಮ ಇತ್ತೀಚಿನ ಟ್ವೀಟಿನಲ್ಲಿ ಪ್ರತಿಪಾದಿಸಿದ್ದರು. ‘ನಾನು ಶೇಕಡಾ ೧೦೦ರಷ್ಟು ಅಸಲು ಮರುಪಾವತಿ ಕೊಡುಗೆಯನ್ನು  ನೀಡಿದ್ದೇನೆ. ದಯವಿಟ್ಟು ಅದನ್ನು ತೆಗೆದುಕೊಳ್ಳಿ ಎಂದು ಉದ್ಯಮಿ ತಮ್ಮ ಟ್ವೀಟಿನಲ್ಲಿ ಭಾರತೀಯ ಅಧಿಕಾರಿಗಳನ್ನು ಕೋರಿದ್ದರು. ಗಡೀಪಾರು ಪ್ರಕರಣದ ಹಿನ್ನೆಲೆಯಲ್ಲಿ ತಾವು ಮನವಿ ಮಾಡುತ್ತಿದ್ದೇನೆ ಎಂಬುದನ್ನುಪ್ರಕರಣಕ್ಕೆ ಸಂಬಂಧಿಸಿದಂತೆ  ವೆಸ್ಟ್ ಮಿನ್ಸ ಸ್ಟರ್ ಕೋರ್ಟಿನ ಮ್ಯಾಜಿಸ್ಟ್ರೇಟ್ ಎಮ್ಮಾ ಅರ್ಬುಥ್ನೋಟ್ ಅವರು ತೀರ್ಪು ನೀಡುವುದಕ್ಕೆ ಕೆಲವೇ ಪುನ್ನ ಪ್ರಕಟಿಸಿದ ತಮ್ಮ ಟ್ವೀಟಿನಲ್ಲಿ ಮಲ್ಯ ತಳ್ಳಿಹಾಕಿದ್ದರು. ಸರಣಿ ವಿಚಾರಣೆ: ಕಳೆದ ವರ್ಷ ಡಿಸೆಂಬರ್ ೪ರಂದು ಲಂಡನ್ನಿನ ವೆಸ್ಟ್ ಮಿನ್ ಸ್ಟರ್ ನ್ಯಾಯಾಲಯದಲ್ಲಿ ಆರಂಭವಾಗಿದ್ದ ವಿಚಾರಣೆಯು ಹಲವಾರು ಆಲಿಕೆಗಳನ್ನು ಕಂಡಿತ್ತು.  ಪ್ರಾರಂಭದಲ್ಲಿ ಏಳು ದಿನಗಳನ್ನು ಪ್ರಕರಣದ ವಿಚಾರಣೆಗಾಗಿಯೇ ಇರಿಸಲಾಗಿತ್ತು. ಮಾರ್ಕ್ ಸಮ್ಮರ್ಸ್ ನೇತೃತ್ವದ ಕೌನ್ ಪ್ರಾಸೆಕ್ಯೂಷನ್ ಸರ್ವೀಸ್ (ಸಿಪಿಎಸ್) ತಂಡವು ಭಾರತ ಸರ್ಕಾರದ ಪರವಾಗಿ ಮಲ್ಯ ವಿರುದ್ಧ  ಮೇಲ್ನೋಟದ ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸುವುದರೊಂದಿಗೆ ಇದು ಆರಂಭವಾಗಿತ್ತು.ಉದ್ಯಮಿ ವಿರುದ್ಧಅಪ್ರಾಮಾಣಿಕತೆಯ ನೀಲನಕ್ಷೆ ಇರುವುದನ್ನು ಸಾಬೀತು ಪಡಿಸಲು ಯತ್ನಿಸಿದ ಸಮ್ಮರ್ಸ್ ಮಾನವ ಹಕ್ಕುಗಳ ನೆಲೆಯಲ್ಲಿ ಗಡೀಪಾರಿಗೆ ಯಾವುದೇ ಅಡ್ಡಿಗಳೂ ಇಲ್ಲ ಎಂಬುದಾಗಿ ಪ್ರತಿಪಾದಿಸಿದ್ದರು. ಮಲ್ಯ ಪರ ರಕ್ಷಣಾತ್ಮಕ ವಾದ ಮಾಡಿದ್ದ ಕ್ಲೇರ್ ಮೊಂಟಗೊಮೆರಿ ನೇತೃತ್ವದ ತಂಡವು ಹಿಂದಿನಕಿಂಗ್ ಫಿಶರ್ ಏರ್ ಲೈನ್ಸ್ ವಹಿವಾಟು ವೈಫಲ್ಯದ ಪರಿಣಾಮವಾಗಿ ಸಾಲ ಮರುಪಾವತಿ ಮಾಡಲಾಗದೆ ಸುಸ್ತಿದಾರನಾಯಿತೇ ಹೊರತು ಅದರ ಮಾಲಕನ ಅಪ್ರಾಮಾಣಿಕತೆ ಮತ್ತು ವಂಚನೆಯಿಂದಲ್ಲ ಎಂದು ಸಾಬೀತು ಪಡಿಸಲು ಹಲವಾರು ತಜ್ಞರ ಮೂಲಕ ವಾದ ಮಂಡನೆ ಮಾಡಿತ್ತು.  ಪಾವತಿ ಮಾಡಬೇಕಾಗಿದ್ದ ಸಾಲದ ಶೇಕಡಾ ೮೦ರಷ್ಟು ಅಸಲನ್ನು ಪಾವತಿ ಮಾಡುವುದಾಗಿ ಮದ್ಯ ಉದ್ಯಮಿ ೨೦೧೬ರಷ್ಟು ಹಿಂದೆಯೇ ನೀಡಿದ್ದ ಕೊಡುಗೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟವು ತಿರಸ್ಕರಿಸಿತ್ತು ಎಂಬುದಾಗಿಯೂ ಮಲ್ಯ ಪರ ವಕೀಲರ ತಂಡ ನ್ಯಾಯಾಲಯಕ್ಕೆ ತಿಳಿಸಿತ್ತು. ೨೦೦೯-೨೦೧೦ರ ಹಣಕಾಸು ಬಿಕ್ಕಟ್ಟು: ಮೊತ್ತ ಮೊದಲನೆಯದಾಗಿ ತಮ್ಮ ಏರ್ ಲೈನ್ಸ್ ಸಂಸ್ಥೆಯ ಪತನ ಖಚಿತವಾಗಿದ್ದ ಹಿನ್ನೆಲೆಯಲ್ಲಿ ಸಾಲ ಮರುಪಾವತಿಯ ಉದ್ದೇಶವನ್ನೇ ಮಲ್ಯ ಅವರು ಹೊಂದಿರಲಿಲ್ಲ ಎಂದು ಕ್ರೌನ್ ಪ್ರಾಸೆಕ್ಯೂಷನ್ ಸರ್ವೀಸ್ ಪ್ರತಿಪಾದಿಸಿದರೆ, ೨೦೦೯-೨೦೧೦ರ ವ್ಯಾಪಕ ಜಾಗತಿಕ ಹಣಕಾಸು ಬಿಕಟ್ಟಿನ ಪರಿಣಾಮವಾಗಿ ಕಿಂಗ್ ಫಿಶರ್ ಏರ್ ಲೈನ್ಸ್ ನಷ್ಟಕ್ಕೆ ಒಳಗಾಗಿತ್ತು ಮತ್ತು  ಅದರ ವೈಫಲ್ಯ ಕಂಪೆನಿಯ ನಿಯಂತ್ರಣ ಮೀರಿದ ವಿದ್ಯಮಾನಗಳ ಪರಿಣಾಮವಾಗಿತ್ತು ಎಂದು ಸಾಬೀತು ಪಡಿಸಲು ಮಲ್ಯ ಪರ ವಕೀಲರ ತಂಡ ಯತ್ನಿಸಿತ್ತು.  ‘ಬ್ಯಾಂಕುಗಳು (ಕೆಲವು ಸಾಲಗಳನ್ನು ಮಂಜೂರು ಮಾಡುವಲ್ಲಿತಮ್ಮದೇ ಮಾರ್ಗದರ್ಶಿ ಸೂತ್ರಗಳ ವಿರುದ್ಧ ಹೋದ ಸ್ಪಷ್ಟ ಸೂಚನೆಗಳಿವೆ ಎಂದೂ ಮ್ಯಾಜಿಸ್ಟ್ರೇಟ್ ಅರ್ಬುಥ್ನೋಟ್ ವಿಚಾರಣೆಯ ಸಂದರ್ಭದಲ್ಲಿ ಗಮನಿಸಿ ಹೇಳಿದ್ದರುಮಾನವ ಹಕ್ಕಿನ ಆಧಾರದಲ್ಲಿ ಗಡೀಪಾರು ಮಾಡಲು ಅಡಚಣೆಗಳಿವೆ ಎಂಬುದಾಗಿ ಸಾಬೀತು ಪಡಿಸಲು ಯತ್ನಿಸಿದ ಮಲ್ಯ ಪರ ವಕೀಲರ ತಂಡವು ಭಾರತದ ಸೆರೆಮನೆಯ ದುಃಸ್ಥಿತಿ ಬಗ್ಗೆ ಗಮನ ಸೆಳೆದಿತ್ತು. ಮುಂಬೈಯ ಆರ್ಥರ್ ರೋಡ್ ಸೆರೆಮನೆಯಲ್ಲಿ ಮಲ್ಯ ಅವರನ್ನು ಇರಿಸಲಾಗುವ ಸೆರೆಮನೆ ಕೊಠಡಿಯ ವಿಡಿಯೋವನ್ನು ಕೋರಿದ ಬಳಿಕ ಮ್ಯಾಜಿಸ್ಟ್ರೇಟ್ ಅವರು ಸೆರೆಮನೆ ಪರಿಸ್ಥಿತಿ ಬಗ್ಗೆ ಪ್ರಾಸೆಕ್ಯೂಷನ್ ಹೆಚ್ಚಿನ ವಿವರಗಳನ್ನು ನೀಡಬೇಕಾದ ಅಗತ್ಯ ಇಲ್ಲ ಎಂದು ಹೇಳಿತ್ತು. ಎಲ್ಲ ವೈಧಾನಿಕ ಅಗತ್ಯಗಳನ್ನು ಪೂರೈಸಲಾಗಿದೆ ಎಂಬುದಾಗಿ ಮ್ಯಾಜಿಸ್ಟ್ರೇಟರಿಗೆ ಸಮಾಧಾನವಾದಲ್ಲಿ, ಗಡೀಪಾರಿಗೆ ಸಂಬಂಧಿಸಿದ ಯಾವುದೇ ಸ್ಥಾಯಿ ಅಡೆತಡೆಗಳು ಅನ್ವಯಿಸುವುದಿಲ್ಲ. ಆಗ ಮ್ಯಾಜಿಸ್ಟ್ರೇಟರು ಪ್ರಕರಣವನ್ನು ಗಡೀಪಾರು ಆದೇಶ ಕುರಿತ ನಿರ್ಣಯದ ಸಲುವಾಗಿ ಗೃಹ ಕಾರ್ಯದರ್ಶಿಗೆ ಕಳುಹಿಸಬೇಕು ಎಂದು ಇಂಗ್ಲೆಂಡ್ ಮೂಲದ ಕಾನೂನು ತಜ್ಞರು ಹೇಳಿದರು. ಮೇಲ್ಮನವಿ ಅವಕಾಶ: ಮಲ್ಯ ಅವರ ಪ್ರಕರಣವನ್ನು ಇಂಗ್ಲೆಂಡಿನ ಗೃಹ ಕಾರ್ಯದರ್ಶಿಸಾಜಿದ್ ಜಾವಿದ್ ಅವರಿಗೆ ಕಳುಹಿಸಬೇಕೇ ಎಂಬುದಾಗಿ ನ್ಯಾಯಾಧೀಶರು ನೀಡುವ ನಿರ್ಣಯದ ವಿರುದ್ಧ ಇಂಗ್ಲೆಂಡಿನ ಹೈಕೋರ್ಟ್ ಅನುಮತಿಯೊಂದಿಗೆ ಮೇಲ್ಮನವಿ ಸಲ್ಲಿಸಬಹುದು. ಮುಖ್ಯ ಮ್ಯಾಜಿಸ್ಟ್ರೇಟರ ಆದೇಶದ ದಿನಾಂಕದಿಂದ ೧೪ ದಿನಗಳ ಒಳಗಾಗಿ ಗಡೀಪಾರಿಗೆ ಒಳಗಾಗುವ ವ್ಯಕ್ತಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿದೆಗಡೀಪಾರು ಮಾಡದಂತೆ ಮ್ಯಾಜಿಸ್ಟ್ರೇಟ್ ಆದೇಶ ನೀಡಿದಲ್ಲಿ ಅದರ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಅನುಮತಿ ಕೋರಲು ಭಾರತ ಸರ್ಕಾರಕ್ಕೆ ಕೂಡಾ ೧೪ ದಿನಗಳ ಕಾಲಾವಕಾಶ ಇರುತ್ತದೆ. ಸಂಬಂಧ ಪಟ್ಟ ವ್ಯಕ್ತಿ ಮೇಲ್ಮನವಿ ಸಲ್ಲಿಸದೇ ಇದ್ದಲ್ಲಿ, ಮತ್ತು ಗೃಹ ಕಾರ್ಯದರ್ಶಿ ಮ್ಯಾಜಿಸ್ಟ್ರೇಟ್ ನಿರ್ಧಾರವನ್ನು ಒಪ್ಪಿದಲ್ಲಿ, ವ್ಯಕ್ತಿಯನ್ನು ಗೃಹ ಕಾರ್ಯದರ್ಶಿಯ ಗಡೀಪಾರು ಆದೇಶದ ೨೮ ದಿನಗಳ ಒಳಗಾಗಿ ಗಡೀಪಾರು ಮಾಡಬೇಕು.
ಹೈಕೋರ್ಟಿನ ಯಾರೇ ಕಕ್ಷಿದಾರರು ಸಲ್ಲಿಸಿದ ಮನವಿ ವಿಫಲವಾದಲ್ಲೂ ಇದೇ ನಿಯಮ ಅನ್ವಯಿಸುತ್ತದೆ. ಆದರೆ ೨೮ ದಿನಗಳ ಕಾಲಾವಧಿಯು ಮೇಲ್ಮನವಿಯ ವಿಚಾರಣೆ ಮುಕ್ತಾಯಗೊಡ ದಿನದಿಂದ ಆರಂಭವಾಗುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.

ಪೂರ್ವ ನಿಗದಿಯಂತೆ ಸೋಮವಾರ ತೀರ್ಪು ಹೊರಬಂದಲ್ಲಿ ಒಂದು ವರ್ಷದಿಂದ ನಡೆಯುತ್ತಿರುವ ಅತ್ಯಂತ ಮಹತ್ವ ಪಡೆದಿರುವ ಗಡೀಪಾರು ಪ್ರಕರಣ ಒಂದು ಮಹತ್ವದ ಘಟ್ಟಕ್ಕೆ ತಲುಪುವುದು ಎಂದು ಭಾವಿಸಲಾಗಿದೆ.
2017: ಅಹ್ಮದಾಬಾದ್: ೧೮೨ ಸದಸ್ಯ ಬಲದ  ಗುಜರಾತ್ ವಿಧಾನಸಭೆಗೆ  ಈದಿನ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇಕಡಾ ೬೮ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿತು. ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ವಂಚನೆ ನಡೆದಿದೆ ಎಂದು ಕಾಂಗ್ರೆಸ್ ಆಪಾದಿಸಿತು. ಪೋರ್ ಬಂದರ್, ಸೂರತ್, ಜೇತ್‌ಪುರ ಮತ್ತು ನೌಸಾರಿಯಲ್ಲಿ ಕೆಲವು ವಿದ್ಯುನ್ಮಾನ ಯಂತ್ರಗಳಿಗೆ ಬ್ಲೂಟೂತ್ ಸಂಪರ್ಕ ಕಲ್ಪಿಸಲಾಗಿತ್ತು ಎಂದು ಕಾಂಗ್ರೆಸ್ ಆಪಾದಿಸಿತು. ಕೆಲವು ಕಡೆ ವಿದ್ಯುನ್ಮಾನ ಯಂತ್ರಗಳನ್ನು ಬದಲಾಯಿಸಲಾಯಿತು ಎಂದು ಚುನಾವಣಾ ಆಯೋಗ ತಿಳಿಸಿತು. ಆದರೆ ವಂಚನೆ ನಡೆದಿಲ್ಲ ಎಂದು ಪ್ರತಿಪಾದಿಸಿತು. ಚುನಾವಣಾ ಕಣದಲ್ಲಿದ್ದ ೯೭೭ ಅಭ್ಯರ್ಥಿಗಳ ಪೈಕಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಬಿಜೆಪಿ ರಾಜ್ಯ ಅಧ್ಯಕ್ಷ ಜಿತು ವಘಾನಿ ಮತ್ತು ಕಾಂಗ್ರೆಸ್ ನಾಯಕರಾದ ಶಕ್ತಿ ಸಿಂಗ್ ಗೋಹಿಲ್, ಅರ್ಜುನ್ ಮೊಧ್ವಾಡಿಯಾ, ಪರೇಶ್ ಧನಾನಿ ಮತ್ತಿತರರ ಭವಿಷ್ಯ ಮತಪೆಟಿಗೆಯಲ್ಲಿ  ಭದ್ರವಾಯಿತು. ಮಧ್ಯಾಹ್ನ ೨ ಗಂಟೆಯವರೆಗೆ ಶೇಕಡಾ ೪೧ರಷ್ಟು ಮತದಾನ ದಾಖಲಾಗಿತ್ತು. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್  ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಉಭಯ ಪಕ್ಷಗಳ ಪ್ರಮುಖರು ಎರಡನೇ ಸುತ್ತಿನ ಚುನಾವಣೆಯತ್ತ ಗಮನ ಕೇಂದ್ರೀಕರಿಸಿದ್ದು, ಪ್ರಚಾರವನ್ನು ತೀವ್ರಗೊಳಿಸಿದರು. ಮೊದಲ ಹಂತದ ಚುನಾವಣೆಯಲ್ಲಿ ಈವರೆಗೆ ಶೇಕಡಾ ೬೮ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿತು. ಆದರೆ ಅಂತಿಮ ವರದಿಗಳು ಬಂದಾಗ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ೧೮೨ ಸದಸ್ಯ ಬಲದ ವಿಧಾನಸಭೆಗೆ ಕಳೆದ ಚುನಾವಣೆಯಲ್ಲಿ ಶೇಕಡಾ ೭೧.೩೨ರಷ್ಟು ಮತದಾನವಾಗಿತ್ತು. ಸಂಜೆ ೫ ಗಂಟೆಗೆ ಮೊದಲ ಹಂತದ ಮತದಾನ ಮುಕ್ತಾಯವಾಗುವ ವೇಳೆಗೆ ಶೇಕಡಾ ೭೦ಕ್ಕಿಮತ ಹೆಚ್ಚು  ಮತದಾನ ದಾಖಲಾಗಿದೆ. ಹಲವೆಡೆ ಇನ್ನೂ ಮತದಾರರು ಸಾಲುಗಟ್ಟಿ ನಿಂತಿದ್ದರು ಎಂದು ಮುಖ್ಯ ಚುನಾವಣಾ ಅಧಿಕಾರಿ ಬಿಬಿ ಸ್ವೈನ್ ಹೇಳಿದರು. ನವಸಾರಿಯಲ್ಲಿ ಗರಿಷ್ಠ: ನವಸಾರಿ ಜಿಲ್ಲೆಯಲ್ಲಿ ಗರಿಷ್ಠ ಮತದಾನ ನಡೆದ ಬಗ್ಗೆ ವರದಿಯಾಯಿತು. ಇಲ್ಲಿ ಶೇಕಡಾ ೭೬ ರಷ್ಟು ಮತದಾನವಾಗಿದೆ. ಮೊರ್ಬಿ ಮತ್ತು  ನರ್ಮದಾ ಜಿಲ್ಲೆಯಲ್ಲಿ ಶೇಕಡಾ ೭೫ ಕ್ಕಿಂತಲೂ ಹೆಚ್ಚು ಮತದಾನವಾಗಿದೆ ಎಂದು ಮೂಲಗಳು ತಿಳಿಸಿದವು. ವಲ್ಸದ್ ನಲ್ಲಿ ಶೇಕಡಾ ೭೦, ದ್ವಾರಕಾದಲ್ಲಿ ಶೇಕಡಾ ೫೫, ಪೋರ್ ಬಂದರಿನಲ್ಲಿ ಶೇಕಡಾ ೬೨, ತಾಪಿಯಲ್ಲಿ ಶೇಕಡಾ ೭೦, ಬೊಟಾಡ್ ನಲ್ಲಿ ಶೇಕಡಾ ೭೩, ಅಮ್ರೇಲಿಯಲ್ಲಿ ಶೇಕಡಾ ೬೫, ಕಛನಲ್ಲಿ ಶೇ.೬೬.೩೨, ಸುರೇಂದ್ರ ನಗರದಲ್ಲಿ ಶೇ.೬೫, ಡಂಗ್ ನಲ್ಲಿ ಶೇ.೭೨, ಭರೂಚ್ನಲ್ಲಿ ಶೇ.೬೪, ಜಾಮ್ ನಗರದಲ್ಲಿ ಶೇ.೬೫ ಮತದಾನವಾಗಿದೆ ಎಂದು ಮೂಲಗಳು ಹೇಳಿದವು.
2017: ಗಾಂಧಿನಗರ: ಗುಜರಾತ್  ವಿಧಾನಸಭೆಗಾಗಿ ಮೊದಲ ಹಂತದ ಚುನಾವಣೆ ನಡೆಯುತ್ತಿರುವಾಗಲೇ ಈದಿನ ಎರಡನೇ ಸುತ್ತಿನ ಚುನಾವಣಾ ಪ್ರಚಾರವನ್ನು ಮುಂದುವರೆಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ವಾಗ್ಯುದ್ಧ ಮುಂದುವರೆಸಿದರು. ಉತ್ತರ ಗುಜರಾತಿನ  ಲೂನಾವಾಡದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು ಕಾಂಗ್ರೆಸ್ ಕಾರ್ಯಕರ್ತರ ಮತ್ತು ರಾಹುಲ್ ಗಾಂಧಿ ನಿಕಟವರ್ತಿ ಎಂಬುದಾಗಿ ಪ್ರತಿಪಾದಿಸಿದ ಸಲ್ಮಾನ್ ನಿಜಾಮಿ ಎಂಬ ವ್ಯಕ್ತಿ ಮಾಡಿದ ಟ್ವೀಟ್ ನ್ನು ಗುರಿಯಾಗಿರಿಸಿಕೊಂಡು ಕಾಂಗೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ‘ಕಾಂಗ್ರೆಸ್ ನನ್ನ ಅಪ್ಪ ಮತ್ತು ಅಮ್ಮ ಯಾರು ಎಂದು ಕೇಳುತ್ತಿದೆ. ನಾನು ನಿಮ್ಮನ್ನು ಕೇಳುತ್ತೇನೆ ಸಹೋದರರೇ ಮತ್ತು ಸಹೋದರಿಯರೇ, ನಾವು ವೈರಿಗಳ ಜೊತೆಗಾದರೂ ಇಂತಹ ಭಾಷೆಯಲ್ಲಿ ಮಾತನಾಡುತ್ತೇವೆಯೇ?  ಜವಾಬ್ದಾರಿಯುತ ಕಾಂಗ್ರೆಸ್ ನಾಯಕರೊಬ್ಬರು (ಸಲ್ಮಾನ್ ನಿಜಾಮೀ ಟ್ವೀಟ್ ಕುರಿತು ಉಲ್ಲೇಖಿಸಿ) ನನ್ನನ್ನು ಈ ಬಗ್ಗೆ ಕೇಳಿದ್ದಾರೆ ಎಂದು ಮೋದಿ ಹೇಳಿದರು. ‘ರಾಹುಲ್ ಗಾಂಧಿ ಅವರ ಪಕ್ಷ ನನ್ನ ಬಳಿ ನನ್ನ ತಂದೆ ತಾಯಿ ಯಾರು ಎಂದು ಕೇಳುತ್ತಿದೆ. ನನ್ನ ರಾಷ್ಟ್ರದ ಜನರೇ ನನ್ನ ಪೋಷಕರು. ನಾನು ಈ ಮಣ್ಣಿನ, ಈ ಲೂನಾವಾಡದ ಮಗ ಎಂದು ಪ್ರಧಾನಿ ನುಡಿದರು.  ‘ಕಾಂಗ್ರೆಸ್ ಪಕ್ಷವು ಪದ ಬಳಕೆ, ತಮ್ಮ ಭಾಷೆ ಮತ್ತು ಕೃತ್ಯದಲ್ಲಿ ಎಲ್ಲ ನಾಚಿಕೆಯನ್ನೂ ಬಿಟ್ಟಿದೆ. ಕಾಂಗ್ರೆಸ್ ಚುನಾವಣೆಯಲ್ಲಿ ಸೋಲಿನ ಅಂಚಿನಲ್ಲಿ ಬಂದು ನಿಂತಿದೆ. ಕಾಂಗ್ರೆಸ್ ಹಲವಾರು ಸುಳ್ಳುಗಳನ್ನು ಹರಡುತ್ತಿದೆ. ಬ್ಯಾಂಕುಗಳಲ್ಲಿರುವ ನಿಮ್ಮ ಕಠಿಣ ಶ್ರಮದ ಹಣವನ್ನು ದಿವಾಳಿಯೆದ್ದ ಬ್ಯಾಂಕುಗಳು ಮುಟ್ಟುಗೋಲು ಹಾಕಿಕೊಳ್ಳುತ್ತವೆ ಎಂದೂ ಅವರು ಪ್ರಚಾರ ಮಾಡುತ್ತಿದ್ದಾರೆ. ಇಂತಹ ಸುಳ್ಳುಗಳನ್ನು ಪ್ರಚಾರ ಮಾಡುವುದು ಅಪರಾಧ. ವಾಸ್ತವ ಏನೆಂದರೆ ಈ ದೇಶದ ಬ್ಯಾಂಕುಗಳು ಕಾಂಗ್ರೆಸ್ ಪಕ್ಷದ ತಪ್ಪುಗಳಿಂದಾಗಿ ಸಂಕಷ್ಟದಲ್ಲಿ ಸಿಲುಕಿವೆ. ನಮ್ಮ ಸರ್ಕಾರ ಸಾಮಾನ್ಯ ಜನರ ಬಗ್ಗೆ ಕಾಳಜಿ ವಹಿಸುತ್ತಿರುವ ಸರ್ಕಾರ ಎಂದು ಅವರು ಹೇಳಿದರು. ಈ ಮಧ್ಯೆ ನಿಜಾಮಿ ಯಾರು ಎಂಬುದು ತನಗೆ ಗೊತ್ತೇ ಇಲ್ಲ ಕಾಂಗ್ರೆಸ್  ಪ್ರತಿಪಾದಿಸಿತು. ’ನಿಜಾಮಿ ಯಾರು? ಅವರು ನಿಮ್ಮ (ಮೋದಿಯವರ) ವ್ಯಕ್ತಿಯೇ? ಈ ನಿಜಾಮಿ ಯಾರೆಂಬುದು ನಮಗೆ ಗೊತ್ತಿಲ್ಲ. ಆತ ನಮ್ಮ ಪಕ್ಷದಲ್ಲಿ ಯಾವುದೇ ಹುದ್ದೆಯನ್ನೂ ಹೊಂದಿಲ್ಲ. ಬಿಜೆಪಿಯಲ್ಲಿ ರಾಮ್ ಲಾಲ್ ಎಂಬ ಸ್ವೇಚ್ಛಾಚಾರಿ ಏನೇನೋ ಹೇಳುತ್ತಿದ್ದುದನ್ನು ನಾವು ಕೂಡಾ ಹೇಳಬಹುದು ಎಂದು ಕಾಂಗ್ರೆಸ್ ನಾಯಕ ರಾಜೀವ ಶುಕ್ಲ ನುಡಿದರು. ‘ಸಲ್ಮಾನ್ ನಿಜಾಮಿ ಕೌನ್ ಹೈ, ಹಮ್ ಜಾನ್ ತೆ ಹೀ ನಹೀ ಹೈ. ಆತ ಪಕ್ಷದಲ್ಲಿ ಯಾವುದೇ ಹುದ್ದೆಯನ್ನೂ ಹೊಂದಿಲ್ಲ. ನಾವು ಕೂಡಾ ಬಿಜೆಪಿಯಲ್ಲಿ ಇದ್ದ ರಾಮ್ ಲಾಲ್ ಎಂಬ ಸ್ವೇಚ್ಛಾಚಾರಿ  ಏನೇನೋ ಹೇಳುತ್ತಿದ್ದುದನ್ನು ಹೇಳಬಹುದು ಎಂದು ಪ್ರಧಾನಿ ಮೋದಿ ಅವರು ಸಲ್ಮಾನ್ ನಿಜಾಮಿ ಟ್ವೀಟ್ ಕುರಿತು ಮಾಡಿದ ಪ್ರತಿಕ್ರಿಯೆಗೆ  ಶುಕ್ಲ ಅವರು ಟ್ವೀಟ್ ಮೂಲಕ ಎದಿರೇಟು ನೀಡಿದರು. ಈ ಮಧ್ಯೆ ಪಟಣದ ಹರ್ಜಿಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು ಪ್ರಧಾನಿ ವಿರುದ್ಧ ಇನ್ನೂ ಒಂದು ಸುತ್ತಿನ ಪ್ರಹಾರ ನಡೆಸಿ ಪ್ರಧಾನಿಯವರು ತಮ್ಮ ಭಾಷಣಗಳಿಂದ ಭ್ರಷ್ಟಾಚಾರ ವಿಷಯವನ್ನು ಬಿಟ್ಟದ್ದು ಏಕೆ ಎಂದು ಪ್ರಶ್ನಿಸಿದರು. ‘ಮೋದೀಜಿ ತಮ್ಮನ್ನು ಜನರು ಟೀಕಿಸುತ್ತಿರುವ ಬಗ್ಗೆ ಮಾತ್ರವೇ ಮಾತನಾಡುತ್ತಿದ್ದಾರೆ. ಇದೆಲ್ಲ ಕೆಲಸ ಮಾಡುವುದಿಲ್ಲ ಎಂದು ಗೊತ್ತಾದಾಗ ಅವರು ಮಣಿ ಶಂಕರ ಅಯ್ಯರ್ ಬಗ್ಗೆ ಮಾತನಾಡಲು ಶುರು ಮಾಡಿದರು. ಅವರು ಯಾಕೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ?’ ಎಂದು ರಾಹುಲ್ ಕೇಳಿದರು.  ಮರುಕ್ಷಣದಲ್ಲೇ ಪ್ರಧಾನಿಯವರು ಕೈಗಾರಿಕೆಗಳಿಗೆ ಭೂಮಿಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಕಾಂಗ್ರೆಸ್ ಧುರೀಣ ಚುಚ್ಚಿದರು.
2017: ಅಹ್ಮದಾಬಾದ್: ಗುಜರಾತ್ ವಿಧಾನಸಭಾ  ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ೩೯೭ ಮಂದಿ ಕೋಟ್ಯಧಿಪತಿಗಳು ಎಂದು ಅವರ ಚುನಾವಣಾ ಪ್ರಮಾಣ ಪತ್ರಗಳ ಅಧ್ಯಯನ ನಡೆಸಿರುವ ಎರಡು ಸರ್ಕಾರೇತರ ಸಂಘಟನೆಗಳು (ಎನ್ ಜಿಒ) ಬಹಿರಂಗ ಪಡಿಸಿದವು. ಎರಡು ಹಂತಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ  ಒಟ್ಟು ೧,೮೨೮ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ. ಈ ಅಭ್ಯರ್ಥಿಗಳ ಪೈಕಿ ೧,೦೯೮ ಮಂದಿ ಕೇವಲ ೧೨ನೇ ತರಗತಿ ಅಥವಾ ಅದಕ್ಕಿಂತಲೂ ಕೆಳಗಿನ ತರಗತಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್  ರಿಫಾರ್ಮ್ಸ (ಎಡಿಆರ್) ಮತ್ತು ಗುಜರಾತ್ ಇಲೆಕ್ಷನ್ ವಾಚ್ (ಜೆಇಡಬ್ಲ್ಯೂ) ಸಂಘಟನೆಗಳ ವರದಿ ಹೇಳಿತು. ಚುನಾವಣಾ ಕಣದಲ್ಲಿ ಇರುವ ಅಭ್ಯರ್ಥಿಗಳ ಪೈಕಿ ೧೧೮ ಮಂದಿ ಮಹಿಳೆಯರು ಎಂದೂ ಅದು ಹೇಳಿತು. ಮೊದಲ ಹಂತದ ಚುನಾವಣಾ ಕಣದಲ್ಲಿ ಇರುವ ಒಟ್ಟು ೯೭೭ ಅಭ್ಯರ್ಥಿಗಳ ಪೈಕಿ ೧೯೮ ಮಂದಿ ತಮ್ಮ ಬಳಿ ೧ ಕೋಟಿ ರೂಪಾಯಿ ಮೌಲ್ಯಕ್ಕಿಂತ ಹೆಚ್ಚಿನ ಆಸ್ತಿ ಇರುವುದಾಗಿ ಘೋಷಿಸಿದ್ದರೆ, ಎರಡನೇ ಹಂತದ ಚುನಾವಣಾ ಕಣದಲ್ಲಿ ಇರುವ ೮೫೧ ಮಂದಿಯ ಪೈಕಿ ೧೯೯ ಮಂದಿ ಕೂಡಾ ಕೋಟ್ಯಧಿಪತಿಗಳು ಎಂಬುದು ಅಭ್ಯರ್ಥಿಗಳು ಸಲ್ಲಿಸಿದ ಪ್ರಮಾಣ ಪತ್ರಗಳ ಅಧ್ಯಯನದಿಂದ ಬೆಳಕಿಗೆ ಬಂದಿತು. ಅಧ್ಯಯನದ ಪ್ರಕಾರ ಈ ೩೯೭ ಕೋಟ್ಯಧಿಪತಿಗಳ ಪೈಕಿ ೧೩೧  ಮಂದಿ ತಮ್ಮ ಬಳಿ ೫ ಕೋಟಿ ರೂಪಾಯಿಗೂ ಹೆಚ್ಚಿನ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ. ಇತರ ೧೨೪ ಮಂದಿ ೨ರಿಂದ ೫ ಕೋಟಿ ರೂಪಾಯಿ ಮೊತ್ತದ ಚರ ಮತ್ತು ಸ್ಥಿರ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ. ಆಡಳಿತಾರೂಢ ಬಿಜೆಪಿ ೧೪೨ ಕೋಟ್ಯಧಿಪತಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರೆ, ವಿರೋಧಿ ಕಾಂಗ್ರೆಸ್ ಇಂತಹ ೧೨೭ ಮಂದಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಎನ್ ಸಿಪಿ ೧೭ ಮಂದಿ ಕೋಟ್ಯಧಿಪತಿಗಳನ್ನು ಚುನಾವಣೆಗೆ ನಿಲ್ಲಿಸಿದ್ದರೆ, ಆಮ್ ಆದ್ಮಿ ಪಕ್ಷ (ಆಪ್)  ಇಂತಹ ೧೩ ಅಭ್ಯರ್ಥಿಗಳನ್ನು ಹಾಗೂ ಬಿಎಸ್ ಪಿ ಇಂತಹ ಐವರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ೫೬ ಮಂದಿ ಸ್ವತಂತ್ರ ಅಭ್ಯರ್ಥಿಗಳೂ ಕೋಟ್ಯಧಿಪತಿಗಳ ವರ್ಗದಲ್ಲಿ ಇದ್ದಾರೆ. ಉಳಿದ ಕೋಟ್ಯಧಿಪತಿ ಅಭ್ಯರ್ಥಿಗಳು ಹೆಚ್ಚು ಪರಿಚಿತವಲ್ಲದ ಪಕ್ಷಗಳ ಮೂಲಕ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ದಸ್ ಕ್ರೋಜ್ ಸ್ಥಾನಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪಂಕಜ್ ಪಟೇಲ್ ಅವರು ಅಭ್ಯರ್ಥಿಗಳ ಪೈಕಿ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದು ಅವರು ಆಸ್ತಿಪಾಸ್ತಿಗಳ ಮೌಲ್ಯ ೨೩೧.೯೩ ಕೋಟಿ ರೂಪಾಯಿ ಎಂದು ವರದಿ ಹೇಳಿದೆ. ಕಾಂಗ್ರೆಸ್ ಅಭ್ಯರ್ಥಿ ಇಂದ್ರಾನಿಲ್  ರಾಜ್ಯಗುರು (ರಾಜ್ ಕೋಟ್ ಪಶ್ಚಿಮ ಕ್ಷೇತ್ರ) ಕೋಟ್ಯಧಿಪತಿ ಅಭ್ಯರ್ಥಿಗಳ ಪೈಕಿ ಎರಡನೇ ಸ್ಥಾನದಲ್ಲಿದ್ದು ತಮ್ಮ ಬಳಿ ೧೪೧.೨೨ ಕೋಟಿ ರೂಪಾಯಿ ಆಸ್ತಿಪಾಸ್ತಿ ಇರುವುದಾಗಿ ಘೋಷಿಸಿದ್ದಾರೆ. ಬೊಟಾಡ್ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಸೌರಭ್ ಪಟೇಲ್ ಮೂರನೇ ಸ್ಥಾನದಲ್ಲಿ ಇದ್ದಾರೆ. ಗುಜರಾತಿನ ಮಾಜಿ ಹಣಕಾಸು ಸಚಿವರಾದ ಇವರು ೧೨೩.೭೮ ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ. ವಾಧ್ವಾನ್ ಸ್ಥಾನಕ್ಕೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ವಾಣಿಜ್ಯೋದ್ಯಮಿ ಧಾನ್ ಜಿ ಭಾಯಿ ಪಟೇಲ್ ಅವರು ನಾಲ್ಕನೇ ಸ್ಥಾನದಲ್ಲಿದ್ದು ೧೧೩.೪೭ ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಆರು ಮಂದಿ ಸ್ವತಂತ್ರ ಅಭ್ಯರ್ಥಿಗಳು ’ಶೂನ್ಯ ಚರ ಅಥವಾ ಸ್ಥಿರ ಆಸ್ತಿಯನ್ನು ಘೋಷಿಸಿದ್ದಾರೆ ಎಂದು ವರದಿ ತಿಳಿಸಿತು.
2017: ವಿಶ್ವಸಂಸ್ಥೆ: ಜೆರುಸಲೇಮ್  ಪವಿತ್ರ ನಗರಕ್ಕೆ ಇಸ್ರೇಲ್ ರಾಜಧಾನಿ ಎಂಬುದಾಗಿ ಮಾನ್ಯತೆ ನೀಡಿರುವ ಅಮೆರಿಕ ಈ ವಿಚಾರದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ವಿಶೇಷ ಸಭೆಯಲ್ಲಿ ಏಕಾಂಗಿಯಾಯಿತು. ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಿಸುವಂತೆ ಮಾಡಬಹುದಾದ ಕ್ರಮ ಇದು ಎಂಬ ವ್ಯಾಪಕ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಯಿತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ೧೫ ಸದಸ್ಯರ ಪೈಕಿ ೮ ಸದಸ್ಯರು ಅಮೆರಿಕ ನಿರ್ಣಯದ ಪರಿಣಾಮಗಳ ಬಗ್ಗೆ ವಿಶ್ಲೇಷಿಸಲು ತುರ್ತು ಸಭೆ ನಡೆಸುವಂತೆ ಆಗ್ರಹಿಸಿದ್ದರು ಎಂದು ಇಎಫ್ ಇ ಸುದ್ದಿ ಸಂಸ್ಥೆ ವರದಿ ಮಾಡಿತು. ತಮ್ಮ ಚುನಾವಣಾ ಪ್ರಚಾರ ಕಾಲದಿಂದಲೇ ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಮ್ ಗೆ ಮಾನ್ಯತೆ ಕೊಡುವ ಬಗ್ಗೆ ಒಲವು ಹೊಂದಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆ ಇದೀಗ ಅಮೆರಿಕವನ್ನು ಈ ವಿಚಾರದಲ್ಲಿ ಏಕಾಂಗಿಯನ್ನಾಗಿ ಮಾಡಿತು. ಜೆರುಸಲೇಮ್ ಸ್ಥಾನಮಾನವು ಇಸ್ರೇಲಿಗಳು ಮತ್ತು ಪ್ಯಾಲೆಸ್ತೀನಿಯನ್ನರ ನಡುವಣ ಮಾತುಕತೆಯಲ್ಲಿ ನಿರ್ಧಾರವಾಗಬೇಕು ಎಂದು ಐರೋಪ್ಯ ರಾಷ್ಟ್ರಗಳು ಸಭೆಯ ಕೊನೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದವು. ‘ಐರೋಪ್ಯ ಒಕ್ಕೂಟವು ಸ್ಪಷ್ಟ ಮತ್ತು ಸಂಘಟಿತ ನಿಲುವನ್ನು ಹೊಂದಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವಣ ಬಿಕ್ಕಟ್ಟಿಗೆ ಮತ್ತು ಜೆರುಸಲೇಮ್  ಇಸ್ರೇಲ್ ರಾಷ್ಟ್ರದ ರಾಜಧಾನಿಯಾಗಬೇಕೆ ಅಥವಾ ಪ್ಯಾಲೆಸ್ಟೈನ್ ರಾಷ್ಟ್ರದ ರಾಜಧಾನಿಯಾಗಬೇಕೆ ಎಂಬ ಸಮಸ್ಯೆಗೆ ನೈಜ ಪರಿಹಾರ ಉಭಯ ರಾಷ್ಟ್ರಗಳನ್ನೇ ಆಧರಿಸಿದೆ ಎಂದು ನಾವು ನಂಬಿದ್ದೇವೆ ಎಂದು ಹೇಳಿರುವ ಹೇಳಿಕೆ, ಅಲ್ಲಿಯವರೆಗೆ ಜೆರುಸಲೇಮ್ ಸಾರ್ವಭೌಮತ್ವವನ್ನು  ಐರೋಪ್ಯ ಒಕ್ಕೂಟ ಮಾನ್ಯ ಮಾಡದು ಎಂದು ಸ್ಪಷ್ಟ ಪಡಿಸಿತು. ಐರೋಪ್ಯ ಒಕ್ಕೂಟದ ಹೇಳಿಕೆಯು ಭದ್ರತಾ ಮಂಡಳಿಯ ಸಭೆಯ ಕೊನೆಗೆ ಹೊರಬಿದ್ದ ಸಾಮೂಹಿಕ ಪತ್ರವಾಗಿದ್ದು, ಜಂಟಿ ಹೇಳಿಕೆಯಲ್ಲ ಅಥವಾ ಯಾವುದೇ ನಿರ್ಣಯವೂ ಅಲ್ಲ. ನಿಕ್ಕಿ ಹಾಲೆ ಸಮರ್ಥನೆ: ಈ ಮಧ್ಯೆ ವಿಶ್ವ ಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ನಿಕ್ಕಿ ಹಾಲೇ ಅವರು ಟ್ರಂಪ್ ಅವರ ಪ್ರಕಟಣೆಯನ್ನು ಸಮರ್ಥಿಸಿದರು ಮತ್ತು ಇದು ಇಸ್ರೇಲ್ ಬಗೆಗಿನ ವೈರತ್ವವನ್ನು ತೋರಿಸುತ್ತದೆ ಎಂದು ವಿಶ್ವಸಂಸ್ಥೆ ನಿಲುವನ್ನು  ಖಂಡಿಸಿದರು. ಹಲವು ವರ್ಷಗಳಿಂದ ಇಸ್ರೇಲ್ ಬಗ್ಗೆ ವೈರತ್ವ ಪ್ರದರ್ಶಿಸುತ್ತಾ ಬಂದಿರುವ ವಿಶ್ವದ ಪ್ರಮುಖ ಕೇಂದ್ರಗಳಲ್ಲಿ ವಿಶ್ವಸಂಸ್ಥೆಯೂ ಒಂದಾಗಿದೆ ಎಂದು ಹಾಲೆ ಟೀಕಿಸಿದರು. ಭದ್ರತಾ ಮಂಡಳಿ ಸಭೆಯ ಆರಂಭದಲ್ಲೇ ಮಧ್ಯಪ್ರಾಚ್ಯದಲ್ಲಿ ವಿಶ್ವಸಂಸ್ಥೆಯ ವಿಶೇಷ ರಾಯಭಾರಿಯಾಗಿರುವ ನಿಕೋಲೇ ಮ್ಲಾಡೆನೊವ್ ಅವರು ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಮ್ ಗೆ ಮಾನ್ಯತೆ ನೀಡುವ ಅಮೆರಿಕದ ಇತ್ತೀಚಿನ ನಿರ್ಧಾರದ ಬಗ್ಗೆ ಎಚ್ಚರಿಸಿದರು. ಜೆರುಸಲೇಮ್ ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮ್ಲಾಡೆನೊವ್ ಅವರು ’ಅಮೆರಿಕದ ನಿರ್ಧಾರವು ಹಿಂಸಾಚಾರ ಹೆಚ್ಚಿಸುವ ಅಪಾಯವನ್ನು ಹೊಂದಿದೆ. ಇಸ್ರೇಲಿಗಳು ಮತ್ತು ಪ್ಯಾಲೆಸ್ತೀನಿಯನ್ನರಿಬ್ಬರಿಗೂ ಜೆರುಸಲೇಮ್ ಅವರ ಪ್ರಾಣ ಹಾಗೂ ಸಂಸ್ಕೃತಿಯ ಕೇಂದ್ರವಾಗಿದೆ. ಹಾಗೆಯೇ ಜಗತ್ತಿನಾದ್ಯಂತದ ಲಕ್ಷಾಂತರ ಜನರಿಗೆ ನಂಬಿಕೆಯ ಸಂಕೇತವಾಗಿದೆ. ಎಲ್ಲ ಪಕ್ಷಗಳೂ ಪ್ರಚೋದನೆಗಳಿಗೆ ಅವಕಾಶ ನೀಡದೆ ಮಾತುಕತೆ ಮೂಲಕ ಈ ವಿಚಾರವನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಇಸ್ರೇಲ್ ರಾಜಧಾನಿಯಾಗಿ ಮಾನ್ಯತೆ ನೀಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಉಲ್ಲೇಖಿಸಿ ಹೇಳಿದರು.
2017: ನವದೆಹಲಿ: ನಕ್ಸಲ್ಪೀಡಿತ ಛತ್ತೀಸ್ಗಡದ ಬಿಜಾಪುರ್ಜಿಲ್ಲೆಯಲ್ಲಿ ಸಿಆರ್ಪಿಎಫ್ಸಿಬ್ಬಂದಿ ನಡುವೆ ನಡೆದ ಕಾದಾಟದಲ್ಲಿ ಸಹೋದ್ಯೋಗಿಯ ಗುಂಡಿಗೆ ಇಬ್ಬರು ಸಬ್‌–ಇನ್ಸ್ಪೆಕ್ಟರ್ಸೇರಿ ನಾಲ್ಕು ಜನ ಬಲಿಯಾದರು. ಬಸಗುಡ ಸಮೀಪದ ಸಿಆರ್ಪಿಎಫ್ 168ನೇ ಬೆಟಾಲಿಯನ್ಶಿಬಿರದಲ್ಲಿ ಸಂಜೆ 5ಕ್ಕೆ ಯೋಧರ ನಡುವೆ ಜಗಳ ನಡೆದು ಗುಂಡು ಹಾರಿಸಲಾಗಿದೆ ಎಂದು ದಾಂತೇವಾಡಾ ವಲಯದ ಪೊಲೀಸ್ಡಿಐಜಿ ಸುಂದರ್ರಾಜ್ಪಿ ಮಾಹಿತಿ ನೀಡಿದರು. ಪ್ರಾಥಮಿಕ ಮಾಹಿತಿ ಪ್ರಕಾರ, ಕಾನ್ಸ್ಟೆಬಲ್ ಸನತ್ಕುಮಾರ್ಎಕೆ 47 ರೈಫಲ್ನಿಂದ ಗುಂಡು ಹಾರಿಸಿದರು. ಘಟನೆಯಲ್ಲಿ ಇಬ್ಬರು ಎಸ್ ಸೇರಿ ನಾಲ್ವರು ಸಿಬ್ಬಂದಿ ಸ್ಥಳದಲ್ಲಿಯೇ ಮೃತರಾಗಿ, ಯೋಧರೊಬ್ಬರು ಗಾಯಗೊಂಡರು. ಗುಂಡಿಗೆ ಬಲಿಯಾದವರ ಪೈಕಿ ಮೂವರು ಯೋಧರು ಕಾನ್ಸ್ಟೆಬಲ್ ಸನತ್ಕುಮಾರ್ಗಿಂತ ಸೇವಾ ಹಿರಿತನ ಹೊಂದಿದ್ದರು. ಎಸ್ಐ ವಿಕಿ ಶರ್ಮಾ, ಮೇಘ್ ಸಿಂಗ್‌, ಎಎಸ್ ರಾಜೀವ್ಸಿಂಗ್ಹಾಗೂ ಕಾನ್ಸ್ಟೆಬಲ್ಸಂಕರ ರಾವ್ಮೃತರಾದವರು. ಎಎಸ್ ಗಜಾನಂದ್ಗಾಯಗೊಂಡಿರುವುದಾಗಿ ವರದಿಯಾಯಿತು. ಇವರನ್ನು ಹೆಲಿಕಾಪ್ಟರ್ಮೂಲಕ ರಾಯ್ಪುರಕ್ಕೆ ಸ್ಥಳಾಂತರಿಸಲಾಯಿತು. ಗುಂಡು ಹಾರಿಸುವುದಕ್ಕೂ ಮುನ್ನ ಯೋಧರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದರು.
2017: ನಾಸಿಕ್ : ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೆಲಿಕಾಪ್ಟರ್ ಬಲವಂತದಿಂದ ಭೂ ಸ್ಪರ್ಶ ಮಾಡಿದ ಘಟನೆ  ಈದಿನ ಬೆಳಗ್ಗೆ ಘಟಿಸಿತು. ಫಡ್ನವೀಸ್ ಅವರು ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಮತ್ತು ಇತರರ ಜೊತೆಗೆ  ನಾಸಿಕ್ ನಿಂದ  ಔರಂಗಾಬಾದಿಗೆ  ಬೆಳಗ್ಗೆ ೯.೩೦ರ ಹೊತ್ತಿಗೆ ಹೆಲಿಕಾಪ್ಟರಿನಲ್ಲಿ ತೆರಳುವಾಗ ಈ ಘಟನೆ ಘಟಿಸಿತು. ಫಡ್ನವೀಸ್ ಅವರ ಹೆಲಿಕಾಪ್ಟರ್ ನೆಲದಿಂದ ಟೇಕ್ ಆಫ್ ಆಗಿ,  ೫೦ ಅಡಿ ಎತ್ತರ ಏರಿದಾಗ ಅದಕ್ಕೆ ಮುಂದೆ ಹಾರಲು ಸಾಧ್ಯವಾಗಲಿಲ್ಲ. ಆದರೆ ಪೈಲಟ್ ಕೆಲವೇ ಮೀಟರುಗಳ ಆಚೆ ಹೆಲಿಕಾಪ್ಟರನ್ನು ಸುರಕ್ಷಿತವಾಗಿ ಇಳಿಸಿದರು ಎಂದು ಮೂಲಗಳು ತಿಳಿಸಿದವು. ಹೆಲಿಕಾಪ್ಟರ್ ಓವರ ಲೋಡ್  ಆಗಿತ್ತು, ಹೀಗಾಗಿ ಅದಕ್ಕೆ ಹಾರಲು ಸಾಧ್ಯವಾಗಲಿಲ್ಲ. ಆಗ ಹೆಲಿಕಾಪ್ಟರಿನಲ್ಲಿ ಇದ್ದ  ಫಡ್ನವೀಸ್ ಅವರ ಅಡುಗೆಯವ ಮತ್ತು ಆತನ ಚೀಲವನ್ನು ಕೆಳಗಿಳಿಸಲಾಯಿತು. ಅನಂತರವೇ ಹೆಲಿಕಾಪ್ಟರ್ ಯಶಸ್ವಿಯಾಗಿ ಗಗನಕ್ಕೆ ಏರಿತು ಎಂದು ಮೂಲಗಳು ಹೇಳಿದವು. ಸಿಎಂ ಮತ್ತು ಅವರ ಸಹಚರರು ೨೫ ನಿಮಿಷಗಳಲ್ಲಿ  ಹೆಲಿಕಾಪ್ಟರ್ ಮೂಲಕ ಔರಂಗಾಬಾದ್ ತಲುಪುತ್ತಿದ್ದಂತೆಯೇ  ಫಡ್ನವೀಸ್ ಅಡುಗೆಯವ ಮತ್ತು ಆತನ ಬ್ಯಾಗನ್ನು ಮೂರು ತಾಸುಗಳ ರಸ್ತೆ ಪ್ರಯಾಣದ ಮೂಲಕ ಔರಂಗಾಬಾದಿಗೆ ತಲುಪಿಸಲಾಯಿತು. ಈ ಹಿಂದೆ ಮೂರು ಬಾರಿ ಫಡ್ನವೀಸ್ ಹೆಲಿಕಾಪ್ಟರ್ ಟೇಕಾಫ್ ಆಗದೇ ನೆಲಕ್ಕಿಳಿದ ಘಟನೆಗಳು ನಡೆದಿವೆ. ಆ ಘಟನೆಗಳು ಮೇ ೧೦, ಮೇ ೨೫ ಮತ್ತು ಜುಲೈ ೭ರಂದು ಘಟಿಸಿದ್ದವು.
2016:ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿಗೆ ಸಂಬಂಧಿತ 3600
ಕೋಟಿ ರೂಪಾಯಿ ಮೊತ್ತದ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯತನಿಖಾ ದಳವು (ಸಿಬಿಐವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿತ್ಯಾಗಿ ಅವರನ್ನು ಬಂಧಿಸಿತು
ದೆಹಲಿ
 ಮೂಲದ ವಕೀಲ ಗೌತಮ್ ಖೇತಾನ್ ಮತ್ತು ತ್ಯಾಗಿ ಸಂಬಂಧಿ ಸಂಜೀವ ತ್ಯಾಗಿ ಯಾನೆ ಜೂಲೀ ತ್ಯಾಗಿ ಅವರನ್ನೂ ಸಿಬಿಐ ಬಂಧಿಸಿತುಭ್ರಷ್ಟ ಹಾಗೂ ಅಕ್ರಮ ಮಾರ್ಗಬಳಸಿ ಹೆಲಿಕಾಪ್ಟರ್ ಖರೀದಿ
 
ವ್ಯವಹಾರದಲ್ಲಿ ಪ್ರಭಾವ ಬೀರುವ ಸಲುವಾಗಿ ಅಕ್ರಮವಾಗಿ ಹಣ ಸ್ವೀಕರಿಸಿದ ಆರೋಪದಲ್ಲಿ  ಮೂವರನ್ನೂ ಬಂಧಿಸಲಾಗಿದೆ ಎಂದು ಸಿಬಿಐ ತಿಳಿಸಿತುಹಣ 
ವರ್ಗಾವಣೆ
 ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು  ವರ್ಷ ಏಪ್ರಿಲ್ ತಿಂಗಳಲ್ಲಿ ತ್ಯಾಗಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.

2016: ನವದೆಹಲಿ: ಡಿಜಿಟಲ್ವಹಿವಾಟಿನ ಕುರಿತು ಜನರಿಗೆ ಸೂಕ್ತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಡಿಜಿಧನ್ ಅಭಿಯಾನದ ಅಡಿಡಿಜಿಶಾಲಾಟಿವಿ ಚಾನಲ್ಹಾಗೂಡಿಜಿಧನ್‌’ ವೆಬ್ಸೈಟ್ಗೆ ಸರ್ಕಾರ ಚಾಲನೆಗೆ ನೀಡಿತು. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ಪ್ರಸಾದ್ಡಿಜಿಶಾಲಾ ಟಿವಿ ಮತ್ತು ಡಿಜಿಧನ್ಜಾಲತಾಣಕ್ಕೆ ಚಾಲನೆ ನೀಡಿದರು. ಡಿಜಿಶಾಲಾ ಟಿವಿ ಮೂಲಕ ಡಿಜಿಟಲ್ಪಾವತಿ ವ್ಯವಸ್ಥೆಯ ಕುರಿತು ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಡಿಜಿಶಾಲಾ ಟಿವಿ ಪ್ರಾರಂಭದಲ್ಲಿ ಇಂಗ್ಲಿಷ್ಮತ್ತು ಹಿಂದಿ ಭಾಷೆಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡಲಿದೆ. ಡಿಟಿಎಚ್ಮೂಲಕ ಉಚಿತವಾಗಿ ಚಾನೆಲ್ಪ್ರಸಾರ ಲಭ್ಯವಾಗಲಿದೆ. ನೋಟು ರದ್ದತಿಯ ಬಳಿಕ ಡಿಜಿಟಲ್ಪಾವತಿ ವ್ಯವಸ್ಥೆಯ ಬಳಕೆ ಹೆಚ್ಚಳವಾಗಿದೆ. ಒಂದು ತಿಂಗಳಲ್ಲಿ ವಾಲೆಟ್ಬಳಕೆದಾರರ ಸಂಖ್ಯೆ 17 ಲಕ್ಷದಿಂದ 63 ಲಕ್ಷಕ್ಕೆ ಹಾಗೂ ಪಾಯಿಂಟ್ಆಫ್ಸೇಲ್‌(ಪಿಒಎಸ್‌) ನಿತ್ಯ ಬಳಕೆ 50.2 ಲಕ್ಷದಿಂದ 98.1 ಕೋಟಿಗೆ ಏರಿಕೆ ಕಂಡಿದೆ ಎಂದು ಸಚಿವ ರವಿ ಶಂಕರ್ಪ್ರಸಾದ್ತಿಳಿಸಿದರು.
 2016: ಚೆನ್ನೈ: ಚೆನ್ನೈ ಮತ್ತು ವೆಲ್ಲೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮೂವರು ಪ್ರಭಾವಿ ಉದ್ಯಮಿಗಳ ನಿವಾಸದ ಮೇಲೆ ದಾಳಿ ನಡೆಸಿ 106 ಕೋಟಿ ರೂಪಾಯಿ ನಗದು ಮತ್ತು 127 ಕೆಜಿ ಚಿನ್ನ ವಶ ಪಡಿಸಿಕೊಂಡರು.  ಹೀಗೆ ಪತ್ತೆಯಾದ ಹಣದಲ್ಲಿ 10 ಕೋಟಿ ರೂಪಾಯಿಗಳು ಹೊಸ ನೋಟುಗಳು. ಉಳಿದವು 500 ಮತ್ತು 1000 ಮುಖಬೆಲೆ ನೋಟುಗಳಾಗಿವೆ ಎಂದು  ಅಧಿಕಾರಿಗಳು ಹೇಳಿದರು. ಚೆನ್ನೈ ಮತ್ತು ವೆಲ್ಲೂರಿನಲ್ಲಿ ಆದಾಯ ತೆರಿಗೆ ಇಲಾಖೆಯ ಸುಮಾರು 100 ಅಧಿಕಾರಿಗಳು ಏಕಕಾಲಕ್ಕೆ 8 ಪ್ರದೇಶಗಳಲ್ಲಿ ದಾಳಿ ನಡೆಸಿದ್ದರು. ಪ್ರಕರಣದಲ್ಲಿ ಶೇಖರ್ ರೆಡ್ಡಿ ಮತ್ತು ಶ್ರೀನಿವಾಸ್ ರೆಡ್ಡಿ (ಮರಳು ಗಣಿಗಾರಿಕೆ) ಪ್ರಧಾನ ಆರೋಪಿಗಳು. ಇನ್ನೊಬ್ಬ ವ್ಯಕ್ತಿ ಪ್ರೇಮ್, ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಲಾಯಿತು. ತಿರುಪತಿ ತಿರುಮಲ ದೇವಾಲಯದ ಟ್ರಸ್ಟ್ ಸದಸ್ಯರಾಗಿರುವ ಶೇಖರ್ ರೆಡ್ಡಿ ತಮಿಳುನಾಡು ಸರ್ಕಾರದ ಹಿರಿಯ ನೇತಾರರೊಂದಿಗೆ ನಿಕಟ ಸಂಪರ್ಕ ಹೊಂದಿದವರು.  ಕಳೆದ ತಿಂಗಳು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಗ ಶೇಖರ್ ರೆಡ್ಡಿ ಆಸ್ಪತ್ರೆಗೆ ಪ್ರಸಾದ ತೆಗೆದುಕೊಂಡು ಹೋಗಿ ಜಯಾ ಅವರನ್ನು ಭೇಟಿ ಮಾಡಿದ್ದರು. ಜಯಲಲಿತಾ ನಿಧನರಾದ ನಂತರ ಮುಖ್ಯಮಂತ್ರಿಯಾದ  ಪನ್ನೀರ್ಸೆಲ್ವಂ ಜತೆಗೂ ರೆಡ್ಡಿ ಆಪ್ತ ಸಂಬಂಧ  ಬೆಳೆಸಿಕೊಂಡರು. ಕಳೆದ ವರ್ಷ ಪನ್ನೀರ್ ಸೆಲ್ವಂ ತಿರುಪತಿ ದೇಗುಲಕ್ಕೆ ಭೇಟಿ ನೀಡಿದಾಗ ಶೇಖರ್ ರೆಡ್ಡಿ  ಜತೆಗಿರುವ ಫೋಟೋ ಎಲ್ಲಡೆ ಹರಿದಾಡಿತು. ಈ  ಬಗ್ಗೆ ಪ್ರತಿಕ್ರಿಯಿಸಿದ ಎಐಎಡಿಎಂಕೆ ಮೂಲಗಳು, ಶೇಖರ್ ಟ್ರಸ್ಟ್ ಸದಸ್ಯರಾಗಿದ್ದ ಕಾರಣ ಅವರು ಸಚಿವರನ್ನು ಸ್ವಾಗತಿಸುವ ಕಾರ್ಯ ಮಾತ್ರ ಮಾಡಿದ್ದರು ಎಂದು ಹೇಳಿದವು.
2016: ನವದೆಹಲಿ: ಚಿತ್ರಮಂದಿರಗಳಲ್ಲಿ ಚಲನಚಿತ್ರ ಆರಂಭಕ್ಕೆ ಮುನ್ನ ರಾಷ್ಟ್ರಗೀತೆಯನ್ನು ನುಡಿಸಬೇಕು ಮತ್ತು ಸಂದರ್ಭದಲ್ಲಿ ಎಲ್ಲರೂ ಎದ್ದು ನಿಂತು ಗೌರವಿಸಬೇಕು ಎಂದು ತೀರ್ಪು ನೀಡಿದ್ದ ಸುಪ್ರಿಂಕೋರ್ಟ್ ತೀರ್ಪಿನ ಪಾಲನೆ ವಿಚಾರದಲ್ಲಿ ದಿವ್ಯಾಂಗರಿಗೆ ವಿನಾಯ್ತಿ ನೀಡಿತು. ದಿವ್ಯಾಂಗರಿಗೆ ರಾಷ್ಟ್ರಗೀತೆ ನುಡಿಸುವ ಸಂದರ್ಭದಲ್ಲಿ ಎದ್ದು ನಿಂತು ಗೌರವಿಸುವುದರಿಂದ ವಿನಾಯ್ತಿ ನೀಡಲಾಗಿದೆ ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಬಳಿಕ ನೀಡಿದ ತಮ್ಮ ಆದೇಶದಲ್ಲಿ ತಿಳಿಸಿದರು. ರಾಷ್ಟ್ರಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲೂ ಚಲನ ಚಿತ್ರ ಪದರ್ಶನ ಆರಂಭಕ್ಕೆ ಮುನ್ನ ಕಡ್ಡಾಯವಾಗಿ ರಾಷ್ಟ್ರಗೀತೆಯನ್ನು ನುಡಿಸಬೇಕು ಮತ್ತು ರಾಷ್ಟ್ರಗೀತೆ ನುಡಿಸುವಾಗ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಬೇಕು. ವೇಳೆಗೆ ಪರದೆಯಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸಬೇಕು ಎಂದು ಸುಪ್ರೀಂಕೋರ್ಟ್ ಆಜ್ಞಾಪಿಸಿತ್ತು. ರಾಷ್ಟ್ರಗೀತೆ ಮೊಳಗುವಾಗ ಪ್ರೇಕ್ಷಕರು ಸಿನಿಮಾ ಹಾಲ್ನಿಂದ ಹೊರಹೋಗದಂತೆ ತಡೆಯಲು ಬಾಗಿಲುಗಳಿಗೆ ಚಿಲಕ ಹಾಕಿ ಎಂದು ಹೇಳಿತ್ತು. ಆದರೆ 1997ರಲ್ಲಿ ದೆಹಲಿಯ ಉಪಹಾರ್ ಚಿತ್ರಮಂದಿರದಲ್ಲಿ ನಡೆದ ದುರಂತವನ್ನು ಉಲ್ಲೇಖಿಸಿ ವಿಮರ್ಶಕರು ಸುಪ್ರೀಂ ಆದೇಶವನ್ನು ಪ್ರಶ್ನಿಸಿದ್ದರು. ಹಾಗಾಗಿ, ವಾರಗಳ ಹಿಂದೆ ನೀಡಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್ ಕೆಲವು ಮಾರ್ಪಾಡುಗಳನ್ನು ಮಾಡಿತು.
 2016: ಚೆನ್ನೈ: ವಿಧಿವಶರಾದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಚಿಕಿತ್ಸೆ ಮತ್ತು ಸಾವಿನ ಬಗ್ಗೆ ಉತ್ತರ ಸಿಗದೇ ಇರುವ ಹಲವಾರು ಪ್ರಶ್ನೆಗಳಿವೆ. ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಎಂದು ಆಗ್ರಹಿಸಿ ತಮಿಳು ನಟಿ ಗೌತಮಿ ತಡಿಮಲ್ಲ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರು. 68 ಹರೆಯದ ಜೆ. ಜಯಲಲಿತಾ ಅವರು ಹಿಂದಿನ ದಿನ ಆಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದರು, 74 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಜಯಾ ಡಿಸೆಂಬರ್ 5ರಂದು ತೀವ್ರ ಹೃದಯಸ್ತಂಬನಕ್ಕೊಳಗಾಗಿ ಡಿಸೆಂಬರ್ 6 ರಂದು ನಿಧನರಾಗಿದ್ದರು. ಅಪೋಲೊ ಆಸ್ಪತ್ರೆ ವೈದ್ಯರು ರಾತ್ರಿ ನಿಧನ ವಾರ್ತೆ ಪ್ರಕಟಿಸಿದ್ದು, ಅದೇ ದಿನ ರಾತ್ರಿ .ಪನ್ನೀರ್ ಸೆಲ್ವಂ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಜಯಲಲಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಅವರ ಚಿಕಿತ್ಸೆಯ ಬಗ್ಗೆ ಮಾಹಿತಿ ಬಹಿರಂಗ ಪಡಿಸಿಲ್ಲ. ಆಕೆ ಗುಣಮುಖಗಾರಿದ್ದಾರೆ ಎಂದು ಹೇಳಲಾಗಿದ್ದರೂ, ನಂತರ ಸಾವಿನ ಸುದ್ದಿ ಬಹಿರಂಗಪಡಿಸಲಾಗಿತ್ತು. ನಡುವೆ ಅವರ ಅನಾರೋಗ್ಯದ ಬಗ್ಗೆ  ಯಾವುದೇ ವಿಷಯಗಳನ್ನು ಬಹಿರಂಗ ಪಡಿಸದೇ ಇದ್ದುದರಿಂದ ಕೆಲವೊಂದು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಕೊಂಡಿದೆ ಎಂದು ಗೌತಮಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದರು. ಸೆಪ್ಟೆಂಬರ್ 22ಕ್ಕೆ ಆಸ್ಪತ್ರೆಗೆ ದಾಖಲಾದ ನಂತರ ಜಯಾ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ, ಅಪೋಲೊ ಆಸ್ಪತ್ರೆಯಲ್ಲಿ ಜಯಾ ಅವರ ಆಪ್ತರಿಗಷ್ಟೇ ಅವರನ್ನು ಭೇಟಿ ಮಾಡಲು ಅನುಮತಿ ನೀಡಲಾಗಿತ್ತು. ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ಜಯಾ ಅವರ ಚಿಕಿತ್ಸೆಯನ್ನು ಅಷ್ಟೊಂದು ಗೌಪ್ಯವಾಗಿ ಇಡಲು ಕಾರಣವೇನು? ಜಯಾ ಅವರನ್ನು ಭೇಟಿ ಮಾಡದಂತೆ ತಡೆವ ಅಧಿಕಾರ ಹೊಂದಿದವರು ಯಾರು? ಜಯಾ ಅವರ ಚಿಕಿತ್ಸೆ ಮತ್ತು ಆರೈಕೆ ಮಾಡುತ್ತಿದ್ದವರು ಯಾರು? ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು? ಪ್ರಶ್ನೆಗಳನ್ನು ತಮಿಳುನಾಡು ಜನರು ಕೇಳುತ್ತಿದ್ದಾರೆ. ಪ್ರಶ್ನೆಗಳನ್ನು ನಾನು ನಿಮ್ಮ ಮುಂದೆ ತಂದಿಡುತ್ತಿದ್ದೇನೆ ಎಂದು ಮೋದಿಯವರಿಗೆ ಬರೆದ ಪತ್ರದಲ್ಲಿ ಗೌತಮಿ ತಿಳಿಸಿದರು.
2016: ನವದೆಹಲಿ: ದೆಹಲಿಯ ಚಾಂದ್ನಿ ಚೌಕ್ನಲ್ಲಿರುವ ಆಕ್ಸಿಸ್ ಬ್ಯಾಂಕ್ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 44 ನಕಲಿ ಖಾತೆಗಳು ಪತ್ತೆಯಾದವು. ಈ ಬ್ಯಾಂಕ್ ಖಾತೆಗಳಲ್ಲಿ ನವೆಂಬರ್ 8ನೇ ತಾರೀಖಿನ ನಂತರ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳಲ್ಲಿ ಹಣ ಜಮೆ ಆಗಿದ್ದು, ಒಟ್ಟು ಮೌಲ್ಯ 100 ಕೋಟಿ ರೂಪಾಯಿ ಇದೆ ಎಂದ ಇದೆ ಎಂದು ಐಟಿ ಅಧಿಕಾರಿಗಳು ಹೇಳಿದರು. 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವುದಾಗಿ ನವೆಂಬರ್ 8ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ನಂತರ ಶಾಖೆಯಲ್ಲಿ 450 ಕೋಟಿ ರೂಪಾಯಿ ಜಮೆ ಆಗಿತ್ತು. ನಕಲಿ ದಾಖಲೆ ಪತ್ರಗಳನ್ನು ಬಳಸಿ 44 ನಕಲಿ ಖಾತೆಗಳನ್ನು ಸೃಷ್ಟಿಸಿದ್ದು, ಹೂಡಿಕೆದಾರರು ಹಣದಿಂದ ಚಿನ್ನ ಖರೀದಿಸಲು ಬಳಸಲು ಬಯಸಿರಬಹುದು ಎಂದು ಶಂಕಿಸಲಾಯಿತು.
ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಹ್ಯಾವ್ಲೋಕ್ ದ್ವೀಪದಲ್ಲಿ ಭಾರಿ ಮಳೆ, ಗಾಳಿಯ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಸುಮಾರು 1000ಕ್ಕೂ ಹೆಚ್ಚು ಮಂದಿ ಪ್ರವಾಸಿಗರ ಪೈಕಿ 425 ಮಂದಿಯನ್ನು ಭಾರತೀಯ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ದ್ವೀಪದಿಂದ ತೆರವುಗೊಳಿಸುವ ಮೂಲಕ ರಕ್ಷಿಸಿದವು. ಚಂಡಮಾರುತದ ಪರಿಣಾಮವಾಗಿ 1000ಕ್ಕೂ ಹೆಚ್ಚು ಪ್ರವಾಸಿಗಳು ದ್ವೀಪದಲ್ಲಿ ಸಿಕ್ಕಿಹಾಕಿಕೊಂಡ ಬೆನ್ನಲ್ಲೇ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಎಲ್ಲ ಪ್ರವಾಸಿಗಳನ್ನೂ ದ್ವೀಪದಲ್ಲಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು. ಆದರೆ ಭಾರಿ ಮಳೆ ಬಿರುಗಾಳಿ ಕಾರಣ ಅವರನ್ನು ಅಲ್ಲಿಂದ ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ. 425 ಮಂದಿ ಪ್ರವಾಸಿಗರನ್ನು (ಈದಿನ ದ್ವೀಪದಿಂದ ತೆರವುಗೊಳಿಸಲಾಯಿತು ಎಂದು ನೌಕಾಪಡೆ ಮೂಲಗಳು ತಿಳಿಸಿದವು.
 2016: ಸಿಯೋಲ್: ದಕ್ಷಿಣ ಕೊರಿಯಾದ ಅಧ್ಯಕ್ಷೆ ಪಾರ್ಕ್ ಜುಯೇನ್ ಹೇ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೋಷಾರೋಪ ನಿರ್ಣಯವನ್ನು ಅಲ್ಲಿನ ಸಂಸತ್ತಿನಲ್ಲಿ ಅಂಗೀಕರಿಸಿ, ಅವರ ಅಧಿಕಾರಗಳನ್ನು ತಾತ್ಕಾಲಿಕವಾಗಿ ಪ್ರಧಾನ ಮಂತ್ರಿಗೆ ವರ್ಗಾಯಿಸಿತು. ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿದ ಪಾರ್ಕ್ ಜುಯೇನ್ ವಿರುದ್ಧ ರಾಜಧಾನಿ ಸಿಯೋಲ್ ಸೇರಿದಂತೆ ಮತ್ತಿತರ ನಗರಗಳಲ್ಲಿ ಭಾರಿ ಪ್ರತಿಭಟನೆ ಸ್ಪೋಟಿಸಿತ್ತು. ಸಂಸತ್ ನಿರ್ಣಯವನ್ನು ಅಂಗೀಕರಿಸಿ ಪಾರ್ಕ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಶಾಶ್ವತವಾಗಿ ತೆಗೆದುಹಾಕುವ ನಿರ್ಧಾರವನ್ನು ಅಲ್ಲಿನ ಉನ್ನತ ನ್ಯಾಯಾಲಯ ಕೈಗೊಳ್ಳಬೇಕಾಗುತ್ತದೆ. 300 ಸಂಸದರ ಪೈಕಿ 234 ಮತಗಳು ಜುಯೇನ್ ವಿರುದ್ಧ ದೋಷಾರೋಪ ನಿರ್ಣಯದ ಪರವಾಗಿ ಚಲಾವಣೆಗೊಂಡವು. ದಕ್ಷಿಣ ಕೊರಿಯಾದ ಇತಿಹಾಸದಲ್ಲೇ ಮೊದಲ ಬಾರಿಗೆ ಅಧ್ಯಕ್ಷರೊಬ್ಬರು ಭ್ರಷ್ಟಾಚಾರದ ಆರೋಪ ಹೊತ್ತು ಅಧಿಕಾರ ಕಳೆದುಕೊಳ್ಳುವ ಕೊಂಡರು.. ಜುಯೇನ್ ಅಧ್ಯಕ್ಷರಾಗಿ 4 ವರ್ಷ ಅಧಿಕಾರ ಚಲಾಯಿಸಿದ್ದರು.
 2016: ನವದೆಹಲಿ: ಸಾಲ ಮರುಪಾವತಿ ಮಾಡದೆ ಲಂಡನ್ಗೆ ಹೋಗಿ ನೆಲೆಸಿದ ಉದ್ಯಮಿ ವಿಜಯ್ ಮಲ್ಯ ಅವರ ಟ್ವಿಟರ್ ಮತ್ತು ಇಮೇಲ್ ಖಾತೆಗಳನ್ನು ಹ್ಯಾಕ್ ಮಾಡಿ ಹಲವು ಮಹತ್ವಪೂರ್ಣ ಮಾಹಿತಿಗಳನ್ನು ಬಹಿರಂಗ ಪಡಿಸಲಾಯಿತು.  ಮಲ್ಯ ಅವರ ಪಾಸ್ಪೋರ್ಟ್ ನಂ, ಫೋನ್ ನಂಬರುಗಳು, ಹೊರದೇಶಗಳಲ್ಲಿ ಮಾಡಿರುವ ಹೂಡಿಕೆಯ ವಿವರ, ಬ್ಯಾಂಕ್ ಅಕೌಂಟುಗಳ ವಿವರ ಮತ್ತು ಮಲ್ಯ ಬಳಿ ಇರುವ ಐಷಾರಾಮಿ ಕಾರುಗಳ ವಿವರವನ್ನು ಹ್ಯಾಕರುಗಳು ಸೋರಿಕೆ ಮಾಡಿದರು. ನನ್ನ ಟ್ವಿಟರ್ ಮತ್ತು ಇಮೇಲ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ. ಇದನ್ನು ಆದಷ್ಟು ಬೇಗ ಸರಿ ಪಡಿಸಲಾಗುವುದು. ಲೀಜನ್ ಎಂಬಾತ ಹ್ಯಾಕ್ ಮಾಡಿರುವುದಾಗಿ ತಿಳಿಸಿದ್ದಾನೆ. ಮತ್ತು ಮತ್ತಷ್ಟು ಮಾಹಿತಿ ಬಹಿರಂಗ ಪಡಿಸುವುದಾಗಿ ನನ್ನನ್ನು ಹೆದರಿಸುತ್ತಿದ್ದಾನೆ ಎಂದು ಮಲ್ಯ ಹಿಂದಿನ ದಿನ  ಬೆಳಗ್ಗೆ ಟ್ವಿಟ್ ಮಾಡಿ ಮಾಹಿತಿ ನೀಡಿದ್ದರು. ಲೀಜನ್ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಬಹಿರಂಗ ಪಡಿಸುವುದಾಗಿ ತಿಳಿಸಿದ್ದರು. ಕೆಲ ದಿನಗಳ ಹಿಂದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು.
 2016: ನವದೆಹಲಿ: ಕೇಂದ್ರ ಸರ್ಕಾರ ಪ್ಲಾಸ್ಟಿಕ್ ನೋಟುಗಳನ್ನು ಮುದ್ರಿಸುವ ನಿರ್ಧಾರ ಕೈಗೊಂಡಿತು.  ಇದಕ್ಕಾಗಿ ಅಗತ್ಯ ಸಾಮಾಗ್ರಿಗಳನ್ನು ಸಂಗ್ರಹಿಸುತ್ತಿರುವುದಾಗಿ ಸಂಸತ್ತಿನಲ್ಲಿ ಮಾಹಿತಿ ನೀಡಿತು. ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರದ ವಿತ್ತ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು, ರೂಪಾಯಿ ನೋಟುಗಳನ್ನು ಪ್ಲಾಸ್ಟಿಕ್ ಅಥವಾ ಪಾಲಿಮರ್ನಿಂದ ಮುದ್ರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಅಗತ್ಯ ಸಾಮಾಗ್ರಿಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಪ್ಲಾಸ್ಟಿಕ್ ನೋಟುಗಳು ಪೇಪರ್ ನೋಟುಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆ. ಹರಿದು ಹೋಗುವುದಿಲ್ಲ, ಪೇಪರ್ ನೋಟುಗಳಿಗಿಂತ ಸ್ವಚ್ಛವಾಗಿ ಇರುತ್ತವೆ. ಪ್ಲಾಸ್ಟಿಕ್ ನೋಟುಗಳನ್ನು ನಕಲು ಮಾಡುವುದು ಅಷ್ಟು ಸುಲಭಸಾಧ್ಯವಲ್ಲ. ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆ ತರಲಾಗಿದೆ ಎಂದು ಮೇಘ್ವಾಲ್ ವಿವರಿಸಿದರು. ಕೆಲವು ವರ್ಷಗಳಿಂದ ಪೇಪರ್ ನೋಟುಗಳ ಬದಲಾಗಿ ಪ್ಲಾಸ್ಟಿಕ್ ನೋಟುಗಳ ಚಲಾವಣೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸ್ತಾಪ ಮಾಡುತ್ತಲೇ ಬಂದಿದೆ. 10 ರೂಪಾಯಿ ಮುಖಬೆಲೆಯ 10 ಲಕ್ಷ ಪ್ಲಾಸ್ಟಿಕ್ ನೋಟುಗಳನ್ನು ಮೈಸೂರು ಸೇರಿದಂತೆ ಆಯ್ದ 5 ನಗರಗಳಲ್ಲಿ ಪ್ರಾಯೋಗಿಕವಾಗಿ ಚಲಾವಣೆಗೆ ತರಲಾಗುವುದು ಎಂದು ಕೇಂದ್ರ ಸರ್ಕಾರ 2014 ಫೆಬ್ರವರಿಯಲ್ಲಿ ತಿಳಿಸಿತ್ತು. ಕೊಚ್ಚಿ, ಜೈಪುರ, ಶಿಮ್ಲಾ ಮತ್ತು ಭುವನೇಶ್ವರ ಪ್ರದೇಶಗಳನ್ನು ಪ್ರಾಯೋಗಿಕ ಪ್ಲಾಸ್ಟಿಕ್ ನೋಟುಗಳ ಚಲಾವಣೆಗೆ ಆಯ್ಕೆ ಮಾಡಲಾಗಿತ್ತು
2008: ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ದಾಳಿ ನಡೆಸಿದ ಎಲ್ಲಾ 10 ಉಗ್ರಗಾಮಿಗಳ ಗುರುತು ಪತ್ತೆಯಾಯಿತು. ಇವರೆಲ್ಲರೂ ಪಾಕಿಸ್ಥಾನ ಮೂಲದವರೇ ಎಂಬುದನ್ನು ದೃಢಪಡಿಸಲು ಹಲವಾರು ಸುಳಿವುಗಳು ಪೊಲೀಸರಿಗೆ ಲಭ್ಯವಾದವು. ಎಲ್ಲಾ 10 ಮಂದಿಯ ತವರೂರುಗಳನ್ನು ಸಹ ಪತ್ತೆ ಹಚ್ಚುವಲ್ಲಿ ಅವರು ಯಶಸ್ವಿಯಾದರು. ಎಲ್ಲಾ ದುಷ್ಕರ್ಮಿಗಳೂ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯಕ್ಕೆ ಸೇರಿದವರು. ಏಕೈಕ ಬಂಧಿತ ಉಗ್ರ ಅಜ್ಮಲ್ ಕಸಾಬ್ ಸೇರಿದಂತೆ ಇತರ ಮೂವರ ಜಿಲ್ಲೆ ಒಕಾರ. ಇನ್ನು ಮೂವರು ಮುಲ್ತಾನ್, ಇಬ್ಬರು ಫೈಸಾಬ್ಲಾದ್ ಮತ್ತು ತಲಾ ಒಬ್ಬರು ಸಿಯಾಲ್‌ ಕೋಟ್ ಮತ್ತು ದೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯವರು.

2008: ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಕಮಾಂಡರ್ ಝಾಕೀರ್ ರೆಹಮಾನ್ ಲಖ್ವಿಯನ್ನು ಹಿಂದಿನ ದಿನ ಬಂಧಿಸಲಾಗಿದ್ದರೂ, ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ. ಆತನ ಭಯೋತ್ಪಾದಕ ಕೃತ್ಯಗಳ ಬಗ್ಗೆ ಭಾರತ ಸಾಕ್ಷ್ಯಗಳನ್ನು ಒದಗಿಸಿದರೆ ಮಾತ್ರ ಅವನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪಾಕಿಸ್ಥಾನ ಹೇಳಿತು. ಲಖ್ವಿಯನ್ನು ಬಂಧಿಸಿರುವುದು ನಿಜ. ಆದರೆ ಭಾರತ ಆತನ ವಿರುದ್ಧ ಸೂಕ್ತ ಪುರಾವೆಗಳನ್ನು ಒದಗಿಸಿದರೆ ಮಾತ್ರ ವಿಚಾರಣೆಗೆ ಒಳಪಡಿಸಲಾಗುವುದು. ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ಥಾನದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

2008: ಕ್ರಿಮಿನಲ್ ಹಿನ್ನೆಲೆಯುಳ್ಳ ಕಳಂಕಿತ ಸಚಿವರನ್ನು ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆದೇಶಿಸುವಂತೆ ಹಾಗೂ ಈ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತು. ಈ ಪ್ರಕರಣವು ರಾಜಕೀಯ ಪ್ರೇರಿತವಾದಂತೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಇದನ್ನು ಮಾನ್ಯ ಮಾಡಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿತು.

2008: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಗೌರ್ ಗೋವಿಂದ್‌ಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಸತತ ಒಂಬತ್ತನೇ ಬಾರಿ ವಿಧಾನ ಸಭೆಗೆ ಪ್ರವೇಶಿಸಿ ದಾಖಲೆ ನಿರ್ಮಿಸಿದರು. ಬಾಬುಲಾಲ್ ಗೌರ್ 1974ರಲ್ಲಿ ಪ್ರಥಮ ಬಾರಿ ಭೊಪಾಲಿನ ದಕ್ಷಿಣ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದರು. ನಂತರ 1977ರಲ್ಲಿ ಭಾರತೀಯ ಜನತಾ ಪಕ್ಷದ ಗೋವಿಂದ್‌ಪುರ ಕ್ಷೇತ್ರ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಇಳಿದಿದ್ದರು.

2008: ಮಾದಕ ದ್ರವ್ಯ ಕಳ್ಳಸಾಗಣೆ ಆರೋಪದ ಮೇಲೆ ಗಾಟ್ವಿಕ್ ವಿಮಾನ ನಿಲ್ದಾಣದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕ್ರಿಸ್ ಲೂಯಿಸ್ ಅವರನ್ನು ಬಂಧಿಸಲಾಯಿತು. 2 ಸಾವಿರ ಯೂರೊ ಮೌಲ್ಯದ ಕೊಕೇನನ್ನು ಅವರಿಂದ ವಶ ಪಡಿಸಿಕೊಳ್ಳಲಾಯಿತು. 40 ವರ್ಷ ವಯಸ್ಸಿನ ಲೂಯಿಸ್ ಅವರು ದ್ರವ ರೂಪದಲ್ಲಿದ್ದ ನಾಲ್ಕು ಕೆಜಿ ಕೊಕೇನನ್ನು ಹಣ್ಣಿನ ಡಬ್ಬದೊಳಗೆ ಇಟ್ಟು ಕಳ್ಳ ಸಾಗಣೆ ಮಾಡುತ್ತಿದ್ದರು ಎಂದು ಲೂಯಿಸ್ ಅವರನ್ನು ಬಂಧಿಸಿದ ಬ್ರಿಟನ್ ಬಾರ್ಡರ್ ಏಜೆನ್ಸಿ ಸಿಬ್ಬಂದಿ ತಿಳಿಸಿದರು. ಲೂಯಿಸ್ ಅವರೊಂದಿಗಿದ್ದ ಬ್ಯಾಸ್ಕೆಟ್‌ಬಾಲ್ ಆಟಗಾರ ಚಡ್ ಕಿರ್ನೊನ್ ಅವರನ್ನೂ ಬಂಧಿಸಲಾಯಿತು.

2008: ಫಿರೋಜಾಬಾದಿನ ಮಖಾನಪುರ ಪೊಲೀಸ್ ಠಾಣೆ ವ್ಯಾಪ್ತಿಯ ರುಪ್ಸಾಪುರದ ಬಳಿ ಬಸ್ಸಿನಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ 40 ಮಂದಿ ಸಜೀವ ದಹನಗೊಂಡು, ಇತರ 30 ಮಂದಿಗೆ ಗಂಭೀರವಾದ ಸುಟ್ಟ ಗಾಯಗಳಾದವು. ಮಥುರಾದ ಜೈ ಗುರುದೇವ ಆಶ್ರಮದ ಸತ್ಸಂಗದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತು.

2007: ಪಾಕಿಸ್ಥಾನ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನ ಭಾರತದ ಬ್ಯಾಟ್ಸ್ ಮನ್ನರು ಕೆಲವು ದಾಖಲೆಗಳನ್ನು ಅಳಿಸಿಹಾಕಿದರೆ, ಎರಡನೇ ದಿನ ಮತ್ತೊಂದಷ್ಟು ದಾಖಲೆಗಳನ್ನು ಕಡತದಿಂದ ಕಿತ್ತುಹಾಕಿದರು. ಮೊದಲದಿನ ಯುವರಾಜ್ ಮತ್ತು ಸೌರವ್ ಗಂಗೂಲಿ ಸೇರಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ಅದೇ ಪ್ರದರ್ಶನವನ್ನು ಗಂಗೂಲಿ ಎರಡನೇ ದಿನವಾದ ಈದಿನವೂ ಮುಂದುವರೆಸಿದರು. ಇರ್ಫಾನ್ ಪಠಾಣ್ ಅವರು ಗಂಗೂಲಿಗೆ ಸಾಥ್ ನೀಡಿದರು. ಭಾರತ ಮೊದಲ ಇನಿಂಗ್ಸಿನಲ್ಲಿ ಪೇರಿಸಿದ 626 ರನ್ನುಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡವೊಂದು ದಾಖಲಿಸಿದ ಅತಿದೊಡ್ಡ ಮೊತ್ತವಾಯಿತು. ಸೌರವ್ ಗಂಗೂಲಿ ತಮ್ಮ ಟೆಸ್ಟ್ ಕ್ರಿಕೆಟ್ ಜೀವನದ ಮೊದಲ ದ್ವಿಶತಕ (239) ಗಳಿಸಿ ಮೆರೆದಾಡಿದರೆ, ಇರ್ಫಾನ್ ಪಠಾಣ್ (102) ಚೊಚ್ಚಲ ಶತಕ ಗಳಿಸಿದರು. 2004-05 ರಲ್ಲಿ ಪಾಕಿಸ್ಥಾನವು ಪೇರಿಸಿದ 570 ರನ್ನುಗಳು ಇಲ್ಲಿ ದಾಖಲಾದ ಈವರೆಗಿನ ಅತಿದೊಡ್ಡ ಮೊತ್ತವಾಗಿತ್ತು. 1993-94 ರಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟಿಗೆ 541 ರನ್ ಪೇರಿಸಿದ್ದು ಇಲ್ಲಿ ಭಾರತ ತಂಡದ ಈವರೆಗಿನ ಉತ್ತಮ ಮೊತ್ತವಾಗಿತ್ತು. ಈ ಸಲ ಅದೂ ಕೂಡ ದಾಖಲೆಯ ಪುಸ್ತಕದಿಂದ ಮರೆಯಾಯಿತು. ರನ್ನುಗಳ ಚಿತ್ತಾರ ಬಿಡಿಸಿದ ಕೋಲ್ಕತ್ತದ ಮಹಾರಾಜ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯಧಿಕ ರನ್ ಪೇರಿಸಿದ ಎಡಗೈ ಬ್ಯಾಟ್ಸ್ ಮನ್ ಎಂಬ ಗೌರವ ತಮ್ಮದಾಗಿಸಿದರು. ಇದರಿಂದ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ದಾಖಲೆ ಒಂದೇ ದಿನದಲ್ಲಿ ಅಳಿಸಿಹೋಯಿತು. ಪಂದ್ಯದ ಮೊದಲ ದಿನ ಯುವರಾಜ್ ಗಳಿಸಿದ್ದ 169 ರನ್ನುಗಳು ಎಡಗೈ ಬ್ಯಾಟ್ಸ್ ಮನ್ ಒಬ್ಬನ ಶ್ರೇಷ್ಠ ಪ್ರದರ್ಶನವಾಗಿತ್ತು. ಜೊತೆಗೆ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಎಡಗೈ ಬ್ಯಾಟ್ಸ್ ಮನ್ ಎನಿಸಿದರು. ಈ ಮೊದಲು ವಿನೋದ್ ಕಾಂಬ್ಳಿ ಅವರು 227 ರನ್ ಪೇರಿಸಿದ್ದರು. 239 ರನ್ ಗಳಿಸುವ ಮೂಲಕ ಟೆಸ್ಟ್ ಇನಿಂಗ್ಸ್ ಒಂದರಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತದ ಬ್ಯಾಟ್ಸ್ ಮನ್ನರ ಪಟ್ಟಿಯಲ್ಲಿ ಗಂಗೂಲಿ ಐದನೇ ಸ್ಥಾನ ಪಡೆದರು. ವೀರೇಂದ್ರ ಸೆಹ್ವಾಗ್ (309 ಮತ್ತು 254) ಮೊದಲ ಸ್ಥಾನದಲ್ಲಿದ್ದರೆೆ, ವಿವಿಎಸ್ ಲಕ್ಷ್ಮಣ್ (281), ರಾಹುಲ್ ದ್ರಾವಿಡ್ (270), ಸಚಿನ್ ತೆಂಡೂಲ್ಕರ್ (248 ಮತ್ತು 241) ಕ್ರಮವಾಗಿ ನಂತರದ ಮೂರು ಸ್ಥಾನಗಳಲ್ಲಿ ಇದ್ದಾರೆ. 1997ರಲ್ಲಿ ಶ್ರೀಲಂಕಾ ವಿರುದ್ಧ ಮುಂಬೈಯಲ್ಲಿ 173 ರನ್ ಗಳಿಸಿದ್ದು ಗಂಗೂಲಿಯ ಈವರೆಗಿನ ಅತ್ಯಧಿಕ ಮೊತ್ತವಾಗಿತ್ತು. ಮೊದಲ ದಿನ ಐದನೇ ವಿಕೆಟಿಗೆ 300 ರನ್ನುಗಳ ಜೊತೆಯಾಟ ನೀಡಿದ್ದ ಗಂಗೂಲಿ ಮತ್ತು ಯುವರಾಜ್ ಕೆಲವೊಂದು ದಾಖಲೆಗಳನ್ನು ಅಳಿಸಿಹಾಕಿದರು.

2007: ಖಂಡಾಂತರ ಭೂಸ್ತರಗಳ ಚಲನವಲನದಿಂದಾಗಿ ಭೂಕಂಪ ಹಾಗೂ ಜ್ವಾಲಾಮುಖಿ ಚಟುವಟಿಕೆಗಳ ತಾಣವಾಗಿರುವ ಪೆಸಿಫಿಕ್ ಸಾಗರದ ತಳದಲ್ಲಿ 187 ಕಿಮೀ ಒಳಗೆ, ಟೊಂಗಾದ ಕರಾವಳಿಯಾಚೆ ರಿಕ್ಟರ್ ಮಾಪಕದಲ್ಲಿ 7.6ರಷ್ಟು ತೀವ್ರತೆ ಹೊಂದಿದ್ದ ಪ್ರಬಲ ಭೂಕಂಪ ಈದಿನ ಮಧ್ಯಾಹ್ನ ಸಂಭವಿಸಿತು.

2007: ಅಮೆರಿಕ ನಿರ್ಮಿತ ಬಾಹ್ಯಾಕಾಶ ನೌಕೆ ಅಟ್ಲಾಂಟಿಸ್ ಉಡಾವಣೆಯನ್ನು ಫ್ಲೋರಿಡಾದ ಕೇಪ್ ಕೆನವರಾಲ್ನಲ್ಲಿ ಈದಿನ ಕೂಡಾ ಸ್ಥಗಿತಗೊಳಿಸಲಾಯಿತು. ನೌಕೆಯ ಹೈಡ್ರೋಜನ್ ಇಂಧನ ಟ್ಯಾಂಕಿನಲ್ಲಿ ಕಂಡು ಬಂದ ತಾಂತ್ರಿಕ ಸಮಸ್ಯೆಯಿಂದಾಗಿ ಉಡಾವಣೆ ಸಾಧ್ಯವಾಗಲಿಲ್ಲ. ಬೆಳಿಗ್ಗೆ ನಡೆದ ಪರೀಕ್ಷೆಗಳಲ್ಲಿ ಈ ತಾಂತ್ರಿಕ ಸಮಸ್ಯೆ ಬೆಳಕಿಗೆ ಬಂದ ಕಾರಣ ಉಡಾವಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದರು.

2007: ಬಿಜೆಪಿಯಿಂದ ಭಾರಿ ಒತ್ತಡ ಬಂದ ಹಿನ್ನೆಲೆಯಲ್ಲಿ, ಚುನಾವಣಾ ಪ್ರಚಾರ ಭಾಷಣದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು `ಸಾವಿನ ವ್ಯಾಪಾರಿ' ಎಂದು ತೆಗಳಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿತು.

2007: ತಮಿಳುನಾಡು ಪೊಲೀಸರು ಎಲ್ಟಿಟಿಇಯ ಕಡಲು ಪಡೆ ವಿಭಾಗದ ಹಿರಿಯ ನಾಯಕರಾದ ಜಯಕುಮಾರ್ (34), ಜೇಮ್ಸ್ (46) ಮತ್ತು ರವಿ ಕುಮಾರ್ (42) ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಹಿಂದಿನದಿನ ರಾತ್ರಿ ಬಂಧಿಸಿದರು. ಒಂದು ಅತ್ಯಾಧುನಿಕ ದೋಣಿ, ಈಜುಗಾರರ ಪಾದರಕ್ಷೆಗಳು ಇತ್ಯಾದಿಗಳನ್ನು ಶ್ರೀಲಂಕಾಗೆ ಕೊಂಡೊಯ್ಯುವ ಬಗ್ಗೆ ವ್ಯವಹರಿಸುವ ಸಲುವಾಗಿ ಅವರು ಚೆನ್ನೈಗೆ ಆಗಮಿಸಿದ್ದರು.

2007: ಕಾಶ್ಮೀರ ಪಂಡಿತನ ಅಂತ್ಯಸಂಸ್ಕಾರವನ್ನು ನೂರಾರು ಮುಸ್ಲಿಮರು ಶ್ರೀನಗರದ ಗಡೆರ್ಬಾಲ್ ಬಳಿ ನೆರವೇರಿಸಿದರು. ದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ಜಿಯಲಾಲ್ ರೈನಾ (85) ಅವರು ಹಿಂದಿನ ದಿನ ಶ್ರೀನಗರದ ಮಣಿಗಂ ಗಂಡರ್ಬಾಲಿನಲ್ಲಿ ನಿಧನರಾದರು. 1990ರಲ್ಲಿ ಆತನ ಕುಟುಂಬ ಸದಸ್ಯರು ಕಣಿವೆಯನ್ನು ತ್ಯಜಿಸಿ ಹೋಗಿದ್ದುದರಿಂದ ಅವರು ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮುಸ್ಲಿಂ ಬಾಂಧವರು ಆಗಮಿಸಿ ಅಂತ್ಯ ಸಂಸ್ಕಾರ ನಡೆಸಿದರು.

2007: ಏಷ್ಯಾ ಮತ್ತು ಯೂರೋಪಿನ ದೊಡ್ಡ ಮಾಧ್ಯಮ ಸಂಸ್ಥೆಯಾದ `ನ್ಯೂಸ್ ಕಾರ್ಪೊರೇಷನ್' ಮುಖ್ಯಸ್ಥನ ಹುದ್ದೆಗೆ ಮಾಧ್ಯಮ ದೊರೆ ರೂಪರ್ಟ್ ಮರ್ಡೋಕ್ ಅವರ ಪುತ್ರ ಜೇಮ್ಸ್ ಮರ್ಡೋಕ್ (34) ಅವರನ್ನು ನೇಮಕ ಮಾಡಲಾಯಿತು. ನ್ಯೂಸ್ ಇಂಟರ್ ನ್ಯಾಷನಲ್ ಸ್ಕೈ, ಸ್ಕೈ ಇಟಾಲಿಯಾ, ಸ್ಟಾರ್ ಸಮೂಹ ಹಾಗೂ ನ್ಯೂಸ್ ಕಾರ್ಪೊರೇಷನ್ ಯೂರೋಪ್' ಸಂಸ್ಥೆಗಳನ್ನು ಈ ಸಮೂಹ ಹೊಂದಿದೆ.

2006: ಭಾರತಕ್ಕೆ ಅಮೆರಿಕದ ಪರಮಾಣು ತಂತ್ರಜ್ಞಾನ ರಫ್ತಿಗೆ ವಿಧಿಸಲಾಗಿದ್ದ 32 ವರ್ಷಗಳ ನಿಷೇಧವನ್ನು ತೆರವುಗೊಳಿಸಲು ಅವಕಾಶ ಒದಗಿಸುವ ಚಾರಿತ್ರಿಕ ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಮಸೂದೆಗೆ ಕಾಂಗ್ರೆಸ್ಸಿನ ಬಳಿಕ ಅಮೆರಿಕದ ಸೆನೆಟ್ ಸದಸ್ಯರೂ ಈದಿನ ಸರ್ವಾನುಮತದ ಒಪ್ಪಿಗೆ ನೀಡಿದರು. ಕಾಂಗ್ರೆಸ್ ಹಿಂದಿನ ರಾತ್ರಿ 330- 59 ಮತಗಳಿಂದ ಅಂಗೀಕರಿಸಿದ ಮಸೂದೆಯನ್ನು ಸೆನೆಟ್ ಯಾವ ಚರ್ಚೆಯನ್ನೂ ನಡೆಸದೆ ಒಮ್ಮತದಿಂದ ಅಂಗೀಕರಿಸಿತು. ಈ ಒಪ್ಪಂದ ಜಾರಿಯೊಂದಿಗೆ 32 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ- ಅಮೆರಿಕ ನಡುವೆ ಪರಮಾಣು ತಂತ್ರಜ್ಞಾನ ವಹಿವಾಟು ನಡೆಯುವುದು. ಅಮೆರಿಕದ ಅಧ್ಯಕ್ಷ ಬುಷ್ ಮತ್ತು ಭಾರತದ ಪ್ರಧಾನಿ ಮನಮೋಹನ ಸಿಂಗ್ ಅವರು 2005ರ ಜುಲೈ ತಿಂಗಳಲ್ಲಿ ಈ ಚಾರಿತ್ರಿಕ ಒಪ್ಪಂದಕ್ಕೆ ಸಹಿ ಮಾಡಿದ್ದರು.

2006: ರಷ್ಯದ ಮಾಸ್ಕೊದ ಮಾದಕ ವಸ್ತು ಸೇವನೆ ವ್ಯಸನಿಗಳ ಪುನರ್ವಸತಿ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ ಸಂಭವಿಸಿ 45 ಮಂದಿ ಮಹಿಳೆಯರು ಸಜೀವವಾಗಿ ದಹನಗೊಂಡರು. ಐದು ಮಹಡಿಗಳ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಬೆಳಗಿನ ಜಾವ ಮೊದಲು ಬೆಂಕಿ ಕಾಣಿಸಿಕೊಂಡಿತು. ತುರ್ತು ನಿರ್ಗಮನದ ದ್ವಾರಗಳನ್ನೆಲ್ಲ ಮುಚ್ಚಿದ್ದುದರಿಂದ ಬೆಂಕಿಯಿಂದ ತಪ್ಪಿಸಿಕೊಳ್ಳಲು ದುರ್ದೈವಿಗಳಿಗೆ ಸಾಧ್ಯವಾಗಲಿಲ್ಲ. ಮೃತರಲ್ಲಿ ಬಹುತೇಕ ಮಂದಿ ಅಮಲು ಪದಾರ್ಥ ಮತ್ತು ಮದ್ಯ ವ್ಯಸನಿಗಳಾಗಿದ್ದು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ಇಬ್ಬರು ಸಿಬ್ಬಂದಿಯೂ ಸತ್ತವರಲ್ಲಿ ಸೇರಿದ್ದಾರೆ.

2006: ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ತನ್ನ ಕ್ಷಿಪಣಿ ಸರಣಿಯ ಮೂರನೆಯ ಕ್ಷಿಪಣಿ `ಘಜನಿ'ಯ ಪರೀಕ್ಷಾ ಉಡಾವಣೆಯನ್ನು ಪಾಕಿಸ್ಥಾನ ಯಶಸ್ವಿಯಾಗಿ ನಡೆಸಿತು. ಇದು ಕಡಿಮೆ ದೂರಕ್ಕೆ ಚಿಮ್ಮುವ ಕ್ಷಿಪಣಿಯಾಗಿದ್ದು, 290 ಕಿ.ಮೀ ದೂರ ಹಾರುವ ಸಾಮರ್ಥ್ಯ ಹೊಂದಿದೆ. ಭಾರತದ ಹಲವು ನಗರಗಳಿಗೆ ಬಂದು ಬೀಳುವ ಸಾಮರ್ಥ್ಯ ಇದಕ್ಕೆ ಇದೆ. ಪಾಕಿಸ್ಥಾನ ಈಗಾಗಲೇ ಘೋರಿ-1 ಮತ್ತು ಶಾಹೀನ್-1 ಎಂಬ ಎರಡು ಯುದ್ಧ ಕ್ಷಿಪಣಿಗಳ ಪರೀಕ್ಷಾ ಉಡಾವಣೆ ನಡೆಸಿದೆ.

2005: ಮೂಲಸೌಲಭ್ಯ ಅಭಿವೃದ್ಧಿ ಸೇರಿದಂತೆ ಶಿಕ್ಷಣ ಮತ್ತು ಎಲೆಕ್ಟ್ರಾನಿಕ್ ಆಡಳಿತ ಕ್ಷೇತ್ರದಲ್ಲಿ ಭಾರತದೊಂದಿಗೆ ಸಹಕಾರಕ್ಕೆ ಸಿದ್ಧ ಎಂಬುದಾಗಿ ಘೋಷಿಸಿದ ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್ ಗೇಟ್ಸ್ ಅವರು ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ರಾಷ್ಟ್ರವ್ಯಾಪಿ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

2005: ದೀರ್ಘಕಾಲ ಬಾಳ್ವಿಕೆ ಬರುವಂತಹ ದ್ವಿ ಆಯುಷ್ಯಿ ವಿದ್ಯುತ್ ಬಲ್ಬ್ ತಯಾರಿಸಿರುವುದಾಗಿ ಬೆಂಗಳೂರಿನ ಆರ್. ಪ್ರಕಾಶ್ ಪ್ರಕಟಿಸಿದರು. ಈ ಬಲ್ಬಿಗೆ ಚೆನ್ನೈಯ ಬೌದ್ಧಿಕ ಹಕ್ಕು ನೋಂದಣಿ ಕಚೇರಿಯಿಂದ ಮಾನ್ಯತೆ ದೊರಕಿದೆ. ಏಳು ವರ್ಷಗಳ ಸತತದ ಪ್ರಯತ್ನದಿಂದ ರೂಪುಗೊಂಡಿರುವ ಈ ಬಲ್ಪ್ ಮಾಮೂಲಿ ಬಲ್ಬಿಗಿಂತ ಹೆಚ್ಚು ಬಾಳಿಕೆ ಬರುತ್ತದೆ. ಸಾಮಾನ್ಯ ಬಲ್ಬ್ 1000 ಗಂಟೆ ಬಾಳಿಕೆ ಬಂದರೆ ಇದು 2000 ಗಂಟೆ ಬಾಳಿಕೆ ಬರುತ್ತದೆ ಎಂಬುದು ಪ್ರಕಾಶ್ ಪ್ರತಿಪಾದನೆ.

1997: ಜ್ಞಾನಪೀಠ ಪ್ರಶಸ್ತಿ ಪುರಸ್ಕತ, ಕನ್ನಡದ ಶ್ರೇಷ್ಠ ಸಾಹಿತಿ ಸಂಶೋಧಕ ಡಾ. ಕೆ. ಶಿವರಾಮ ಕಾರಂತ ಅವರು ಮಣಿಪಾಲದಲ್ಲಿ ನಿಧನರಾದರು. ದಕ್ಷಿಣ ಕನ್ನಡ ಜಿಲ್ಲೆಯ (ಈಗಿನ ಉಡುಪಿ ಜಿಲ್ಲೆ) ಕುಂದಾಪುರ ತಾಲ್ಲೂಕು ಕೋಟದಲ್ಲಿ 1902ರ ಅಕ್ಟೋಬರ್ 20ರಂದು ಜನಿಸಿದ ಕಾರಂತರು ಸಾಹಿತ್ಯದಲ್ಲಿ ಕೈಯಾಡಿಸದ ಕ್ಷೇತ್ರ. ಪ್ರಾಕಾರ ಇಲ್ಲ. ಪರಿಸರ, ಮಕ್ಕಳ ಸಾಹಿತ್ಯ, ವಿಜ್ಞಾನ ನಿಘಂಟು, ಕಾದಂಬರಿ, ಮತ್ತಿತರ ಪ್ರಾಕಾರಗಳಲ್ಲಿ 100ಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ಅವರು ಕನ್ನಡಕ್ಕೆ ನೀಡಿದ್ದಾರೆ. ಮೂಕಜ್ಜಿಯ ಕನಸುಗಳು ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು. ಸ್ವಾತಂತ್ರ್ಯ ಹೋರಾಟ, ಪರಿಸರ ಹೋರಾಟದಲ್ಲೂ ಪಾಲ್ಗೊಂಡಿದ್ದ ಅವರು ಸಿನಿಮಾ, ಯಕ್ಷಗಾನದಲ್ಲೂ ಪ್ರಯೋಗ ನಡೆಸಿದವರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು. ಮಕ್ಕಳಿಗಾಗಿ ಪುತ್ತೂರಿನಲ್ಲಿ ವಾಸ್ತವ್ಯ ಇದ್ದಾಗ ಬಾಲವನ ನಿರ್ಮಿಸಿದ್ದರು. ಅವರ ಚೋಮನ ದುಡಿ ಕೃತಿ ಚಲನಚಿತ್ರವಾಗಿ ಜನಪ್ರಿಯಗೊಂಡಿತ್ತು.

1992: ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ತಾವು ಬೇರ್ಪಟ್ಟಿರುವುದಾಗಿ ಪ್ರಕಟಿಸಿದರು.

1971: ಭಾರತ - ಪಾಕ್ ಸಮರ ಕಾಲದಲ್ಲಿ ಜಲಾಂತರ್ಗಾಮೀ ಶೋಧಕ ಹಡಗು `ಐ ಎನ್ ಎಸ್ ಖುಕಿ'್ರಗೆ ಅದು ಜಲಾಂತರ್ಗಾಮಿಯ ಶೋಧದಲ್ಲಿದ್ದಾಗ ಮೂರು ಸ್ಫೋಟಕಗಳು ಬಡಿದವು. ಹಡಗು ಅದರಲ್ಲಿದ್ದ 18 ಅಧಿಕಾರಿಗಳು ಮತ್ತು ಇತರ 176 ಮಂದಿಯೊಂದಿಗೆ ನೀರಿನಲ್ಲಿ ಮುಳುಗಿತು. ಸಮರ ಕಾಲದಲ್ಲಿ ಭಾರತದ ನೌಕಾ ಪಡೆ ಕಳೆದುಕೊಂಡ ಏಕೈಕ ನೌಕೆ ಇದು.

1946: ಭಾರತೀಯ ಸಂವಿಧಾನ ಸಭೆಯ ಸಮಾವೇಶ ಮೊತ್ತ ಮೊದಲ ಬಾರಿಗೆ `ಕಾನಸ್ಟಿಟ್ಯೂಷನ್ ಹಾಲ್' ನಲ್ಲಿ ನಡೆಯಿತು. ಈಗ ಇದನ್ನು ಸಂಸತ್ತಿನ `ಸೆಂಟ್ರಲ್ ಹಾಲ್' ಎಂಬುದಾಗಿ ಕರೆಯಲಾಗುತ್ತಿದೆ. 9 ಮಂದಿ ಮಹಿಳೆಯರು ಸೇರಿದಂತೆ 207ಮಂದಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸ್ವತಂತ್ರ ಭಾರತದ ಸಂವಿಧಾನದ ಕರಡು ನಿರ್ಮಿಸುವ ಕಾರ್ಯವನ್ನು ಪೂರ್ಣಗೊಳಿಸಲು 2 ವರ್ಷ 11 ತಿಂಗಳು, 17 ದಿನಗಳು ಬೇಕಾದವು. ಸಂವಿಧಾನವನ್ನು 1949ರ ನವೆಂಬರ್ 26ರಂದು ಅಂಗೀಕರಿಸಲಾಯಿತು. ಅದು 1950ರ ಜನವರಿ 26ರಂದು ಅನುಷ್ಠಾನಕ್ಕೆ ಬಂದಿತು.

1947: ಇಟಲಿ ಸಂಜಾತ ಭಾರತೀಯ ರಾಜಕಾರಣಿ, ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹುಟ್ಟಿದ ದಿನ. ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರನ್ನು ಮದುವೆಯಾದರು.

1945: ಚಿತ್ರನಟ, ರಾಜಕಾರಣಿ ಶತ್ರುಘ್ನ ಸಿನ್ಹ ಹುಟ್ಟಿದ ದಿನ.

1902: ಬ್ರಿಟಿಷ್ ಮುತ್ಸದ್ಧಿ ರಿಚರ್ಡ್ ಆಸ್ಟೆನ್ ಬಟ್ಲರ್ (1902-1982) ಹುಟ್ಟಿದ ದಿನ. ಅಂತಾರಾಷ್ಟ್ರೀಯ ಶಿಕ್ಷಣ ಸಂಘಟನೆಗೆ ಸಂಬಂಧಿಸಿದಂತೆ ಇವರು ನೀಡಿದ ಸಲಹೆಗಳು ಯುನೆಸ್ಕೊ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದವು.

1825: ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ (1857)ದ `ಹೀರೋ' ತುಲಾ ರಾಮ್ (1825-1863) ಹುಟ್ಟಿದ ದಿನ.

1754: ಪ್ರಾನ್ಸಿಸ್ ರಾಡನ್ ಹೇಸ್ಟಿಂಗ್ಸ್ (1754-1826) ಹುಟ್ಟಿದ ದಿನ. ಬ್ರಿಟಿಷ್ ಸೈನಿಕ ಹಾಗೂ ವಸಾಹತು ಆಡಳಿತಗಾರನಾದ ಈತ ಬಂಗಾಳದ ಗವರ್ನರ್ ಜನರಲ್ ಆಗಿ ಮರಾಠಾ ರಾಜ್ಯಗಳನ್ನು ಸೋಲಿಸಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಬಲ ಪಡಿಸಿದ.

1608: ಖ್ಯಾತ ಇಂಗ್ಲಿಷ್ ಕವಿ ಜಾನ್ ಮಿಲ್ಟನ್ (1608-1674) ಹುಟ್ಟಿದ ದಿನ. ಇಂಗ್ಲಿಷಿನಲ್ಲಿ ಇವರು ಬರೆದ ಕಾವ್ಯ `ಪ್ಯಾರಡೈಸ್ ಲಾಸ್ಟ್' ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು.

No comments:

Post a Comment